ಆ್ಯಪ್ನಗರ

30ರಿಂದ ಸಕಾಲ ಸೇವೆ ಜಾಗೃತಿ ಸಪ್ತಾಹ

ಧಾರವಾಡ: ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾ್ಠನ ಮತ್ತು ಅರ್ಜಿ ವಿಲೇವಾರಿ ಚುರುಕುಗೊಳಿಸುವ ಉದ್ದೇಶದಿಂದ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿಅರಿವು ಮೂಡಿಸುವುದರ ಜತೆಗೆ ಸಕಾಲದಲ್ಲಿಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗುವುದು ಎಂದು ಸಕಾಲ ಮಿಷನ್‌ ಅಪರ ನಿರ್ದೇಶಕಿ ಮಮತಾ ಹೇಳಿದರು.

Vijaya Karnataka 28 Nov 2020, 5:00 am
ಧಾರವಾಡ: ಸಕಾಲ ಯೋಜನೆಯ ಪರಿಣಾಮಕಾರಿ ಅನುಷ್ಠಾ್ಠನ ಮತ್ತು ಅರ್ಜಿ ವಿಲೇವಾರಿ ಚುರುಕುಗೊಳಿಸುವ ಉದ್ದೇಶದಿಂದ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿಅರಿವು ಮೂಡಿಸುವುದರ ಜತೆಗೆ ಸಕಾಲದಲ್ಲಿಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗುವುದು ಎಂದು ಸಕಾಲ ಮಿಷನ್‌ ಅಪರ ನಿರ್ದೇಶಕಿ ಮಮತಾ ಹೇಳಿದರು.
Vijaya Karnataka Web sakala


ಸಕಾಲ ಸಪ್ತಾಹ ಆಚರಣೆಗೆ ಸಂಬಂಧಿಸಿದಂತೆ ಎಲ್ಲಜಿಲ್ಲೆಯ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳ ಜತೆ ಗುರುವಾರ ನಡೆಸಿದ ವಿಡಿಯೋ ಸಂವಾದದಲ್ಲಿಈ ವಿಷಯ ತಿಳಿಸಿದರು.

ಸಕಾಲ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಲಾಖಾವಾರು ಬೇರೆ ಬೇರೆ ದಿನಾಂಕಗಳಲ್ಲಿಹಮ್ಮಿಕೊಳ್ಳಲಾಗಿದೆ. ನ.30ರಿಂದ ಡಿಸೆಂಬರ್‌ 5ರ ವರೆಗೆ ಕಂದಾಯ, ನಗರಾಭಿವೃದ್ಧಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಸಾರಿಗೆ ಇಲಾಖೆಗಳು ಸಕಾಲ ಸಪ್ತಾಹ ಆಚರಿಸಲಿವೆ ಎಂದರು.

ವಿವಿಧ ಕಾರಣಗಳಿಂದ ಕೆಲ ಇಲಾಖೆಗಳಲ್ಲಿ2014ರಿಂದ ಅರ್ಜಿ ಬಾಕಿ ಇವೆ. ಕೆಲವೆಡೆ ಅರ್ಜಿಗಳ ತಿರಸ್ಕಾರದ ಪ್ರಮಾಣ ಹೆಚ್ಚಾಗಿದೆ. ಕೆಲ ಜಿಲ್ಲೆಗಳಲ್ಲಿಶೂನ್ಯ ಸ್ವೀಕೃತಿ ಇರುವುದು ಕಂಡುಬಂದಿದೆ. ಕೆಲವು ಜಿಲ್ಲೆಗಳಲ್ಲಿಸಾವಿರಾರು ಅರ್ಜಿಗಳು ಸ್ವೀಕೃತವಾಗಿವೆ. ಆದ್ದರಿಂದ ಸಕಾಲ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಮತಾ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ್‌ ಮಡಿವಾಳ, ತಹಸೀಲ್ದಾರ ಹೆಚ್‌.ಎನ್‌.ಬಡಿಗೇರ, ಮಂಜುನಾಥ ಡೊಳ್ಳಿನ, ಮೀನಾಕುಮಾರಿ, ಶಿಲ್ಪಾ ಪಾಟೀಲ ಮತ್ತಿತರರು ವಿಡಿಯೋ ಸಂವಾದದಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ