ಕುಂದಗೋಳ : ಧಾರವಾಡದ ಸಮರ್ಥನಂ ಅಂಗವಿಕಲ ಸಂಸ್ಥೆಯ ಕಾರ್ಯ ವಿಶಾಲವಾಗಿದ್ದು, ತಾಲೂಕಿನ ವಿಶೇಷಚೇತನರು ಸಂಸ್ಥೆಯಿಂದ ಲಾಭ ಪಡೆದು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಿ ಎಂದು ಸಮರ್ಥನಂ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಧಾರವಾಡ ಹಾಗೂ ತಾಪಂ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ವೃತ್ತಿ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಐಸಿ ಸಂಯೋಜಕರಾದ ಪ್ರಕಾಶ ಬಿರಾದಾರ ಮಾತನಾಡಿ, ವಿಶೇಷಚೇತನರು ವಿಕಲತೆಯನ್ನು ಮೆಟ್ಟಿ ನಿಂತು ಗುರಿ ತಲುಪವ ತನಕ ವಿಶ್ರಾಂತಿ ಪಡೆಯದಿರಿ ಎಂದು ಹೇಳಿದರು. ನಂತರ ಡಿಡಿಯು-ಜಿಕೆವಾಯ್ ಕಾರ್ಯಕ್ರಮದ ಕುರಿತು ವಿಶೇಷಚೇತನರಿಗೆ ಮಾಹಿತಿ ನೀಡಲಾಯಿತು.
ತಾಪಂ ನರೆಗಾ ಯೋಜನೆಯ ಸಹಾಯಕ ನಿರ್ದೇಶಕ ಅಜಯ ನಾರಾಯಣ, ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ ಸುಲೋಚನಾ ಇಟಗಿ ಹಾಗೂ ಸಂಸ್ಥೆಯ ಮುಖ್ಯಸ್ಥ ಕೃಷ್ಣಾ ಲಮಾಣಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಪನ್ಮೂಲ ಅಧಿಕಾರಿ ಅನಿಲ್ ರಾಠೋಡ ನಿರೂಪಿಸಿದರು. ಭಾರತಿ ಜಿಯೊಜಿ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಶಕ್ತಿ ಪ್ರಸಾದ, ಭೂಮೇಶ, ಪ್ರವೀಣ ಕಾರ್ಯಕ್ರಮ ನಿರ್ವಹಿಸಿದರು.