ಆ್ಯಪ್ನಗರ

ಎಲ್ಲರ ಒಳಿತಿಗೆ ಶ್ರಮಿಸುವುದೇ ನಿಜವಾದ ಜೀವನ: ಕುಲಕರ್ಣಿ

ಹುಬ್ಬಳ್ಳಿ: ಅನಾದಿ ಕಾಲದಿಂದಲೂ ಬ್ರಾಹ್ಮಣ ಸಮಾಜವು ಜಗತ್ತಿನ ಎಲ್ಲಜನರು ಸುಖವಾಗಿರಬೇಕು ಎಂದು ಬಯಸುತ್ತ ಬಂದಿದೆ. ಅದೇ ರೀತಿ ಸಮಾಜದ ಇಂದಿನ ಪೀಳಿಗೆಯೂ ಎಲ್ಲರ ಒಳಿತಿಗೆ ಶ್ರಮಿಸಬೇಕು ಎಂದು ಕೆಎಸ್‌ಎಫ್‌ಸಿ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಸುನೀಲ ಕುಲಕರ್ಣಿ ಹೇಳಿದರು.

Vijaya Karnataka 12 Oct 2019, 5:00 am
ಹುಬ್ಬಳ್ಳಿ: ಅನಾದಿ ಕಾಲದಿಂದಲೂ ಬ್ರಾಹ್ಮಣ ಸಮಾಜವು ಜಗತ್ತಿನ ಎಲ್ಲಜನರು ಸುಖವಾಗಿರಬೇಕು ಎಂದು ಬಯಸುತ್ತ ಬಂದಿದೆ. ಅದೇ ರೀತಿ ಸಮಾಜದ ಇಂದಿನ ಪೀಳಿಗೆಯೂ ಎಲ್ಲರ ಒಳಿತಿಗೆ ಶ್ರಮಿಸಬೇಕು ಎಂದು ಕೆಎಸ್‌ಎಫ್‌ಸಿ ಲೆಕ್ಕಪತ್ರ ವಿಭಾಗದ ವ್ಯವಸ್ಥಾಪಕ ಸುನೀಲ ಕುಲಕರ್ಣಿ ಹೇಳಿದರು.
Vijaya Karnataka Web the real life is to strive for the good of all kulkarni
ಎಲ್ಲರ ಒಳಿತಿಗೆ ಶ್ರಮಿಸುವುದೇ ನಿಜವಾದ ಜೀವನ: ಕುಲಕರ್ಣಿ


ನವನಗರದ ಬ್ರಾಹ್ಮಣ ಸೇವಾ ಸಂಘದ ಹಾಗೂ ಎನ್‌.ಎಂ.ಪುರೋಹಿತ ಎಜ್ಯುಕೇಶನ್‌ ಟ್ರಸ್ಟ ಸಹಯೋಗದಲ್ಲಿಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇತ್ತಿಚೇಗೆ ಸಂಘದ ಸಭಾಭವನದಲ್ಲಿಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ವಿಪ್ರಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜ ಸೂರ್ಯನಂತೆ ಎಲ್ಲರಿಗೂ ಸಮಾನ ಬೆಳಕನ್ನು ನೀಡುತ್ತ ಬಂದಿದೆ. ಸದಾಕಾಲ ಸರ್ವರ ಒಳ್ಳೆಯದನ್ನು ಬಯಸುತ್ತದೆ. ಸರ್ವೆಜನಾ ಸುಖಿನೋಭವಂತು ಎಂಬ ಧ್ಯೇಯವನ್ನು ಪಾಲಿಸುತ್ತಾ ಬಂದಿದೆ. ಪಾಲಕರು ತಮ್ಮ ಮಕ್ಕಳಿಗೆ ಕೊಡುವ ಉತ್ತಮ ಸಂಸ್ಕಾರವೇ ನಿಜವಾದ ಆಸ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ನರೇಂದ್ರ ಕುಲಕರ್ಣಿ ಮಾತನಾಡಿ, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ಸಂಘವನ್ನು ಮುನ್ನಡೆಸಿಕೊಂಡು ಹೊಗುತ್ತಿದ್ದೇವೆ. ಅನೇಕ ಉತ್ತಮ ಕಾರ್ಯಗಳನ್ನು ಸಂಘ ಮಾಡುತ್ತ ಬಂದಿದೆ. ಭವ್ಯವಾದ ಬಹು ಉಪಯೋಗಿ ಸಭಾಭವನ ನಿರ್ಮಾಣವಾಗಿದೆ. ರಾಮ ಮಂದಿರ ವಿದೆ. ಕೇವಲ ಬ್ರಾಹ್ಮಣ ಸಮಾಜಕ್ಕಷ್ಟೇ ಅಲ್ಲಾ, ಎಲ್ಲಾಸಮಾಜದ ಬಾಂಧವರಿಗೆ ಇದು ಉಪಯೋಗವಾಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಸತೀಶ ದೀಕ್ಷಿತ, ಸಂಘದ ಬೆಳವಣಿಗೆಯಲ್ಲಿಸಮಾಜದ ಹಿರಿಯರು ಹಾಕಿದ ಭದ್ರ ಬುನಾದಿ ಹಾಗೂ ಅನೇಕರ ಸಹಾಯ ಸಹಕಾರವಿದೆ. ಸಮಾಜದ ಕಟ್ಟಡ ನಿರ್ಮಾಣ ಕೆಲಸ ಸ್ವಲ್ಪ ಬಾಕಿ ಇದ್ದು, ಆದಷ್ಟು ಬೇಗನೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಎನ್‌.ಎಂ. ಪುರೋಹಿತ ಅವರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ವಿವಿಧ ಸ್ಪರ್ಧೆಯಲ್ಲಿಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಹಿರಿಯರಾದ ಪುರಂಧರೆ, ಕುಲಕರ್ಣಿ, ಪುರೋಹಿತ ಅಲ್ಲದೆ ಸಮಾಜದ ಅನೇಕ ಮಹನೀಯರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ರಂಗನಾಥ ಟೊಣಸಿ ಸ್ವಾಗತಿಸಿದರು.ರಾಜು ಚವಟೆ ನಿರೂಪಿಸಿದರು. ಪ್ರೊ. ಶ್ರೀಪಾದ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ