ಆ್ಯಪ್ನಗರ

ಸೇವಾಮನೋಭಾವನೆಯಿಂದ ಕಾರ್ಯನಿರ್ವಹಿಸಲು ಸಲಹೆ

ನವಲಗುಂದ:ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಶಾಲಾ ಮಕ್ಕಳ ಸದಢ ಆರೋಗ್ಯಕ್ಕಾಗಿ ತನುಮನದ ಸೇವೆ ಅಗತ್ಯವಾಗಿದ್ದು,ಮಕ್ಕಳ ಊಟ,ಬಡಸುವಿಕೆ ಹಾಗೂ

ವಿಕ ಸುದ್ದಿಲೋಕ 9 Mar 2016, 5:00 am
ನವಲಗುಂದ:ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಶಾಲಾ ಮಕ್ಕಳ ಸದಢ ಆರೋಗ್ಯಕ್ಕಾಗಿ ತನುಮನದ ಸೇವೆ ಅಗತ್ಯವಾಗಿದ್ದು,ಮಕ್ಕಳ ಊಟ,ಬಡಸುವಿಕೆ ಹಾಗೂ ಆರೋಗ್ಯದ ಬಗ್ಗೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಬೆಕೆಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
Vijaya Karnataka Web tip act sevamanobhavaneyinda
ಸೇವಾಮನೋಭಾವನೆಯಿಂದ ಕಾರ್ಯನಿರ್ವಹಿಸಲು ಸಲಹೆ


ಇಲ್ಲಿನ ತಾ,ಪಂ ಸಬಾಭವನದಲ್ಲಿ ತಾಲೂಕಾ ಅಕ್ಷರ ದಾಸೋಹ ಸಮಿತಿಯಿಂದ ಸೋಮವಾರ ಆಯೋಜಿಸಲಾಗಿದ್ದಅಕ್ಷರ ದಾಸೋಹದ ಅಡುಗೆ ಸಹಾಯಕರ ತರಬೇತಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಡುಗೆ ಸಹಾಯಕಿಯರು ಆಧುನಿಕ ರೀತಿಯಲ್ಲಿ ತಯಾರಿಕೆ ಮತ್ತು ಅಡುಗೆ ಪರಿಕರಗಳನ್ನು ಬಳಸಿಕೊಂಡು ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪ್ರಕಾರ ಸೇವೆ ಸಲ್ಲಿಸಬೇಕು. ಮಕ್ಕಳ ಅಡುಗೆ ಬಡಿಸುವಿಕೆಯಲ್ಲಿ ಅಚ್ಚುಕಟ್ಟಾಗಿ ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳಬೇಕು. ಸದ್ಯದಲ್ಲಿ ಅಡುಗೆ ಸಹಾಯಕಿಯರ ಗೌರವಧನವನ್ನು ಹೆಚ್ಚಿಸುವ ಬಗ್ಗೆ ಸರಕಾರದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ಅಕ್ಷರ ದಾಸೋಹ ಜಿಲ್ಲಾ ಅಧಿಕಾರಿ ಬಿ.ಎಸ್. ಹಾದಿಮನಿ ಅಡುಗೆ ಸಹಾಯಕಿಯರು ಅಡುಗೆ ಸ್ವಚ್ಛತೆ, ಶುಚಿತ್ವ ವಾತಾವರಣ, ಜೊತೆಗೆ ಮಕ್ಕಳನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಇಂದಿನ ದಿನಮಾನದಲ್ಲಿ ಮಹಿಳೆಯರು ಪರುಷರಿಗೆ ಸಮಾನವಾಗಿ ಬದುಕಲು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮುಂದಾಗಬೇಕೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರ್ಯ ಮಾತನಾಡಿದರು. ಶಿವಯೋಗಿ ಜಂಗಣ್ಣವರ ಸಹಾಯಕಿಯರಿಗೆ ಸರ್ಕಾರದ ಅಧಮ್ಯ ಚೇತನದಿಂದ ಪೂರೆಸುವ ಆಹಾರ ಕ್ರಮ, ಅಲ್ಲಿಯ ಸಿಬ್ಬಂದಿ ಅಡುಗೆ ಪದ್ದತಿ ಕುರಿತು ವಿಡಿಯೊ ಮುಖಾಂತರ ತರಬೇತಿ ನೀಡಿದರು.

ಎ.ಬಿ.ಕೊಪ್ಪದ ಪ್ರಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಸೌದಾಗರ, ಬಿ.ಎಸ್.ಮೂಗನೂರಮಠ, ಎಚ್.ಎಚ್.ಕುಕುನೂರ, ಎಸ್.ಎಚ್.ತಿವಾರಿ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ