ಆ್ಯಪ್ನಗರ

ಮೂರನೇ ವ್ಯಕ್ತಿಯ ಮಾತಿಗೆ ಬೆಲೆ ಇಲ್ಲ: ಡಿಕೆಶಿ

ಹುಬ್ಬಳ್ಳಿ: ಯಾರು ಏನು ಹೇಳುತ್ತಾರೆಯೋ ಅದು ಮುಖ್ಯವಲ್ಲ. ಯಾರೇ ಮಧ್ಯಸ್ಥರು ಮಾತನಾಡಿದರೂ ಅದು ಗೌಣ, ಯಾರಾರ‍ಯರೋ ಏನೇನೋ ಮಾತನಾಡುತ್ತಾರೆ ಎಂಬುದಕ್ಕೆ ಉತ್ತರ ನೀಡಬೇಕಿಲ್ಲ. ನಾವುಂಟು ನಮ್ಮ ರಾಷ್ಟ್ರೀಯ ನಾಯಕರುಂಟು, ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.

Vijaya Karnataka 15 May 2019, 5:00 am
ಹುಬ್ಬಳ್ಳಿ: ಯಾರು ಏನು ಹೇಳುತ್ತಾರೆಯೋ ಅದು ಮುಖ್ಯವಲ್ಲ. ಯಾರೇ ಮಧ್ಯಸ್ಥರು ಮಾತನಾಡಿದರೂ ಅದು ಗೌಣ, ಯಾರಾರ‍ಯರೋ ಏನೇನೋ ಮಾತನಾಡುತ್ತಾರೆ ಎಂಬುದಕ್ಕೆ ಉತ್ತರ ನೀಡಬೇಕಿಲ್ಲ. ನಾವುಂಟು ನಮ್ಮ ರಾಷ್ಟ್ರೀಯ ನಾಯಕರುಂಟು, ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಿದರು.
Vijaya Karnataka Web there is no price for third party speech dks
ಮೂರನೇ ವ್ಯಕ್ತಿಯ ಮಾತಿಗೆ ಬೆಲೆ ಇಲ್ಲ: ಡಿಕೆಶಿ


ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ರಾಹುಲ್‌ ಗಾಂಧಿ, ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲರೂ ಒಗ್ಗಟ್ಟಿನಿಂದ ಹೋಗಲು ತೀರ್ಮಾನ ಮಾಡಿದ್ದಾರೆ. ಅದು ನಮಗೆ ಮುಖ್ಯವೋ ಹೊರತೂ ಮೂರನೇ ವ್ಯಕ್ತಿ ಏನೇ ಮಾತನಾಡಿದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಸುದ್ದಿಗಾರರಿಗೆ ಎಂದರು.

ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಹುಚ್ಚು

ಹುಬ್ಬಳ್ಳಿ: ಕೆಲವರಿಗೆ ವಿವಾದಾತ್ಮಕ ಹೇಳಿಕೆ ನೀಡಿ ಮಾಧ್ಯಮಗಳಲ್ಲಿ ಕಾಣಿಸುವ ಹುಚ್ಚು. ಅದಕ್ಕೆ ಇಂತಹ ವಿವಾದಯುತ ಹೇಳಿಕೆಗಳು ಹೆಚ್ಚಾಗುತ್ತಿವೆ. ಅವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಂಸದ ಡಿ.ಕೆ.ಸುರೇಶ ಹೇಳಿದರು.

ಸೋಮವಾರ ಹುಬ್ಬಳ್ಳಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ರಾಷ್ಟ್ರ ನಾಯಕರು ಆಂತರಿಕ ಸಭೆ ನಡೆಸಿ ಚರ್ಚಿಸಲಿದ್ದಾರೆ. ಅದರ ಬಗ್ಗೆ ಏನು ಮಾಡಬೇಕು ಎಂಬುದನ್ನು ಅವರೇ ತೀರ್ಮಾನಿಸುತ್ತಾರೆ. ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡಲ್ಲ'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ