ಹುಬ್ಬಳ್ಳಿ : ರಾಜ್ಯ ಸರ್ಕಾರದ ಆದೇಶದಂತೆ ರವಿವಾರ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿಜು. 5 ರಂದು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ವಿಭಾಗದ ವ್ಯಾಪ್ತಿಯ ಬಸ್ ಘಟಕಗಳು ಮತ್ತು ಬಸ್ ನಿಲ್ದಾಣಗಳಿಂದ ಯಾವುದೇ ಬಸ್ಸುಗಳ ಸಂಚಾರ ಇರುವುದಿಲ್ಲ. ವಿಭಾಗದಲ್ಲಿಲಾಕ್ಡೌನ್ಗಿಂತ ಮೊದಲು ಜಿಲ್ಲೆಯೊಳಗಡೆ, ಅಂತರ ಜಿಲ್ಲೆ ಮತ್ತು ಅಂತಾರಾಜ್ಯದೊಳಗೆ ನಿತ್ಯ 419 ಬಸ್ಸುಗಳು ಸಂಚರಿಸುತ್ತಿದ್ದು ಸರಾಸರಿ 1.35 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಲಾಕ್ ಡೌನ್ ನಂತರದಲ್ಲಿಪ್ರತಿದಿನ ಜಿಲ್ಲೆಯ ಒಳಗಡೆ ಮತ್ತು ಅಂತರ ಜಿಲ್ಲೆಯ ಜಿಲ್ಲಾ ಕೇಂದ್ರಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರತಿದಿನ ಸರಾಸರಿ ಎರಡುನೂರು ಬಸ್ಸುಗಳು ಸಂಚರಿಸುತ್ತಿದ್ದು ಸರಾಸರಿ 22000ರಿಂದ 23000 ಜನರು ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರದ ನಿರ್ದೇಶನಗಳಂತೆ ರವಿವಾರ ಇಡೀ ದಿನ ಯಾವುದೇ ಬಸ್ಸುಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ನಾಳೆ ಬಸ್ ಸಂಚಾರವಿಲ್ಲ
ಹುಬ್ಬಳ್ಳಿ : ರಾಜ್ಯ ಸರ್ಕಾರದ ಆದೇಶದಂತೆ ರವಿವಾರ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿಜು. 5 ರಂದು ಹುಬ್ಬಳ್ಳಿ ಸಾರಿಗೆ ವಿಭಾಗದಲ್ಲಿಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ವಿಭಾಗದ ವ್ಯಾಪ್ತಿಯ ಬಸ್ ಘಟಕಗಳು ಮತ್ತು ಬಸ್ ನಿಲ್ದಾಣಗಳಿಂದ ಯಾವುದೇ ಬಸ್ಸುಗಳ ಸಂಚಾರ ಇರುವುದಿಲ್ಲ.
Vijaya Karnataka 4 Jul 2020, 5:00 am