ಆ್ಯಪ್ನಗರ

ಮನೆ ಕೀಲಿ ಮುರಿದು ಕಳ್ಳತನ

ಧಾರವಾಡ : ಮನೆಯಲ್ಲಿಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಕೀಲಿ ಮುರಿದು ನಗದು ಹಾಗೂ ಬಂಗಾರ ಕಳ್ಳತನ ಮಾಡಿದ ಘಟನೆ ಇಲ್ಲಿನ ದಾನುನಗರದಲ್ಲಿಭಾನುವಾರ ನಡೆದಿದೆ.

Vijaya Karnataka 13 Jan 2020, 5:03 pm
ಧಾರವಾಡ : ಮನೆಯಲ್ಲಿಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆ ಕೀಲಿ ಮುರಿದು ನಗದು ಹಾಗೂ ಬಂಗಾರ ಕಳ್ಳತನ ಮಾಡಿದ ಘಟನೆ ಇಲ್ಲಿನ ದಾನುನಗರದಲ್ಲಿಭಾನುವಾರ ನಡೆದಿದೆ.
Vijaya Karnataka Web theft of a house key
ಮನೆ ಕೀಲಿ ಮುರಿದು ಕಳ್ಳತನ


ದಾನುನಗರದ ಮಹ್ಮದ್‌ ಯೂಸೂಪ್‌ ಬಳ್ಳಾರಿ ಎಂಬುವವರ ಮನೆಯಲ್ಲಿಕಳ್ಳತನ ನಡೆದಿದೆ. ಮನೆಯಲ್ಲಿನ ಟ್ರೇಜುರಿ, ಟ್ರಂಕ್‌ ಒಡೆದು 27 ಸಾವಿರ ನಗದು, ಎರಡು ತೊಲೆ ಬಂಗಾರ ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಅಂಬಣ್ಣನವರ ಬಡಾವಣೆಯ ರಾಜೇಸಾಬ ಬಡಗಿ ಅವರ ಮನೆ ಬಾಗಿಲು ಮುರಿದ ಕಳ್ಳರು, ಬಂಗಾರದ ಆಭರಣ, ನಗದು ಹಾಗೂ ಬೈಕ್‌ ಸೇರಿ ಒಟ್ಟು 3.49 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ರಾಜೇಸಾಬ ಅವರು ಮನೆ ಬಾಗಿಲಿಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋದ ಸಂದರ್ಭದಲ್ಲಿಕಳವು ಆಗಿದೆ. ಅಲ್ಮೇರಾದಲ್ಲಿ55 ಗ್ರಾಂ ಬಂಗಾರದ ಆಭರಣಗಳು, 580 ಗ್ರಾಂ ಬೆಳ್ಳಿ ವಸ್ತುಗಳು, 1.70 ಲಕ್ಷ ನಗದು, ಸಿಲಿಂಡರ್‌ ಹಾಗೂ ಹೊರಗೆ ನಿಲ್ಲಿಸಿದ್ದ ಬೈಕ್‌ ಕಳವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ