ಆ್ಯಪ್ನಗರ

ಹೆಣ್ಣು ಮಕ್ಕಳ ಬಗ್ಗೆ ಬೇಧ ಭಾವ ಇಲ್ಲ: ಬಳಿಗಾರ

ಹುಬ್ಬಳ್ಳಿ : ಹೆಣ್ಣು ಮಕ್ಕಳು ಎಲ್ಲರೂ ಒಂದೆ. ಹೆಣ್ಣುಮಕ್ಕಳಲ್ಲಿ ಭೇದಭಾವ ಬೇಡ. ಸಮ್ಮೇಳದ ಅಧ್ಯಕ್ಷ ರ ಮೆರವಣಿಗೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದರು.

Vijaya Karnataka 3 Jan 2019, 5:00 am
ಹುಬ್ಬಳ್ಳಿ : ಹೆಣ್ಣು ಮಕ್ಕಳು ಎಲ್ಲರೂ ಒಂದೆ. ಹೆಣ್ಣುಮಕ್ಕಳಲ್ಲಿ ಭೇದಭಾವ ಬೇಡ. ಸಮ್ಮೇಳದ ಅಧ್ಯಕ್ಷ ರ ಮೆರವಣಿಗೆಯಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದರು.
Vijaya Karnataka Web there is no feeling about daughters baligar
ಹೆಣ್ಣು ಮಕ್ಕಳ ಬಗ್ಗೆ ಬೇಧ ಭಾವ ಇಲ್ಲ: ಬಳಿಗಾರ


ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ ಅವರು, ಸಮ್ಮೇಳನದಲ್ಲಿ ಪೂರ್ಣಕುಂಭಮೇಳ ಅಗತ್ಯವಾಗಿದೆ. ಪೂರ್ಣಕುಂಭಮೇಳ ಮೇಳದಲ್ಲಿ ಸುಮಂಗಲಿಯರು, ಅಮಂಗಲೀಯರು ಎಂದು ಪ್ರತ್ಯೇಕ ಬೇಡ ಎಂದು ನಾನು ಹೇಳಿದ್ದೇನೆ. ತೃತೀಯ ಲಿಂಗಿಗಳು, ಪುರುಷರು ಕೂಡ ಕುಂಭಮೇಳದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ 400 ಕ್ಕೂ ಹೆಚ್ಚು ವಿಧವಾ ಸಹೋದರಿಯರು ಕುಂಭ ಹೊರಲು ಹೆಸರು ನೊಂದಾಯಿಸಿದ್ದಾರೆ ಎಂದು ತಿಳಿದರು.

ಈಗಾಗಲೇ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಾಕಷ್ಟು ಜನರು ಶ್ರಮವಹಿಸುತ್ತಿದ್ದಾರೆ. ಹೀಗಾಗಲೇ ಶೇ. 80 ರಷ್ಟು ಕೆಲಸ ಪೂರ್ಣಗೊಂಡಿದೆ. ಸಮ್ಮೇಳನಕ್ಕೆ ರಾಜ್ಯ ಸರಕಾರದಿಂದ ಯಾವುದೇ ಅನುದಾನದ ಕೊರತೆಯಾಗಿಲ್ಲ. ಹೀಗಾಗಲೇ 8 ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನು 2 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಸರಕಾರ ಭರವಸೆ ನೀಡಿದೆ ಎಂದರು.

ನಾಡಗೀತೆಯನ್ನು ಅತೀ ಸರಳಿಕರಣವಾಗಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಈ ಹಿಂದೆ ನಾಡಗೀತೆಯನ್ನು ಐದಾರು ನಿಮಿಷ ಮಾಡಲಾಗುತ್ತಿತ್ತು. ಹೀಗಾಗಿ ಹಾಡಿಗೆ ಧಕ್ಕೆಯಾಗದಂತೆ ಕಡಿಮೆ ಸಮಯದಲ್ಲಿ ಹಾಡಿಸುವಂತೆ ಸಾಕಷ್ಟು ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ತಜ್ಞರ ಸಮಿತಿ ನೇಮಿಸಿ ತಜ್ಞರ ಸಲಹೆಯಂತೆ 2 ನಿಮಿಷ 30 ಸೆಕೆಂಡ್‌ ನಲ್ಲಿ ನಾಡಗೀತೆಯನ್ನು ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಹಾಡಲಾಗುತ್ತಿದೆ ಇದು ಕೂಡ ಸಮ್ಮೇಳನದ ವಿಶೇಷ ಎಂದರು.

ಉತ್ತರ ಕರ್ನಾಟಕ ಸಮಸ್ಯೆಗಳು, ಗಡಿ ಸಮಸ್ಯೆ ಸೇರಿದಂತೆ ಹಲವು ವಿಶಿಷ್ಟ ಗೋಷ್ಟಿಗಳನ್ನು ಆಯೋಜನೆ ಮಾಡಲಾಗಿದ್ದು, ಪ್ರತಿದಿನ ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು. ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ