ಆ್ಯಪ್ನಗರ

ಕೈಗಾರಿಕೆ ಅದಾಲತ್‌ಗೆ ಚಿಂತನೆ

ಹುಬ್ಬಳ್ಳಿ: ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಗೊಳಿಸಲು ರಾಜ್ಯಮಟ್ಟದಲ್ಲಿಕೈಗಾರಿಕೆ ಅದಾಲತ್‌ ನಡೆಸುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಉಸ್ತುವಾರಿ ಸಚಿವರೂ ಆದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಇಂಗಿತ ವ್ಯಕ್ತಪಡಿಸಿದರು.

Vijaya Karnataka 15 Jan 2020, 6:00 pm
ಹುಬ್ಬಳ್ಳಿ: ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಗೊಳಿಸಲು ರಾಜ್ಯಮಟ್ಟದಲ್ಲಿಕೈಗಾರಿಕೆ ಅದಾಲತ್‌ ನಡೆಸುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಉಸ್ತುವಾರಿ ಸಚಿವರೂ ಆದ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಇಂಗಿತ ವ್ಯಕ್ತಪಡಿಸಿದರು.
Vijaya Karnataka Web thought for industrial adalat
ಕೈಗಾರಿಕೆ ಅದಾಲತ್‌ಗೆ ಚಿಂತನೆ


ನಗರದ ಹೊಸ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಂಡು ವರ್ಷ ಕಳೆದ ಹಿನ್ನೆಲೆಯಲ್ಲಿಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಕೈಗಾರಿಕೆಗಳು, ಅಭಿವೃದ್ಧಿ ಕಾರ್ಯಗಳಿಗೆ ಕೆಐಎಡಿಬಿ ಮೂಲಕ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಪರಿಹಾರ ಮತ್ತು ಇತರ ವಿಚಾರವಾಗಿ ಭೂ ಮಾಲೀಕರು ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರಕರಣಗಳ ವಿಚಾರಣೆ ನಡೆದು ಆದೇಶ ಬರಲು ತಡವಾಗುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ನಿಲ್ಲುತ್ತಿವೆ. ಜತೆಗೆ ಕೈಗಾರಿಕೋದ್ಯಮಿಗಳು ನಷ್ಟ ಅನುಭವಿಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥ ಪಡಿಸಲು ಅದಾಲತ್‌ ನಡೆಸುವ ಗಂಭೀರ ಚಿಂತನೆ ಇದೆ. ಇದಕ್ಕೆ ವಕೀಲರು ಸಹಕರಿಸಬೇಕೆಂದು ಮನವಿ ಮಾಡಿದರು.

ಇ-ಲೈಬ್ರರಿಗೆ 15 ಲಕ್ಷ ರೂ
ದೇಶದಲ್ಲೇ ಮಾದರಿಯಾದ ಕಟ್ಟಡದಲ್ಲಿಇ-ಲೈಬ್ರರಿ ಅರಂಭಿಸಲು ಶಾಸಕರ ಅನುದಾನ ಕೊಡುವಂತೆ ವಕೀಲರ ಸಂಘ ಮನವಿ ಮಾಡಿದ್ದಕ್ಕೆ 15 ಲಕ್ಷ ರೂ. ಮಂಜೂರು ಮಾಡಲಾಗುವುದು, ಶೀಘ್ರ ಅದನ್ನು ಆರಂಭಿಸಿ ಉದ್ಘಾಟಿಸುವಂತಾಗಬೇಕೆಂದು ತಿಳಿಸಿದ ಶೆಟ್ಟರ್‌, ಆಗಸ್ಟ್‌,ಸಪ್ಟೆಂಬರ್‌ ತಿಂಗಳಲ್ಲಿಸುರಿದ ಭಾರಿ ಮಳೆಗೆ ಕೋರ್ಟ್‌ನ ನೆಲ ಅಂತಸ್ತಿನಲ್ಲಿನೀರು ನುಗ್ಗಿ ಅಪಾರ ಹಾನಿಯಾಗಿದೆ. ಪರಿಹಾರ ಕ್ರಮಕ್ಕೆ 75 ಲಕ್ಷ ರೂ. ಒದಗಿಸಲಾಗಿದೆ. ಶೀಘ್ರವೇ ಎಸಿ ವ್ಯವಸ್ಥೆ ಪುನಾರಂಭವಾಗಲಿದೆ ಎಂದರು.

ಅಮೂಲಾಗ್ರ ಬದಲಾವಣೆ ಅಗತ್ಯ
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಕ್ಷಿದಾರರು ನ್ಯಾಯಾಲಯಗಳಿಂದ ತ್ವರಿತ ನ್ಯಾಯ ನಿರೀಕ್ಷಿಸುವುದು ಸಹಜ. ಆದರೆ, ನ್ಯಾಯಾಂಗಕ್ಕೆ ಸರಕಾರಗಳು ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಶೀಘ್ರಗತಿ ಪ್ರಕರಣ ನಡೆಸಲು ಸಾಧ್ಯವಾಗುತ್ತದೆ ಎಂದರು.

ಕೆಳ ಹಂತದಿಂದ ಉಚ್ಚಮಟ್ಟದವರೆಗಿನ ನೇಮಕಾತಿ ಮತ್ತು ಸೌಲಭ್ಯಗಳ ಒದಗಿಸುವ ದೃಷ್ಟಿಯಲ್ಲಿಆಮೂಲಾಗ್ರ ಬದಲಾವಣೆಗಳಾಗಬೇಕಿದೆ. ಈ ಬಗ್ಗೆ ಗಂಭೀರ ಚರ್ಚೆ, ಚಿಂತನೆ ಹಾಗೂ ಸಂವಾದಗಳು ನಡೆಯಬೇಕು. ಅಂತಿಮವಾಗಿ ಹೊರಹೊಮ್ಮುವ ವಿಚಾರವನ್ನು ಜಾರಿಗೊಳಿಸಲು ಸರಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.

ವಾರ್ಷಿಕೋತ್ಸವ ಸವಿನೆನಪುಗೋಸ್ಕರ ಕೋರ್ಟ್‌ ಆವರಣದಲ್ಲಿಸಸಿ ನಡೆಲಾಯಿತು. ನ್ಯಾಯಾಲಯ ಕಟ್ಟಡ ಅಡಿಪಾಯದಿಂದ ಉದ್ಘಾಟನೆವರೆಗೂ ಶ್ರಮಿಸಿದ ನಿವೃತ್ತ ನ್ಯಾಯಮೂರ್ತಿಗಳಾದ ಎನ್‌.ಕೆ. ಪಾಟೀಲ, ರಾಮಮೋಹನ ರೆಡ್ಡಿ, ಬೆಂಗಳೂರು ಸಿಟಿ ಕೋರ್ಟ್‌ ಪ್ರಧಾನ ನ್ಯಾಯಾಧೀಶ ಶ್ರೀಶಾನಂದ, ನಿವೃತ್ತ ನ್ಯಾಯಾಧೀಶ ಕೆ.ಎಸ್‌. ಬೀಳಗಿ, ಗುತ್ತಿಗೆದಾರ ಜಿ. ಹರ್ಷ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾನ್ಯಾಯಾಧೀಶ ಈಶಪ್ಪ ಭೂತೆ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು. ಗುರು ಎಫ್‌ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ