ಹುಬ್ಬಳ್ಳಿ : ಈ ಭಾಗದಲ್ಲಿಉದ್ಯಮಗಳನ್ನು ಸ್ಥಾಪಿಸುವ ಮೂಲಕ ಉದ್ಯೊಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸುವ ಮಹತ್ವಾಕಾಂಕ್ಷಿಯೊಂದಿಗೆ ಕೈಗಾರಿಕೆ ಇಲಾಖೆ ಕೇಳಿ ಪಡೆದಿದ್ದೇನೆ. ಉತ್ತರ ಕರ್ನಾಟಕದಲ್ಲಿಕೈಗಾರಿಕೆಗೆ ಭೂಮಿ ಕೊರತೆ ಇಲ್ಲ. ಉಳಿದಂತೆ ಎಲ್ಲಸೌಕರ್ಯಗಳನ್ನು ರಾಜ್ಯ ಸರಕಾರ ಕೊಡುತ್ತದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಉದ್ಯಮಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು.
ಉತ್ತರ ಕರ್ನಾಟಕದ ಉದ್ಯೋಗ, ಆರ್ಥಿಕತೆ ಬಲಪಡಿಸುವುದು ಹಾಗೂ ಬೆಂಗಳೂರು ಕೇಂದ್ರಿತವಾಗಿರುವ ಉದ್ಯಮಿಗಳನ್ನೂ ಕರೆ ತರುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲರೀತಿಯಲ್ಲಿಬೆಂಬಲ ನೀಡುತ್ತಿದ್ದಾರೆ. ಇದಲ್ಲದೇ ಅಧಿಕಾರಿಗಳು ಸಹ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಇನ್ವೆಸ್ಟ್ ಹುಬ್ಬಳ್ಳಿ ಯಶಸ್ವಿಯಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲೆಯ ಮಮ್ಮಿಗಟ್ಟಿಯಲ್ಲಿ518.34 ಎಕರೆ, ಬೇಲೂರು-ಕೋಟೂರದಲ್ಲಿ594.36, ಇಟಿಗಟ್ಟಿ-ಗಾಮನಗಟಟಿಯಲ್ಲಿ590.14 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ದುರ್ಗದ ಕೆರೆಯಲ್ಲಿ3 ಸಾವಿರ ಎಕೆರೆ ಜಮೀನು ಇದ್ದು, ಕೈಗಾರಿಕೆಗೆ ಮೀಸಲಿಟ್ಟಿದ್ದು, ಉದ್ಯಮಿಗಳು ಕೇಳಿದರೆ ಇನ್ನಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳುತ್ತೇವೆ. ವಿದ್ಯುತ್, ನೀರಿಗೆ ಕೊರತೆ ಇಲ್ಲ. ಉದ್ಯಮಕ್ಕೆ ಬೇಕಾದ ಪರವಾನಗಿಗಳನ್ನು ತ್ವರಿತ ವಿಲೇವಾರಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಈ ಭಾಗದಲ್ಲಿವಿಶೇಷವಾಗಿ ಗ್ರಾಹಕರ ಸರಕುಗಳ ಉತ್ಪಾದನೆ, ಏರೋಸ್ಪೇಸ್, ಟೆಕ್ಸಟೈಲ್, ಫೌಂಡ್ರಿ, ಮಾಹಿತಿ ತಂತ್ರಜ್ಞಾನ, ಡಿಫೆನ್ಸ್, ಕೃಷಿ ಉತ್ಪನ್ನ ಹಾಗೂ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ. ಮೆಳ್ಳೆಗಟ್ಟಿ ಎಂಬ ಉದ್ಯಮಿ ಹುಬ್ಬಳ್ಳಿಯಲ್ಲಿಜಾಗ ಸಿಗದೆ ಇದ್ದುದ್ದಕ್ಕೆ ಬೆಳಗಾವಿಯಲ್ಲಿಏರೋಸ್ಪೇಸ್ ಘಟಕ ಆರಂಭಿಸಿದ್ದಾರೆ. ಇದಲ್ಲದೆ ಕೊಪ್ಪಳದಲ್ಲೂಮತ್ತೊಂದು ಘಟಕ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಅವರನ್ನೂ ಸಹ ಇಲ್ಲಿಗೆ ಕರೆ ತರುವ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಹಿಂದೆ ಕೃಷಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಶೇ.60-70 ಕೊಡುಗೆ ಇತ್ತು. ಈಗ ಅದು ಶೇ.14ಕ್ಕೆ ಇಳಿದಿದೆ. ಕೈಗಾರಿಕೆ ಚಟುವಟಿಕೆಗಳಿಂದ ಇದನ್ನು ಸರಿದೂಗಿಸಬೇಕಾಗಿದೆ. ಈ ನಿಟ್ಟಿನಲ್ಲಿಕೇಂದ್ರ ಸರಕಾರ ರಾಜ್ಯಕ್ಕೆ ಎಲ್ಲರೀತಿಯ ಬೆಂಬಲ ನೀಡಲಿದೆ. ಸರಕಾರಗಳು ಕೈಗಾರಿಕೆಗಳನ್ನು ನಡೆಸುವುದಿಲ್ಲ. ಬದಲಾಗಿದೆ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಸವಲತ್ತುಗಳನ್ನು ಒದಗಿಸಲಿವೆ. ಸಾರ್ವಜನಿಕ ಉದ್ಯಮಗಳಲ್ಲಿನ ಸರಕಾರದ ಬಂಡವಾಳವನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎಂಎಲ್ಸಿಗಳಾದ ಪ್ರದೀಪ ಶೆಟ್ಟರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗುಂಜನ್ ಕೃಷ್ಣನ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜೇಂದ್ರ, ಡಿಸಿ ದೀಪಾ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ.ಸತೀಶ ಮತ್ತಿತರರು ವೇದಿಕೆಯಲ್ಲಿಉಪಸ್ಥಿತರಿದ್ದರು. ಜಂಟಿ ನಿರ್ದೇಶಕ ಕಿರಣ ಅಡವಿ, ಉಪನಿರ್ದೇಶಕ ಮೋಹನ್ ಭರಮಕ್ಕನವರ, ಸಹಾಯಕ ನಿರ್ದೇಶಕರಾದ ಎನ್ ಎಂ ಭೀಮಪ್ಪ, ಶಿವಪುತ್ರಪ್ಪ ಮತ್ತಿತರರು ಇದ್ದರು.
ಕೇಳಿಬಂದ ಸಲಹೆಗಳು
ನೀರಿನ ಕೊರತೆ ನೀಗಿಸಲು ಕಾಳಿ ನದಿಯಿಂದ ನೀರು ತರುವ ಯೋಜನೆ, 100 ಕೋಟಿ ರೂ. ಹೂಡಿಕೆ ಮಾಡುವವರಿಗೆ ವಿಶೇಷ ರಿಯಾಯಿತಿ ಕೊಡಬೇಕು, ಮಂಗಳೂರು ಬಂದರಿನಂತೆ ಕಾರವಾರ ಬೇಲೇಕೇರಿ ಬಂದರು ಅಭಿವೃದ್ಧಿ ಪಡಿಸಬೇಕು. ಸಾರಿಗೆ ನಗರ ಯೋಜನೆ ರೂಪಿಸಬೇಕು. ಅಲ್ಲದೇ ಸರಕು ಸಾಗಣೆಗೆ ಶೇ.28 ಜಿಎಸ್ಟಿ ವಿಧಿಸಲಾಗುತ್ತಿದ್ದು ಸಮಸ್ಯೆ ಪರಿಹರಿಸಬೇಕು, ನವಲೂರಿನಲ್ಲಿಕಾರ್ಗೋ ಟರ್ಮಿನಲ್ ನಿರ್ಮಿಸಬೇಕು.ಗದಗ, ಹಾವೇರಿ ಸೇರಿ ಈ ಭಾಗದಲ್ಲಿಉತ್ತಮ ಹತ್ತಿ ಇದ್ದು, ಉತ್ತಮ ಯಾರ್ನ್ ತಯಾರಿಸುವ ಕಂಪನಿಗಳನ್ನು ಆಹ್ವಾನಿಸಬೇಕು ಎಂದು ಉದ್ಯಮಿಗಳು ಸಲಹೆ ನೀಡಿದರು.
2006ರ ಪಾಠ ಕಲಿಯಿರಿ
2006ರಲ್ಲಿಬೆಂಗಳೂರಲ್ಲಿನಡೆಸಿದ ವಿಶ್ವ ಹೂಡಿಕೆದಾರರ ಸಮಾವೇಶದಿಂದ ಆಗಿರುವ ಪ್ರಯೋಜನಗಳು ಹಾಗೂ ನಿಷ್ೊ್ರಯೋಜಕಗಳ ಬಗ್ಗೆ ಅವಲೋಕನ ಮಾಡಿಕೊಂಡು ಈ ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶದ ಯೋಜನೆ ರೂಪಿಸಬೇಕೆಂದು ಹುಬ್ಬಳ್ಳಿ ಅಭಿವೃದ್ಧಿ ವೇದಿಕೆ ಕಾರಾರಯಧ್ಯಕ್ಷ ಅಶೋಕ ಶೆಟ್ಟರ್ ಸಲಹೆ ನೀಡಿದರು. ಹುಬ್ಬಳ್ಳಿಯಲ್ಲಿ80 ಎಕರೆ ಕೊಟ್ಟಿದ್ದರೆ ಟಿಸಿಎಸ್ ಕಂಪನಿಯು ಉತ್ಪಾದನಾ ಘಟಕ ತೆರೆಯಲು ಆಸಕ್ತಿ ತೋರಿಸಿತ್ತು. ಆದರೆ ಯಾರೊಬ್ಬರೂ ಅವರಿಗೆ ಸಪೋರ್ಟ್ ಮಾಡಲಿಲ್ಲ. ಹೀಗೆ ಹಲವು ಉದ್ಯಮಿಗಳು ದೂರ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ಧೈರ್ಯ ತುಂಬಿರಿ
ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೂ ಮೊದಲು ಸ್ಥಳೀಯ ಉದ್ಯಮಿಗಳ ಸಮಸ್ಯೆ ಬಗೆಹರಿಸಿ ಅವರಲ್ಲಿಧೈರ್ಯ ತುಂಬಿದರೆ, ಶೇ 50 ಉದ್ಯಮಿಗಳೇ ಬಂಡವಾಳ ಹೂಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಹೂಡಿಕೆಗೆ ಹೊರ ರಾಜ್ಯ, ದೇಶಕ್ಕೆ ಅಲೆದಾಡುವ ಬದಲು ಕಳೆದ 30 ವರ್ಷಗಳಿಂದ ನೆನೆಗದಿಗೆ ಬಿದ್ದಿರುವ ಕೈಗಾರಿಕೋದ್ಯಮಿಗಳ ತೆರಿಗೆ ಆಕರಣೆ, ಭೂಮಿಯ ಕೆಜಿಪಿ ಸೇರಿದಂತೆ ವಿವಿಧ ಸಮಸ್ಯೆಗಳನ್ನ ಬಗೆಹರಿಸಿದರೇ ನೀವು ಉದ್ದೇಶಿಸಿರುವ ಹೂಡಿಕೆಯಲ್ಲಿಶೇ.50 ಹೂಡಿಕೆಗೆ ಸ್ಥಳೀಯ ಉದ್ಯಮಿಗಳೇ ಮುಂದಾಗುತ್ತಾರೆ ಎಂದು ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಉದ್ಯಮಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿಅವರು ಮಾತನಾಡಿದರು.
ಉತ್ತರ ಕರ್ನಾಟಕದ ಉದ್ಯೋಗ, ಆರ್ಥಿಕತೆ ಬಲಪಡಿಸುವುದು ಹಾಗೂ ಬೆಂಗಳೂರು ಕೇಂದ್ರಿತವಾಗಿರುವ ಉದ್ಯಮಿಗಳನ್ನೂ ಕರೆ ತರುತ್ತೇವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲರೀತಿಯಲ್ಲಿಬೆಂಬಲ ನೀಡುತ್ತಿದ್ದಾರೆ. ಇದಲ್ಲದೇ ಅಧಿಕಾರಿಗಳು ಸಹ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಇನ್ವೆಸ್ಟ್ ಹುಬ್ಬಳ್ಳಿ ಯಶಸ್ವಿಯಾಗಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲೆಯ ಮಮ್ಮಿಗಟ್ಟಿಯಲ್ಲಿ518.34 ಎಕರೆ, ಬೇಲೂರು-ಕೋಟೂರದಲ್ಲಿ594.36, ಇಟಿಗಟ್ಟಿ-ಗಾಮನಗಟಟಿಯಲ್ಲಿ590.14 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ ದುರ್ಗದ ಕೆರೆಯಲ್ಲಿ3 ಸಾವಿರ ಎಕೆರೆ ಜಮೀನು ಇದ್ದು, ಕೈಗಾರಿಕೆಗೆ ಮೀಸಲಿಟ್ಟಿದ್ದು, ಉದ್ಯಮಿಗಳು ಕೇಳಿದರೆ ಇನ್ನಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳುತ್ತೇವೆ. ವಿದ್ಯುತ್, ನೀರಿಗೆ ಕೊರತೆ ಇಲ್ಲ. ಉದ್ಯಮಕ್ಕೆ ಬೇಕಾದ ಪರವಾನಗಿಗಳನ್ನು ತ್ವರಿತ ವಿಲೇವಾರಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಈ ಭಾಗದಲ್ಲಿವಿಶೇಷವಾಗಿ ಗ್ರಾಹಕರ ಸರಕುಗಳ ಉತ್ಪಾದನೆ, ಏರೋಸ್ಪೇಸ್, ಟೆಕ್ಸಟೈಲ್, ಫೌಂಡ್ರಿ, ಮಾಹಿತಿ ತಂತ್ರಜ್ಞಾನ, ಡಿಫೆನ್ಸ್, ಕೃಷಿ ಉತ್ಪನ್ನ ಹಾಗೂ ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತದೆ. ಮೆಳ್ಳೆಗಟ್ಟಿ ಎಂಬ ಉದ್ಯಮಿ ಹುಬ್ಬಳ್ಳಿಯಲ್ಲಿಜಾಗ ಸಿಗದೆ ಇದ್ದುದ್ದಕ್ಕೆ ಬೆಳಗಾವಿಯಲ್ಲಿಏರೋಸ್ಪೇಸ್ ಘಟಕ ಆರಂಭಿಸಿದ್ದಾರೆ. ಇದಲ್ಲದೆ ಕೊಪ್ಪಳದಲ್ಲೂಮತ್ತೊಂದು ಘಟಕ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಅವರನ್ನೂ ಸಹ ಇಲ್ಲಿಗೆ ಕರೆ ತರುವ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಈ ಹಿಂದೆ ಕೃಷಿ ಕ್ಷೇತ್ರದಿಂದ ದೇಶದ ಆರ್ಥಿಕತೆಗೆ ಶೇ.60-70 ಕೊಡುಗೆ ಇತ್ತು. ಈಗ ಅದು ಶೇ.14ಕ್ಕೆ ಇಳಿದಿದೆ. ಕೈಗಾರಿಕೆ ಚಟುವಟಿಕೆಗಳಿಂದ ಇದನ್ನು ಸರಿದೂಗಿಸಬೇಕಾಗಿದೆ. ಈ ನಿಟ್ಟಿನಲ್ಲಿಕೇಂದ್ರ ಸರಕಾರ ರಾಜ್ಯಕ್ಕೆ ಎಲ್ಲರೀತಿಯ ಬೆಂಬಲ ನೀಡಲಿದೆ. ಸರಕಾರಗಳು ಕೈಗಾರಿಕೆಗಳನ್ನು ನಡೆಸುವುದಿಲ್ಲ. ಬದಲಾಗಿದೆ ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಸವಲತ್ತುಗಳನ್ನು ಒದಗಿಸಲಿವೆ. ಸಾರ್ವಜನಿಕ ಉದ್ಯಮಗಳಲ್ಲಿನ ಸರಕಾರದ ಬಂಡವಾಳವನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎಂಎಲ್ಸಿಗಳಾದ ಪ್ರದೀಪ ಶೆಟ್ಟರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತ ಗುಂಜನ್ ಕೃಷ್ಣನ್, ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜೇಂದ್ರ, ಡಿಸಿ ದೀಪಾ ಚೋಳನ್, ಜಿಪಂ ಸಿಇಒ ಡಾ.ಬಿ.ಸಿ.ಸತೀಶ ಮತ್ತಿತರರು ವೇದಿಕೆಯಲ್ಲಿಉಪಸ್ಥಿತರಿದ್ದರು. ಜಂಟಿ ನಿರ್ದೇಶಕ ಕಿರಣ ಅಡವಿ, ಉಪನಿರ್ದೇಶಕ ಮೋಹನ್ ಭರಮಕ್ಕನವರ, ಸಹಾಯಕ ನಿರ್ದೇಶಕರಾದ ಎನ್ ಎಂ ಭೀಮಪ್ಪ, ಶಿವಪುತ್ರಪ್ಪ ಮತ್ತಿತರರು ಇದ್ದರು.
ಕೇಳಿಬಂದ ಸಲಹೆಗಳು
ನೀರಿನ ಕೊರತೆ ನೀಗಿಸಲು ಕಾಳಿ ನದಿಯಿಂದ ನೀರು ತರುವ ಯೋಜನೆ, 100 ಕೋಟಿ ರೂ. ಹೂಡಿಕೆ ಮಾಡುವವರಿಗೆ ವಿಶೇಷ ರಿಯಾಯಿತಿ ಕೊಡಬೇಕು, ಮಂಗಳೂರು ಬಂದರಿನಂತೆ ಕಾರವಾರ ಬೇಲೇಕೇರಿ ಬಂದರು ಅಭಿವೃದ್ಧಿ ಪಡಿಸಬೇಕು. ಸಾರಿಗೆ ನಗರ ಯೋಜನೆ ರೂಪಿಸಬೇಕು. ಅಲ್ಲದೇ ಸರಕು ಸಾಗಣೆಗೆ ಶೇ.28 ಜಿಎಸ್ಟಿ ವಿಧಿಸಲಾಗುತ್ತಿದ್ದು ಸಮಸ್ಯೆ ಪರಿಹರಿಸಬೇಕು, ನವಲೂರಿನಲ್ಲಿಕಾರ್ಗೋ ಟರ್ಮಿನಲ್ ನಿರ್ಮಿಸಬೇಕು.ಗದಗ, ಹಾವೇರಿ ಸೇರಿ ಈ ಭಾಗದಲ್ಲಿಉತ್ತಮ ಹತ್ತಿ ಇದ್ದು, ಉತ್ತಮ ಯಾರ್ನ್ ತಯಾರಿಸುವ ಕಂಪನಿಗಳನ್ನು ಆಹ್ವಾನಿಸಬೇಕು ಎಂದು ಉದ್ಯಮಿಗಳು ಸಲಹೆ ನೀಡಿದರು.
2006ರ ಪಾಠ ಕಲಿಯಿರಿ
2006ರಲ್ಲಿಬೆಂಗಳೂರಲ್ಲಿನಡೆಸಿದ ವಿಶ್ವ ಹೂಡಿಕೆದಾರರ ಸಮಾವೇಶದಿಂದ ಆಗಿರುವ ಪ್ರಯೋಜನಗಳು ಹಾಗೂ ನಿಷ್ೊ್ರಯೋಜಕಗಳ ಬಗ್ಗೆ ಅವಲೋಕನ ಮಾಡಿಕೊಂಡು ಈ ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶದ ಯೋಜನೆ ರೂಪಿಸಬೇಕೆಂದು ಹುಬ್ಬಳ್ಳಿ ಅಭಿವೃದ್ಧಿ ವೇದಿಕೆ ಕಾರಾರಯಧ್ಯಕ್ಷ ಅಶೋಕ ಶೆಟ್ಟರ್ ಸಲಹೆ ನೀಡಿದರು. ಹುಬ್ಬಳ್ಳಿಯಲ್ಲಿ80 ಎಕರೆ ಕೊಟ್ಟಿದ್ದರೆ ಟಿಸಿಎಸ್ ಕಂಪನಿಯು ಉತ್ಪಾದನಾ ಘಟಕ ತೆರೆಯಲು ಆಸಕ್ತಿ ತೋರಿಸಿತ್ತು. ಆದರೆ ಯಾರೊಬ್ಬರೂ ಅವರಿಗೆ ಸಪೋರ್ಟ್ ಮಾಡಲಿಲ್ಲ. ಹೀಗೆ ಹಲವು ಉದ್ಯಮಿಗಳು ದೂರ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಳೀಯರಿಗೆ ಧೈರ್ಯ ತುಂಬಿರಿ
ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೂ ಮೊದಲು ಸ್ಥಳೀಯ ಉದ್ಯಮಿಗಳ ಸಮಸ್ಯೆ ಬಗೆಹರಿಸಿ ಅವರಲ್ಲಿಧೈರ್ಯ ತುಂಬಿದರೆ, ಶೇ 50 ಉದ್ಯಮಿಗಳೇ ಬಂಡವಾಳ ಹೂಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಹೂಡಿಕೆಗೆ ಹೊರ ರಾಜ್ಯ, ದೇಶಕ್ಕೆ ಅಲೆದಾಡುವ ಬದಲು ಕಳೆದ 30 ವರ್ಷಗಳಿಂದ ನೆನೆಗದಿಗೆ ಬಿದ್ದಿರುವ ಕೈಗಾರಿಕೋದ್ಯಮಿಗಳ ತೆರಿಗೆ ಆಕರಣೆ, ಭೂಮಿಯ ಕೆಜಿಪಿ ಸೇರಿದಂತೆ ವಿವಿಧ ಸಮಸ್ಯೆಗಳನ್ನ ಬಗೆಹರಿಸಿದರೇ ನೀವು ಉದ್ದೇಶಿಸಿರುವ ಹೂಡಿಕೆಯಲ್ಲಿಶೇ.50 ಹೂಡಿಕೆಗೆ ಸ್ಥಳೀಯ ಉದ್ಯಮಿಗಳೇ ಮುಂದಾಗುತ್ತಾರೆ ಎಂದು ಹೇಳಿದರು.