ಆ್ಯಪ್ನಗರ

ಶಿರಸಂಗಿ ಲಿಂಗರಾಜರ ಪ್ರತಿಮೆಗೆ ಮಾಲಾರ್ಪಣೆ

ಧಾರವಾಡ: ಸಮಾಜದ ಒಳತಿಗಾಗಿ ತಮ್ಮ ಸಂಪತ್ತನ್ನು ನೀಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರ ಸ್ಮರಣೆ ಅಗತ್ಯ ಎಂದು ಸರ್‌.ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷ ಶಂಕರ ಕುಂಬಿ ಅಭಿಪ್ರಾಯಪಟ್ಟರು.

Vijaya Karnataka 13 Jan 2020, 5:00 am
ಧಾರವಾಡ: ಸಮಾಜದ ಒಳತಿಗಾಗಿ ತಮ್ಮ ಸಂಪತ್ತನ್ನು ನೀಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರ ಸ್ಮರಣೆ ಅಗತ್ಯ ಎಂದು ಸರ್‌.ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಅಧ್ಯಕ್ಷ ಶಂಕರ ಕುಂಬಿ ಅಭಿಪ್ರಾಯಪಟ್ಟರು.
Vijaya Karnataka Web the statue of the headdress lingaraj
ಶಿರಸಂಗಿ ಲಿಂಗರಾಜರ ಪ್ರತಿಮೆಗೆ ಮಾಲಾರ್ಪಣೆ


ನಗರದ ಆರ್‌ಎಲ್‌ಎಸ್‌ ಹೈಸ್ಕೂಲ್‌ ಮೈದಾನದಲ್ಲಿಶಿರಸಂಗಿ ಲಿಂಗರಾಜರ 159ನೇ ಜಯಂತಿ ನಿಮಿತ್ತ ಸರ್‌.ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ಮತ್ತು ಬಸವ ಕೇಂದ್ರದ ವತಿಯಿಂದ ಶಿರಸಂಗಿ ಲಿಂಗರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.

ಬಸವಕೇಂದ್ರದ ಅಶೋಕ ನಿಡವಣಿ ಮಾತನಾಡಿ, ಅರಟಾಳ ರುದ್ರಗೌಡರು, ಶಿ.ಶಿ.ಬಸವನಾಳ, ಫ.ಗು.ಹಳಕಟ್ಟಿ, ಸರ್‌.ಸಿದ್ದಪ್ಪ ಕಂಬಳಿ,ಶಿರಸಂಗಿ ಲಿಂಗರಾಜರು ಕೈಕೊಂಡ ಸಮಾಜಮುಖಿ ಕಾರ್ಯಗಳು ಆದರ್ಶಪ್ರಾಯವಾಗಿವೆ. ಅಂಥ ಮಹನೀಯರ ಬದುಕು ಮತ್ತು ತತ್ವಗಳನ್ನು ಮುಂದಿನ ಜನಾಂಗಕ್ಕೂ ತಿಳಿಸುವ ಕೆಲಸ ನಿರಂತರ ನಡೆಯಬೇಕು ಎಂದರು.

ರಾಜು ಮರಳಪ್ಪನವರ, ಶಿವಶರಣ ಕಲಬಶೆಟ್ಟರ, ಪ್ರಕಾಶ ಜಕಾತಿ, ಬಸವರಾಜ ನವಲಗುಂದ, ಪ್ರೊ.ಜಿ.ಎ.ತಿಗಡಿ, ವೀರಣ್ಣ ಒಡ್ಡೀನ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ