ಆ್ಯಪ್ನಗರ

ಶಾಸನಗಳ ಅನ್ವೇಷಣೆಯಲ್ಲಿ ಕವಿವಿ ಪಾತ್ರ ಅನನ್ಯ

ಧಾರವಾಡ : ಶಾಸನಗಳ ಬೆಳವಣಿಗೆ ಮತ್ತು ಅವುಗಳ ಅಭಿವೃದ್ಧಿಯಲ್ಲಿ ಅಶೋಕ ಚಕ್ರವರ್ತಿಯ ಮತ್ತು ದ್ರಾವಿಡ ರಾಜ್ಯ ಮನೆತನಗಳ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರಿನ ಶಾಸನ ತಜ್ಞ ಪ್ರೊ.ಸೀತಾರಾಮ್‌ ಜಾಗಿರದಾರ ಅಭಿಪ್ರಾಯಪಟ್ಟರು.

Vijaya Karnataka 26 Mar 2019, 5:00 am
ಧಾರವಾಡ : ಶಾಸನಗಳ ಬೆಳವಣಿಗೆ ಮತ್ತು ಅವುಗಳ ಅಭಿವೃದ್ಧಿಯಲ್ಲಿ ಅಶೋಕ ಚಕ್ರವರ್ತಿಯ ಮತ್ತು ದ್ರಾವಿಡ ರಾಜ್ಯ ಮನೆತನಗಳ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರಿನ ಶಾಸನ ತಜ್ಞ ಪ್ರೊ.ಸೀತಾರಾಮ್‌ ಜಾಗಿರದಾರ ಅಭಿಪ್ರಾಯಪಟ್ಟರು.
Vijaya Karnataka Web the role of the poet in the pursuit of inscriptions is unique
ಶಾಸನಗಳ ಅನ್ವೇಷಣೆಯಲ್ಲಿ ಕವಿವಿ ಪಾತ್ರ ಅನನ್ಯ


ನಗರದ ಕವಿವಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ಭಾರತದ ಶಾಸನಶಾಸ್ತ್ರ ಅಧ್ಯಯನದ ಬೆಳವಣಿಗೆ: ಡಾ.ಜಿ.ಎಸ್‌.ಗಾಯಿ ಅವರ ಕೂಡುಗೆ ವಿಷಯ ಕುರಿತು ಎರಡು ದಿನ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಶಾಸನಗಳ ಬೆಳವಣಿಗೆಯಲ್ಲಿ ಡಾ.ಜಿ.ಎಸ್‌ ಗಾಯಿ ಅವರ ಕೂಡುಗೆ ಅಪಾರ. ಅವರು ಐತಿಹಾಸಿಕವಾಗಿ ಭಾರತದಲ್ಲಿನ ಶಾಸನಗಳ ಇತಿಹಾಸ ಮತ್ತು ಅವುಗಳ ಅನ್ವೇಷನೆ ಕುರಿತು ಸಂಶೋಧನೆ ಮೂಲಕ ತಮ್ಮದೇ ಆದ ಕೂಡುಗೆ ನೀಡಿದ್ದಾರೆ ಎಂದು ಹೇಳಿದರು.

ಕವಿವಿ ಕುಲಪತಿ ಪ್ರೊ.ಪ್ರಮೋದ ಗಾಯಿ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕರ್ನಾಟಕದ ಶಾಸನಗಳ ಬೆಳವಣಿಗೆ ಮತ್ತು ಅನ್ವೇಷಣೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪ್ರಮುಖ ಪಾತ್ರ ವಹಿಸಿದೆ ಎಂದರು.

ಪ್ರೊ.ಪ್ರಭಾಕರ ಗಾಯಿ ಮಾತನಾಡಿದರು. ಪ್ರೊ.ಎಸ್‌.ಕೆ.ಕಲ್ಲೋಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರೊ.ಶೀಲಾಧರ ಮುಗಳಿ, ಡಾ.ಎಲ್‌.ಪಿ.ಮಾರುತಿ, ಪ್ರೊ.ಐ.ಕೆ.ಪತ್ತಾರ, ತಾಜುನಿಸ್‌ ಸಯ್ಯದ್‌, ಸಂಶೋಧನಾ ವಿದ್ಯಾರ್ಥಿಗಳು, ಇತಿಹಾಸ ತಜ್ಞರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಧಾರವಾಡದ ಕವಿವಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಭಾರತದ ಶಾಸನಶಾಸ್ತ್ರ ಅಧ್ಯಯನದ ಬೆಳವಣಿಗೆ: ಡಾ. ಜಿ.ಎಸ್‌.ಗಾಯಿ ಅವರ ಕೂಡುಗೆ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಕವಿವಿ ಕುಲಪತಿ ಪ್ರೋ ಪ್ರಮೋದ ಗಾಯಿ ಉದ್ಘಾಟಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ