ಆ್ಯಪ್ನಗರ

18 ವರ್ಷ ಕೆಳಗಿನವರು ದುಡಿಯುವಂತಿಲ್ಲ

ಕುಂದಗೋಳ: 6ರಿಂದ 18 ವರ್ಷದೊಳಗಿನ ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯನ್ನು ಹೊರತು ಪಡಿಸಿ ಎಲ್ಲಿಯೂ ಜವಾಬ್ದಾರಿಯುತ ದುಡಿಮೆ ಮಾಡುವಂತಿಲ್ಲಎಂದು ಪಟ್ಟಣದ ಹರಭಟ್ಟ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್‌.ಕುದರಿ ಮಕ್ಕಳಿಗೆ ತಿಳಿವಳಿಕೆ ನೀಡಿದರು. ಪಟ್ಟಣದ ಹರಭಟ್ಟ ಶಾಲೆಯಲ್ಲಿಮಂಗಳವಾರ ಮಕ್ಕಳ ಚಲನಚಿತ್ರ

Vijaya Karnataka 15 Feb 2020, 5:00 am
ಕುಂದಗೋಳ: 6ರಿಂದ 18 ವರ್ಷದೊಳಗಿನ ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯನ್ನು ಹೊರತು ಪಡಿಸಿ ಎಲ್ಲಿಯೂ ಜವಾಬ್ದಾರಿಯುತ ದುಡಿಮೆ ಮಾಡುವಂತಿಲ್ಲಎಂದು ಪಟ್ಟಣದ ಹರಭಟ್ಟ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್‌.ಕುದರಿ ಮಕ್ಕಳಿಗೆ ತಿಳಿವಳಿಕೆ ನೀಡಿದರು. ಪಟ್ಟಣದ ಹರಭಟ್ಟ ಶಾಲೆಯಲ್ಲಿಮಂಗಳವಾರ ಮಕ್ಕಳ ಚಲನಚಿತ್ರ 'ಝಳ್ಳಿ' ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದರು.
Vijaya Karnataka Web those under 18 cannot work
18 ವರ್ಷ ಕೆಳಗಿನವರು ದುಡಿಯುವಂತಿಲ್ಲ


ಮಕ್ಕಳು ತಮ್ಮ ಬಾಲ್ಯದಲ್ಲಿಕಲಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕು. ಯಾರೂ ಶಾಲೆಗೆ ಬರುವುದನ್ನು ನಿಲ್ಲಿಸಬಾರದು, ಅಲ್ಲದೇ ಹೋಟೆಲ್‌, ಗ್ಯಾರೇಜ್‌, ಅಂಗಡಿಗಳು ಸೇರಿದಂತೆ ಇತರೆಡೆ ಕೆಲಸಕ್ಕೆ ಹೋಗುವಂತಿಲ್ಲ. ಶಿಕ್ಷಣ ಪಡೆಯುವುದು ನಿಮ್ಮ ಹಕ್ಕಾಗಿದ್ದು, ಯಾರಾದರೂ ಬಲವಂತವಾಗಿ ನಿಮಗೆ ಕೆಲಸಕ್ಕೆ ಬರಲು ಗದರಿಸಿದರೆ ನಮ್ಮ ಬಳಿ ನಿಮ್ಮ ಸಮಸ್ಯೆ ಹೇಳಿಕೊಂಡು ಬಗೆ ಹರಿಸಿಕೊಳ್ಳಬಹುದು. ನಿಮ್ಮ ಚಿಕ್ಕ ವಯಸ್ಸಿನಲ್ಲಿಮದುವೆಗೆ ಯಾರಾದರೂ ಪ್ರೋತ್ಸಾಹಿಸಿದರೆ ನಕಾರ ಸೂಚಿಸಬೇಕು. ಬಾಲಾಪರಾಧದಿಂದ ದೂರವಿದ್ದು, ಮಕ್ಕಳ ಕಳ್ಳರಿಂದ ಎಚ್ಚರವಾಗಿರಬೇಕು. ಜೊತೆಗೆ ತಂದೆ-ತಾಯಿಯರೂ ಕೆಲಸಕ್ಕೆ ಕರೆದುಕೊಂಡು ಹೋಗುವದು ಅಥವಾ ಚಿಕ್ಕ ವಯಸ್ಸಿನಲ್ಲಿನಿಮ್ಮ ಮದುವೆಗೆ ಮುಂದಾದರೆ ಕಾನೂನು ರೀತ್ಯಕ್ರಮಗಳಿಗೆ ಒಳಗಾಗುವುದು ಸರಿಯಲ್ಲಎಂದು ವಿದ್ಯಾರ್ಥಿಗಳಿಗೆ ಹತ್ತು ಹಲವಾರು ತಿಳಿವಳಿಕೆಗಳನ್ನು ವಿವರಿಸಿದರು.

ಮಕ್ಕಳ ಚಿತ್ರವನ್ನು ವೀಕ್ಷಿಸಿದ ಎಲ್ಲವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಸಂವಾದ ನಡೆಸಿ, ತಮ್ಮ-ತಮ್ಮ ಮನದಲ್ಲಿನ ಗೊಂದಲಗಳನ್ನು ನಿವಾರಿಸಿಕೊಂಡರು. ಎಂ.ಟಿ.ರಾಠೋಡ, ಎಸ್‌.ಎನ್‌.ದೊಡಮನಿ, ಎಂ.ಎಸ್‌.ರೇವಣ್ಣವರ, ಎಸ್‌.ಎಸ್‌.ರೋಡೆ, ಎಂ.ಎಂ.ಘೋಡಕೆ ಮತ್ತಿತರರು ವಿದ್ಯಾರ್ಥಿಗಳಿಗೆ ಮಕ್ಕಳ ವಿಕಸನ ಹಾಗೂ ಕಾನೂನು-ಕಾಯ್ದೆ ಕುರಿತು ತಿಳಿವಳಿಕೆ ನೀಡಿದರು. ಜಿ.ಸಿ.ಹಂಚಿನಾಳ ನಿರೂಪಿಸಿದರು. ವಿ.ಎಂ.ಮಂಟೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ