ಆ್ಯಪ್ನಗರ

ರಂಗಭೂಮಿ ಬೆಳವಣಿಗೆಗೆ ಕಲಾವಿದರ ಒಗ್ಗಟ್ಟು ಅವಶ್ಯ

ಧಾರವಾಡ : ರಂಗಭೂಮಿ ವೇದಿಕೆಯಲ್ಲಿಕಲಾವಿದರು ತಂದೆ, ತಾಯಿಯಾಗಿ, ಅಣ್ಣ, ತಂಗಿಯಾಗಿ, ಪತಿ, ಪತ್ನಿಯಾಗಿ ನಟನೆ ಮಾಡುವುದರ ಮೂಲಕ ಕುಟುಂಬದೊಂದಿಗೆ ಸಹಬಾಳ್ವೆಯಿಂದ ಕರ್ತವ್ಯ ನಿರ್ವಹಿಸಿದರೆ ಆ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಕಲಾವಿದೆ ನೇತ್ರಾವತಿ ಅರಳಿಹಳ್ಳಿ ಅಭಿಪ್ರಾಯಪಟ್ಟರು.

Vijaya Karnataka 16 Oct 2019, 5:00 am
ಧಾರವಾಡ : ರಂಗಭೂಮಿ ವೇದಿಕೆಯಲ್ಲಿಕಲಾವಿದರು ತಂದೆ, ತಾಯಿಯಾಗಿ, ಅಣ್ಣ, ತಂಗಿಯಾಗಿ, ಪತಿ, ಪತ್ನಿಯಾಗಿ ನಟನೆ ಮಾಡುವುದರ ಮೂಲಕ ಕುಟುಂಬದೊಂದಿಗೆ ಸಹಬಾಳ್ವೆಯಿಂದ ಕರ್ತವ್ಯ ನಿರ್ವಹಿಸಿದರೆ ಆ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಕಲಾವಿದೆ ನೇತ್ರಾವತಿ ಅರಳಿಹಳ್ಳಿ ಅಭಿಪ್ರಾಯಪಟ್ಟರು.
Vijaya Karnataka Web theater development requires the cohesion of artists
ರಂಗಭೂಮಿ ಬೆಳವಣಿಗೆಗೆ ಕಲಾವಿದರ ಒಗ್ಗಟ್ಟು ಅವಶ್ಯ


ನಗರದ ಬಸ್‌ ನಿಲ್ದಾಣ ಎದುರಿನ ಮಂಡಲಗೇರಿಯ ಶ್ರೀ ಗುರು ತೋಂಟದಾರ್ಯ ನಾಟ್ಯ ಸಂಘದಲ್ಲಿನಡೆದ 'ಅಪ್ಪ ಹಂಗ ಮಗ ಹಿಂಗ' ಹಾಸ್ಯ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿ, ಕಲಾವಿದನಿಗೆ ಪ್ರೇಕ್ಷಕರ ಸಹಕಾರ ಅಗತ್ಯ ಎಂದರು.

ಶ್ರೀ ಬನಶಂಕರಿ ಭವನದ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಲೋಲೆನವರ ಮಾತನಾಡಿ, ವೃತ್ತಿ ರಂಗಭೂಮಿಯು ಅಪಾರ ಸಂಖ್ಯೆಯಲ್ಲಿಕಲಾವಿದರನ್ನು ಪೋಷಿಸಿದೆ ಮತ್ತು ಬೆಳೆಸಿದೆ. ಸಾಧನೆಗೆ ಪ್ರೇರಣೆ ಕೊಟ್ಟ ಗುಬ್ಬಿ ವೀರಣ್ಣ, ಏಣಗಿ ಬಾಳಪ್ಪ, ಮಾಸ್ಟರ್‌ ಹಿರಣ್ಣಯ್ಯ ನಾಟಕ ಕಂಪನಿ ಇಂದಿಗೂ ಸ್ಮರಣೀಯವಾಗಿವೆ ಎಂದರು.

ಶ್ರೀ ಕಲ್ಮೇಶ್ವರ ಕಲಾ ಸಂಸ್ಥೆ ಅಧ್ಯಕ್ಷ ವೀರನಗೌಡ ಸಿದ್ದಾಪೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವನತಿಯತ್ತ ಸಾಗುತ್ತಿರುವ ರಂಗಭೂಮಿಯ ಬೆಳವಣಿಗೆಗೆ ಕಲಾವಿದರ ಒಗ್ಗಟ್ಟು ಅವಶ್ಯ ಎಂದು ಹೇಳಿದರು.

ಅಜಿತಸಿಂಗ ರಜಪೂತ, ರಾಜೇಶ ತುರಮರಿ, ದೇವಾನಂದ ರತ್ನಾಕರ, ಟಿ.ಎಸ್‌.ಪಾಟೀಲ, ಮಡಿವಾಳಪ್ಪ ಇಸ್ರನ್ನವರ ಉಪಸ್ಥಿತರಿದ್ದರು. ಕಲಾವಿದ ಶಿವು ಸ್ವಾಗತಿಸಿದರು. ಪ್ರಭು ಹಂಚಿನಾಳ ಪ್ರಾಸ್ತಾವಿಕವಾಗಿದರು. ಸತೀಶ ಕಟ್ಟಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ