ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಉಂಟಾದ ವೈಷ್ಯಮದ ಹಿನ್ನೆಲೆಯಲ್ಲಿಇಲ್ಲಿಯ ಕಸಬಾಪೇಟೆ ಪಠಾಣಗಲ್ಲಿಯಲ್ಲಿ ಹಾಡಹಗಲೇ ಇಬ್ಬರು ಸ್ನೇಹಿತರು ಗೆಳೆಯನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ಎನ್.ಎ. ನಗರದ ನಿವಾಸಿ ಶಾಬುದ್ದೀನ ಬೆಕ್ಕಿನಬಾವಿ(19) ಕೊಲೆಯಾದ ಯುವಕ. ಪಠಾಣಗಲ್ಲಿಶಂಸುದ್ದೀನ್(24) ಮತ್ತು ಹಾಜಿ(25) ಎಂಬವರು ಕೊಲೆ ಮಾಡಿರುವ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಹರಂ ಸಮಯದಲ್ಲಿಶಾಬುದ್ದೀನ್ ಮತ್ತು ಶಂಸುದ್ದೀನ್ ನಡುವೆ ಜಗಳ ನಡೆದು, ಪರಸ್ಪರ ಹೊಡದಾಡಿಕೊಂಡಿದ್ದರು. ಈ ವಿಚಾರವಾಗಿ ಹಿರಿಯರ ಸಮ್ಮುಖದಲ್ಲಿರಾಜೀ ಸಂಧಾನ ಸಹ ನಡೆದಿತ್ತು. ಆದರೂ, ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ, ಈ ಪ್ರಕರಣ ಕಸಬಾಪೇಟೆ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಬೆಳಗ್ಗೆ ಶಾಬುದ್ದೀನ್ಗೆ ಕರೆ ಮಾಡಿದ ಶಂಸುದ್ದೀನ್, ಹೊರಗೆ ಬರುವಂತೆ ತಿಳಿಸಿದ್ದಾನೆ. ಪಠಾಣಗಲ್ಲಿಬಳಿ ಬಂದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಶಂಸುದ್ದೀನ್, ಹಾಜಿ ಜತೆ ಸೇರಿ ಕುತ್ತಿಗೆ, ಬೆನ್ನು, ಹೊಟ್ಟೆಗೆ 12 ಬಾರಿ ಚಾಕು ಇರಿದಿದ್ದಾರೆ. ಘಟನೆಯಿಂದಾಗಿ ರಕ್ತದ ಮಡುವಿನಲ್ಲಿಬಿದ್ದಿದ್ದ ಶಾಬುದ್ದೀನ್ ಅವರನ್ನು ಸ್ಥಳೀಯರು ಕಿಮ್ಸ…ಗೆ ದಾಖಲಿಸುವಷ್ಟರಲ್ಲಿಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿಕೊಲೆ ನಡೆದಿರಬಹುದು. ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಎನ್.ಎ. ನಗರದ ನಿವಾಸಿ ಶಾಬುದ್ದೀನ ಬೆಕ್ಕಿನಬಾವಿ(19) ಕೊಲೆಯಾದ ಯುವಕ. ಪಠಾಣಗಲ್ಲಿಶಂಸುದ್ದೀನ್(24) ಮತ್ತು ಹಾಜಿ(25) ಎಂಬವರು ಕೊಲೆ ಮಾಡಿರುವ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊಹರಂ ಸಮಯದಲ್ಲಿಶಾಬುದ್ದೀನ್ ಮತ್ತು ಶಂಸುದ್ದೀನ್ ನಡುವೆ ಜಗಳ ನಡೆದು, ಪರಸ್ಪರ ಹೊಡದಾಡಿಕೊಂಡಿದ್ದರು. ಈ ವಿಚಾರವಾಗಿ ಹಿರಿಯರ ಸಮ್ಮುಖದಲ್ಲಿರಾಜೀ ಸಂಧಾನ ಸಹ ನಡೆದಿತ್ತು. ಆದರೂ, ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೇ, ಈ ಪ್ರಕರಣ ಕಸಬಾಪೇಟೆ ಠಾಣೆ ಮೆಟ್ಟಿಲೇರಿತ್ತು. ಬುಧವಾರ ಬೆಳಗ್ಗೆ ಶಾಬುದ್ದೀನ್ಗೆ ಕರೆ ಮಾಡಿದ ಶಂಸುದ್ದೀನ್, ಹೊರಗೆ ಬರುವಂತೆ ತಿಳಿಸಿದ್ದಾನೆ. ಪಠಾಣಗಲ್ಲಿಬಳಿ ಬಂದಾಗ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಶಂಸುದ್ದೀನ್, ಹಾಜಿ ಜತೆ ಸೇರಿ ಕುತ್ತಿಗೆ, ಬೆನ್ನು, ಹೊಟ್ಟೆಗೆ 12 ಬಾರಿ ಚಾಕು ಇರಿದಿದ್ದಾರೆ. ಘಟನೆಯಿಂದಾಗಿ ರಕ್ತದ ಮಡುವಿನಲ್ಲಿಬಿದ್ದಿದ್ದ ಶಾಬುದ್ದೀನ್ ಅವರನ್ನು ಸ್ಥಳೀಯರು ಕಿಮ್ಸ…ಗೆ ದಾಖಲಿಸುವಷ್ಟರಲ್ಲಿಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿಕೊಲೆ ನಡೆದಿರಬಹುದು. ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.