ಆ್ಯಪ್ನಗರ

ಆರ್ಥಿಕ ಸುಧಾರಣೆಯಲ್ಲಿಸಿಎ ಪಾತ್ರ ಮುಖ್ಯ

ಹುಬ್ಬಳ್ಳಿ: ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಜತೆಗೆ ದೇಶದ ಅಭಿವೃದ್ಧಿಯಲ್ಲಿಲೆಕ್ಕ ಪರಿಶೋಧಕರ ಪಾತ್ರ ಮುಖ್ಯ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಇಲ್ಲಿಯ ಕುಸುಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನಲ್ಲಿಹುಬ್ಬಳ್ಳಿ ಶಾಖೆಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಿರಾಕ್‌ 33ನೇ ವಾರ್ಷಿಕ ಸಮಾವೇಶ

Vijaya Karnataka 15 Dec 2019, 5:00 am
ಹುಬ್ಬಳ್ಳಿ: ದೇಶದ ಆರ್ಥಿಕ ವ್ಯವಸ್ಥೆ ಸುಧಾರಣೆ ಜತೆಗೆ ದೇಶದ ಅಭಿವೃದ್ಧಿಯಲ್ಲಿಲೆಕ್ಕ ಪರಿಶೋಧಕರ ಪಾತ್ರ ಮುಖ್ಯ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.
Vijaya Karnataka Web the role of the cca in economic reform is important
ಆರ್ಥಿಕ ಸುಧಾರಣೆಯಲ್ಲಿಸಿಎ ಪಾತ್ರ ಮುಖ್ಯ

ಇಲ್ಲಿಯ ಕುಸುಗಲ್‌ ರಸ್ತೆಯ ಶ್ರೀನಿವಾಸ ಗಾರ್ಡನಲ್ಲಿಹುಬ್ಬಳ್ಳಿ ಶಾಖೆಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಿರಾಕ್‌ 33ನೇ ವಾರ್ಷಿಕ ಸಮಾವೇಶ ಅಂಗವಾಗಿ ಶನಿವಾರ ನಡೆದ ಅಗ್ರತಃ ಕಾರ್ಯಕ್ರಮದಲ್ಲಿಮಾತನಾಡಿದರು.

ಲೆಕ್ಕ ಪರಿಶೋಧಕರು ತಮ್ಮ ವೃತ್ತಿ ನಿಭಾಯಿಸುವುದರೊಂದಿಗೆ ದೇಶದ ಆರ್ಥಿಕ ನಿರ್ಧಾರಗಳು ಮತ್ತು ಅವುಗಳನ್ನು ಜಾರಿ ತರುವ ಜವಾಬ್ದಾರಿಯೂ ಅವರ ಮೇಲಿದೆ. ಈ ಮೂಲಕ ದೇಶದ ಆರ್ಥಿಕ ಪ್ರಗತಿ ನೆರವು ನೀಡಬೇಕು ಎಂದರು.

ತಂತ್ರಜ್ಞಾನ ಬಳಕೆಯಾಗಲಿ
ಸದ್ಯ ಜಿಎಸ್‌ಟಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಪ್ರತಿ ಕ್ಷೇತ್ರದಲ್ಲಿಯೂ ಅಳವಡಿಕೆ ಆಗಬೇಕು. ಇದರೊಟ್ಟಿಗೆ ಲೆಕ್ಕ ಪರಿಶೋಧಕರ ಕ್ಷೇತ್ರದಲ್ಲಿಯೂ ಹೆಚ್ಚು ತಂತ್ರಜ್ಞಾನ ಬಳಕೆಗೆ ಮುಂದಾಗಬೇಕು. ಅಲ್ಲದೇ, ಬಜೆಟ್‌ ಮಂಡನೆ ಪೂರ್ವದಲ್ಲಿಸಲಹೆ ಸೂಚನೆಗಳನ್ನು ನೀಡಬೇಕು. ಅಲ್ಲದೇ ನಿಮ್ಮ ನಿಮ್ಮ ಭಾಗದ ಜನಪ್ರತಿನಿಧಿಗಳಿಗೆ ಅಗತ್ಯ ಸಲಹೆ ನೀಡಿದರೆ ಅನುಕೂಲವಾಗಲಿದೆ ಎಂದರು.

ಲೆಕ್ಕ ಪರಿಶೋಧಕರು ಸಮಾಜಮುಖಿ ಕೆಲಸದಲ್ಲಿಯೂ ತೊಡಗಿಕೊಳ್ಳಬೇಕು. ಈ ಭಾಗಕ್ಕೆ ಹೆಚ್ಚು ಕೈಗಾರಿಕೆ ತರುವ ನಿಟ್ಟಿನಲ್ಲಿಅಗತ್ಯ ಸಹಕಾರ ಮತ್ತು ಸಲಹೆಗಳನ್ನು ನೀಡಬೇಕು. ಇದರೊಂದಿಗೆ ಈ ಭಾಗದ ಆರ್ಥಿಕ ಅಭಿವೃದ್ಧಿ ಪೂರಕ ಕ್ರಮಗಳನ್ನು ಸಲಹೆ ಮಾಡಬೇಕು ಎಂದರು.

ಸಿಎ ಕೆ.ವಿ. ದೇಶಪಾಂಡೆ, ಸಿಎಗಳಾದ ಎಚ್‌.ಎನ್‌. ಅಡಿನವರ, ಹಿತೇಶಕುಮಾರ ಮೋದಿ, ಸಂಜೀವಕುಮಾರ ಹಾದಿಮನಿ, ಮನೋಜ ದೇಸಾಯಿ, ವೀಣಾ ಮುದಿಗೌಡರ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ