ಆ್ಯಪ್ನಗರ

ದಾರಿ ಯಾವುದಯ್ಯ ಕಚೇರಿಗೆ ?

ಧಾರವಾಡ: ನಗರದ ಎಪಿಎಂಸಿ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಅಲ್ಲದೇ ಸಿಬ್ಬಂದಿ ಎಲೆ ವ್ಯಾಪಾರ, ಬೇಕಾಬಿಟ್ಟಿಯಾಗಿ ನಿಂತ ವಾಹನ ಸಾಲುಗಳ ಮಧ್ಯೆಯೇ ಈ ಕಚೇರಿಗೆ ಸಾಗಿ ಹೋಗಬೇಕಿದ್ದು ಜನರಿಗೂ ತೊಂದರೆಯಾಗುತ್ತಿದೆ.

Vijaya Karnataka 16 Nov 2019, 5:00 am
ಧಾರವಾಡ: ನಗರದ ಎಪಿಎಂಸಿ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಅಗತ್ಯ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಅಲ್ಲದೇ ಸಿಬ್ಬಂದಿ ಎಲೆ ವ್ಯಾಪಾರ, ಬೇಕಾಬಿಟ್ಟಿಯಾಗಿ ನಿಂತ ವಾಹನ ಸಾಲುಗಳ ಮಧ್ಯೆಯೇ ಈ ಕಚೇರಿಗೆ ಸಾಗಿ ಹೋಗಬೇಕಿದ್ದು ಜನರಿಗೂ ತೊಂದರೆಯಾಗುತ್ತಿದೆ.
Vijaya Karnataka Web 14MAILAR01_21
ಧಾರವಾಡ ಕೃಷಿ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿಯ ಕಟ್ಟಡದಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಗೇಟ್‌ನಲ್ಲಿನಿಲ್ಲಿಸಿದ ಎತ್ತಿನ ಗಾಡಿ.


ನಗರದ ಶಿವಾಜಿ ವೃತ್ತದ ಬಳಿ ಕೃಷಿ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿಯ ಕಟ್ಟಡದಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಸುಮಾರು 25ವರ್ಷಗಳಿಂದ ಇದೆ. ಸದ್ಯ ಕಚೇರಿಯ ಕಟ್ಟಡದ ಸುತ್ತ ಸ್ಥಳವೂ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ಇಂತಹ ಅವ್ಯವಸ್ಥೆಯಲ್ಲಿಯೇ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ.

ಕಚೇರಿಯಲ್ಲಿ 12ಕ್ಕೂ ಹೆಚ್ಚಿನ ಸಿಬ್ಬಂದಿಯಿದ್ದು, ಅದರಲ್ಲೂಮಹಿಳೆಯರೇ ಹೆಚ್ಚು. ಇನ್ನು ಈ ಇಲಾಖೆಗೆ ಅಂಗನವಾಡಿ ಕಾರ್ಯಕರ್ತೆಯರು,ಮೇಲ್ವಿಚಾರಕರು, ಗರ್ಭಿಣಿಯರು ಹಾಗೂ ಬಾಣಂತಿಯರು ಆಗಮಿಸುತ್ತಾರೆ. ಕಚೇರಿ ಎದುರು ಪ್ರತಿ ಮಂಗಳವಾರ ಮತ್ತು ಶನಿವಾರ ನಡೆಯುವ ಎಲೆ ಹರಾಜು ಪ್ರಕ್ರಿಯೆಯಿಂದಾಗಿ ಅವರು ಒಳಗೆ ಪ್ರವೇಶಿಸಲು ಆಗುತ್ತಿಲ್ಲ. ಹೀಗಾಗಿ ಕಚೇರಿ ಸ್ಥಳಾಂತರಿಸಿ ಎಂಬ ಬೇಡಿಕೆಗಳು ಹೆಚ್ಚಿವೆ.

ಕಚೇರಿ ಬಾಗಿಲು ಎದುರೇ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಜತೆಗೆ ಇಲ್ಲಿಕುಡುಕರ ಹಾವಳಿಯಿಂದ ಮಹಿಳೆಯರು ಹಾಗೂ ಸಿಬ್ಬಂದಿ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಇಡಿ ಕಚೇರಿ ಧೂಳು ತಿನ್ನುತ್ತಿದೆ.

ಕಚೇರಿ ಎದುರಿನ ಪ್ರದೇಶದಲ್ಲಿ ಎಲೆ ವ್ಯಾಪಾರಕ್ಕೆ ಬೇರೆ ಜಿಲ್ಲೆಗಳಿಂದಲೂ ಜನ ಬರುತ್ತಾರೆ. ಹೀಗಾಗಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸುತ್ತಿರುವುದರಿಂದ ಕಚೇರಿ ಒಳಗಡೆ ಹೋಗಲು ಹರಸಾಹಸ ಪಡಬೇಕಾಗಿದೆ. ಈ ಸಮಸ್ಯೆ ಅರಿವಿಗೆ ಬಂದರೂ ಬೇರೆ ಕಡೆ ಬಾಡಿಗೆ ಹೆಚ್ಚು ಎಂಬ ಕಾರಣಕ್ಕೆ ಕಚೇರಿ ಸ್ಥಳಾಂತರ ಆಗುತ್ತಿಲ್ಲಎಂಬುದು ದುರ್ದೈವ ಸಂಗತಿ.

ಈ ಇಲಾಖೆ ಕಚೇರಿಯಲ್ಲಿಸ್ವಚ್ಛತೆ ಮರೀಚಿಕೆಯಾಗಿದೆ. ಶೌಚಾಲಯಗಳಿದ್ದರೂ ಅಲ್ಲಿಸ್ವಚ್ಛತೆ ಹಾಗೂ ನೀರು ಇಲ್ಲ. ಎಪಿಎಂಸಿ ಪ್ರದೇಶದಲ್ಲಿಯೂ ಮೂತ್ರಾಲಯ ಇಲ್ಲದ್ದರಿಂದ ಇಲ್ಲಿಬಯಲೇ ಮೂತ್ರಾಲಯವಾಗಿದೆ. ಕಚೇರಿಗೆ ಬರುವ ಮಹಿಳೆಯರಿಗೆ ಇದು ತೀವ್ರ ಮುಜುಗುರವನ್ನುಂಟು ಮಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ