ಆ್ಯಪ್ನಗರ

ಇಂದು ಗುರುಸ್ಮರಣೆ, ದತ್ತಿ ಪುರಸ್ಕಾರ

ಧಾರವಾಡ : ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಆ.22 ರಂದು ಬೆಳಿಗ್ಗೆ 11ಕ್ಕೆ ಮಳೆಯ ಕಾರಣದಿಂದಾಗಿ ಮುಂದೂಡಲಾಗಿದ್ದ ಆದರ್ಶ ಅಧ್ಯಾಪಕ ದಿ.ಬಸಪ್ಪ ಕರಕಣ್ಣವರ 35ನೇ ಸಂಸ್ಮರಣೆ, ಗುರು ನಮನ ಹಾಗೂ ದತ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ.

Vijaya Karnataka 22 Aug 2019, 5:00 am
ಧಾರವಾಡ : ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಆ.22 ರಂದು ಬೆಳಿಗ್ಗೆ 11ಕ್ಕೆ ಮಳೆಯ ಕಾರಣದಿಂದಾಗಿ ಮುಂದೂಡಲಾಗಿದ್ದ ಆದರ್ಶ ಅಧ್ಯಾಪಕ ದಿ.ಬಸಪ್ಪ ಕರಕಣ್ಣವರ 35ನೇ ಸಂಸ್ಮರಣೆ, ಗುರು ನಮನ ಹಾಗೂ ದತ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ.
Vijaya Karnataka Web today is a memorial a charitable gift
ಇಂದು ಗುರುಸ್ಮರಣೆ, ದತ್ತಿ ಪುರಸ್ಕಾರ


ನಗರದ ಡಯಟ್‌ ಆವರಣದಲ್ಲಿರುವ ಡಾ. ಎಚ್‌.ಎಫ್‌. ಕಟ್ಟಿಮನಿ ಪ್ರೌಢ ಶಿಕ್ಷ ಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಈ ಸಮಾರಂಭವನ್ನು ನಿವೃತ್ತ ಡಿಡಿಪಿಐ ಎಸ್‌.ಬಿ. ಕೊಡ್ಲಿ ಉದ್ಘಾಟಿಸುವರು. ಹುಬ್ಬಳ್ಳಿ ಗ್ರಾಮೀಣ ಬಿಇಓ ಎಸ್‌.ಎಂ. ಹುಡೇದಮನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಬ್ಯಾಹಟ್ಟಿಯ ಕಾಲೇಜು ಪ್ರಾಚಾರ್ಯ ಎಲ್‌.ಎ.ಬೆಲ್ಲದ ಅಧ್ಯಕ್ಷ ತೆ ವಹಿಸುವರು. ಡಯಟ್‌ ಉಪನ್ಯಾಸಕ ಬಿ.ಸಿ. ಭಜಂತ್ರಿ, ಎಸ್‌.ವಿ.ಮರಿಗೌಡರ, ಪರಮೇಶ್ವರ ಯಡ್ರಾವಿ, ವೀರಣ್ಣ ಅಳಗವಾಡಿ, ಫಕ್ಕೀರಪ್ಪ ಚಂದ್ರಣ್ಣವರ, ಪೀರಸಾಬ ಜಮಾದಾರ, ಮಲ್ಲಯ್ಯ ಪೂಜಾರ, ಯಲ್ಲಪ್ಪ ಮಲ್ಲಿಗವಾಡ, ಟಿ.ಸಿ.ರೂಗಿ ಅತಿಥಿಗಳಾಗಿ ಆಗಮಿಸುವರು ಎಂದು ಪ್ರತಿಷ್ಠಾನದ ಸಹಾಯಕ ನಿರ್ದೇಶಕ ಶಂಕರ ಗಂಗಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ