ಆ್ಯಪ್ನಗರ

ತಂಬಾಕು ನಿಯಂತ್ರಣ ಕಾರ್ಯಕ್ರಮ

ಹುಬ್ಬಳ್ಳಿ :ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಭಾರತ ಸರಕಾರ 2003ರಲ್ಲಿ ತಂಬಾಕು ನಿಯಂತ್ರಣ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯ ಎಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಪಿ.ಎನ್‌. ಬಿರಾದರ ಹೇಳಿದರು.

Vijaya Karnataka 23 May 2019, 5:00 am
ಹುಬ್ಬಳ್ಳಿ :ತಂಬಾಕು ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಭಾರತ ಸರಕಾರ 2003ರಲ್ಲಿ ತಂಬಾಕು ನಿಯಂತ್ರಣ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯ ಎಂದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಪಿ.ಎನ್‌. ಬಿರಾದರ ಹೇಳಿದರು.
Vijaya Karnataka Web DRW-22 NADAF 1

ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಬುಧವಾರ ತಂಬಾಕು ನಿಯಂತ್ರಣ ಕಾರ್ಯಕ್ರಮ ನಡೆಯಿತು.


ಹುಬ್ಬಳ್ಳಿಯ ಪಾಲಿಕೆ ಸಭಾಭವನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಕಾಯಿದೆಯಲ್ಲಿ ಒಟ್ಟು 33 ಭಾಗಗಳಿವೆ. ಅವುಗಳಲ್ಲಿ ಸೆಕ್ಷ ನ್‌ 4, 5 ಹಾಗೂ 6 ಪ್ರಮುಖ ಆಗಿವೆ. ಇವುಗಳು ತಂಬಾಕು ಉತ್ಪನ್ನಗಳ ಕಾನೂನು ಬಾಹಿರ ಮಾರಾಟ ಹಾಗೂ ಜಾಹೀರಾತು ನಿಷೇಧಿಸುತ್ತವೆ. ಸೆಕ್ಷ ನ್‌ 4ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗುತ್ತದೆ. ಇದರ ಉಲ್ಲಂಘನೆಗೆ ಪ್ರಾಧಿಕೃತ ಅಧಿಕಾರಿಗಳು 200 ರೂ. ವರೆಗೆ ದಂಡ ವಿಧಿಸುತ್ತಾರೆ ಎಂದು ತಿಳಿಸಿದರು.

ಸೆಕ್ಷ ನ್‌ 5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಬಗ್ಗೆ ಜಾಹೀರಾತು ಫಲಕ, ಭಿತ್ತಿ ಪತ್ರ, ಎಲ್‌ಸಿಡಿ ಟಿವಿಗಳ ಮೂಲಕ ಜಾಹೀರಾತು ಪ್ರದರ್ಶನ ಮಾಡುವಂತಿಲ್ಲ. ಇದರ ಉಲ್ಲಂಘನೆಗೆ 2 ವರ್ಷ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಸಾವಿರ ರೂ. ದಂಡ ವಿಧಿಸಲಾಗುವುದು. ಇದೇ ಕಾಯಿದೆ ಅಡಿ 2ನೇ ಬಾರಿ ತಪ್ಪಿತಸ್ಥನಾದರೆ ದಂಡವು ಐದು ಸಾವಿರ ರೂ. ಮತ್ತು ಶಿಕ್ಷೆಯು 5 ವರ್ಷದ್ದಾಗಿರುತ್ತದೆ. ಸೆಕ್ಷ ನ್‌ 6ರ ಅನ್ವಯ ಅಂಗಡಿ ಮಾಲೀಕರು 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಇದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ವಿವರಿಸಿದರು.

ತಂಬಾಕು ಮಾರಾಟಗಾರರು ದೊಡ್ಡ ಫಲಕದ ಮೂಲಕ ಜನರಿಗೆ ಕಾಣುವಂತೆ ಅಂಗಡಿ ಮುಂದೆ ಪ್ರದರ್ಶಿಸಬೇಕು. ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಮೇಲೆ ಶೇ.85 ಅಳತೆಯ ಬಾಯಿ ಕಾನ್ಸರ್‌, ಲಂಗ್ಸ್‌ ರೋಗದ ಕುರಿತಾದ ಚಿತ್ರ ಹಾಗೂ ನಿರ್ದಿಷ್ಟ ಆರೋಗ್ಯ ಸಂದೇಶ ಅಳವಡಿಸಬೇಕು. ಇದನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಇದರ ಉಲ್ಲಂಘನೆಗೆ ದಂಡ ಹಾಗೂ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಸುಜಾತ ಹಸವಿಮಠ, ಮಹಾಂತೇಶ್‌ ಸೇರಿದಂತೆ ಪಾಲಿಕೆ ಆರೋಗ್ಯ ಅಧಿಕಾರಿಗಳು, ಇತರ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ