ಆ್ಯಪ್ನಗರ

ಮನೆ ಚಾವಣಿ ಕುಸಿದು ಮೂವರ ಸಾವು

ಕುಂದಗೋಳ (ಧಾರವಾಡ) : ಮಣ್ಣಿನ ಮನೆ ಚಾವಣಿ ಕುಸಿದು ನಿದ್ರೆಯಲ್ಲಿದ್ದ ಇಬ್ಬರು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

Vijaya Karnataka 16 May 2019, 5:00 am
ಕುಂದಗೋಳ (ಧಾರವಾಡ) : ಮಣ್ಣಿನ ಮನೆ ಚಾವಣಿ ಕುಸಿದು ನಿದ್ರೆಯಲ್ಲಿದ್ದ ಇಬ್ಬರು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
Vijaya Karnataka Web three dead after house collapse
ಮನೆ ಚಾವಣಿ ಕುಸಿದು ಮೂವರ ಸಾವು


ಯಲ್ಲವ್ವ ಯಲ್ಲಪ್ಪ ಗಾಡದ(48) ಹಾಗೂ ಮೊಮ್ಮಕ್ಕಳಾದ ಶಿಗ್ಗಾವಿ ತಾಲೂಕಿನ ಚಾಕಾಪುರ ಗ್ರಾಮದ ಶ್ರಾವಣಿ ಆನಂದ ರಾಧಾಯಿ(3) ಮತ್ತು ನವಲಗುಂದ ತಾಲೂಕಿನ ಬಳ್ಳೂರ ಗ್ರಾಮದ ಜ್ಯೋತಿ ಸಿದ್ದಪ್ಪ ಮೇಟಿ(8) ಎಂಬುವರೇ ಮೃತರು. ಗಾಯಗೊಂಡ ದ್ಯಾಮವ್ವ ಗರಟ್ಟಿ, ರೂಪಾ ಗಾಡದ, ಫಕ್ಕೀರವ್ವ ಗಾಡದ ಇವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಘಟನಾ ವಿವರ:

ಗ್ರಾಮದಲ್ಲಿ ಪ್ರತಿ ವರ್ಷ ಆಚರಿಸುವಂತೆ ಗ್ರಾಮದೇವಿಯ ವಾರದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಅಜ್ಜ-ಅಜ್ಜಿ ಮನೆಗೆ ಜ್ಯೋತಿ ಹಾಗೂ ಶ್ರಾವಣಿ ಸೋಮವಾರ ಬಂದಿದ್ದರು. ರಾತ್ರಿ ಎಲ್ಲರೊಂದಿಗೆ ಊಟ ಮಾಡಿ ಅಜ್ಜಿಯ ಬಳಿ ಮಲಗಿದ್ದರು. ಆದರೆ ಮರುದಿನ ಎದ್ದೇಳದೇ ಇಹಲೋಕ ತ್ಯಜಿಸಿದರು.

ತುಂಬಾ ಹಳೆಯದಾದ ಈ ಮನೆಯ ಮೇಲ್ಚಾವಣಿ ಬೆಳಗಿನ ಜಾವ ಏಕಾಏಕಿ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದ 6 ಜನರು ಮಣ್ಣಿನ ಅಡಿ ಸಿಲುಕಿದ್ದಾರೆ. ಭಾರಿ ಸಪ್ಪಳಕ್ಕೆ ಎಚ್ಚೆತ್ತ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ಮಣ್ಣನ್ನು ತೆಗೆದು ಹಾಕಿ ಮೂವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ದುರ್ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದವರು ಹಾಗೂ ಗ್ರಾಮದ ಮಹಿಳೆಯರು ಮೃತ ಕಂದಮ್ಮಗಳನ್ನು ಕಂಡು ಮಮ್ಮಲ ಮರುಗಿದ ದೃಶ್ಯ ಮನ ಕಲುಕುವಂತಿತ್ತು.

ರಾಜಕಾರಣಿಗಳ ಭೇಟಿ:

ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ, ಆರ್‌.ವಿ.ದೇಶಪಾಂಡೆ, ಮಾಜಿ ಸಚಿವ ವಿನಯ ಕುಲಕರ್ಣಿ, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್‌.ಐ. ಚಿಕ್ಕನಗೌಡ್ರ, ಬಿಜೆಪಿ ಮುಖಂಡ ಎಂ.ಆರ್‌.ಪಾಟೀಲ್‌ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ