ಆ್ಯಪ್ನಗರ

ಹಾಡ ಹಗಲೇ ಚಾಕುವಿನಿಂದ ಇರಿದು ಯುವಕನ ಕೊಲೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಉಂಟಾದ ವೈಷ್ಯಮದ ಹಿನ್ನೆಲೆಯಲ್ಲಿಇಲ್ಲಿಯ ಕಸಬಾಪೇಟೆ ಪಠಾಣಗಲ್ಲಿಯಲ್ಲಿ ಹಾಡಹಗಲೇ ಇಬ್ಬರು ಸ್ನೇಹಿತರು ಗೆಳೆಯನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.

Vijaya Karnataka 12 Mar 2020, 5:00 am
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಉಂಟಾದ ವೈಷ್ಯಮದ ಹಿನ್ನೆಲೆಯಲ್ಲಿಇಲ್ಲಿಯ ಕಸಬಾಪೇಟೆ ಪಠಾಣಗಲ್ಲಿಯಲ್ಲಿ ಹಾಡಹಗಲೇ ಇಬ್ಬರು ಸ್ನೇಹಿತರು ಗೆಳೆಯನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
Vijaya Karnataka Web the song is about a young man stabbed with a knife
ಹಾಡ ಹಗಲೇ ಚಾಕುವಿನಿಂದ ಇರಿದು ಯುವಕನ ಕೊಲೆ


ಎನ್‌.ಎ. ನಗರದ ನಿವಾಸಿ ಶಾಬುದ್ದೀನ ಬೆಕ್ಕಿನಬಾವಿ(19) ಕೊಲೆಯಾದ ಯುವಕ. ಪಠಾಣಗಲ್ಲಿಶಂಸುದ್ದೀನ್‌(24) ಮತ್ತು ಹಾಜಿ(25) ಎಂಬವರು ಕೊಲೆ ಮಾಡಿರುವ ಆರೋಪಿಗಳು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೊಹರಂ ಸಮಯದಲ್ಲಿಶಾಬುದ್ದೀನ್‌ ಮತ್ತು ಶಂಸುದ್ದೀನ್‌ ನಡುವೆ ಜಗಳ ನಡೆದು, ಪರಸ್ಪರ ಹೊಡದಾಡಿಕೊಂಡಿದ್ದರು. ಈ ವಿಚಾರವಾಗಿ ಹಿರಿಯರ ಸಮ್ಮುಖದಲ್ಲಿರಾಜೀ ಸಂಧಾನ ಸಹ ನಡೆದಿತ್ತು. ಆದರೂ, ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ, ಈ ಪ್ರಕರಣ ಕಸಬಾಪೇಟೆ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಬೆಳಗ್ಗೆ ಶಾಬುದ್ದೀನ್‌ಗೆ ಕರೆ ಮಾಡಿದ ಶಂಸುದ್ದೀನ್‌, ಹೊರಗೆ ಬರುವಂತೆ ತಿಳಿಸಿದ್ದಾನೆ. ಪಠಾಣಗಲ್ಲಿಬಳಿ ಬಂದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಶಂಸುದ್ದೀನ್‌, ಹಾಜಿ ಜತೆ ಸೇರಿ ಕುತ್ತಿಗೆ, ಬೆನ್ನು, ಹೊಟ್ಟೆಗೆ 12 ಬಾರಿ ಚಾಕು ಇರಿದಿದ್ದಾರೆ. ಘಟನೆಯಿಂದಾಗಿ ರಕ್ತದ ಮಡುವಿನಲ್ಲಿಬಿದ್ದಿದ್ದ ಶಾಬುದ್ದೀನ್‌ ಅವರನ್ನು ಸ್ಥಳೀಯರು ಕಿಮ್ಸ…ಗೆ ದಾಖಲಿಸುವಷ್ಟರಲ್ಲಿಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿಕೊಲೆ ನಡೆದಿರಬಹುದು. ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ