ಆ್ಯಪ್ನಗರ

ಹುಬ್ಬಳ್ಳಿಯಲ್ಲಿ ಇಂದು ಕಲಾವಸಂತ ಕಾರ್ಯಕ್ರಮ

ಹುಬ್ಬಳ್ಳಿ : ಇಲ್ಲಿಯ ಕಲಾ ಸುಜಯ ಸಂಸ್ಥೆಯ ವತಿಯಿಂದ ಭಾರತೀಯ ಶಾಸ್ತ್ರೀಯ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಲಾವಸಂತ ಕಾರ್ಯಕ್ರಮವನ್ನು ಏ.27 ರಂದು ಸಂಜೆ 5.30 ಕ್ಕೆ ಜೆಸಿ ನಗರದ ಸರಸ್ವತಿ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸುಜಯ ಸಂಸ್ಥೆಯ ಮುಖ್ಯಸ್ಥ ಸುಜಯ್‌ ಶಾನಭಾಗ್‌ ತಿಳಿಸಿದರು.

Vijaya Karnataka 27 Apr 2019, 5:00 am
ಹುಬ್ಬಳ್ಳಿ : ಇಲ್ಲಿಯ ಕಲಾ ಸುಜಯ ಸಂಸ್ಥೆಯ ವತಿಯಿಂದ ಭಾರತೀಯ ಶಾಸ್ತ್ರೀಯ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಲಾವಸಂತ ಕಾರ್ಯಕ್ರಮವನ್ನು ಏ.27 ರಂದು ಸಂಜೆ 5.30 ಕ್ಕೆ ಜೆಸಿ ನಗರದ ಸರಸ್ವತಿ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸುಜಯ ಸಂಸ್ಥೆಯ ಮುಖ್ಯಸ್ಥ ಸುಜಯ್‌ ಶಾನಭಾಗ್‌ ತಿಳಿಸಿದರು.
Vijaya Karnataka Web today is an event in hubli
ಹುಬ್ಬಳ್ಳಿಯಲ್ಲಿ ಇಂದು ಕಲಾವಸಂತ ಕಾರ್ಯಕ್ರಮ


ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಶಾಸ್ತ್ರಿಯ ಸಂಸ್ಕೃತಿಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮ ಭಾರತೀಯ ಶಾಸ್ತ್ರೀಯ ಕಲೆಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಸಂಸ್ಕೃತ ವಿದ್ವಾಂಸರಾದ ದಿ.ಡಾ.ಪವನಭಟ್‌ ಅವರಿಗೆ ಸಮರ್ಪಿತವಾಗಲಿದೆ ಎಂದರು.

ಡಾ.ಪವನಭಟ್‌ ಅವರ ಭಾಗವತ ಉಪನ್ಯಾಸಗಳನ್ನಾಧರಿಸಿ ನೃತ್ಯ ನಾಟಕ ಸಂಭವಾಮಿ ಯುಗೇ.. ಯುಗೇ.. ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿದೆ. ನೃತ್ಯ ರೂಪಕದಲ್ಲಿ ನಾಲ್ಕು ವರ್ಷದ ಕಲಾಪ್ರತಿಭೆಯಿಂದ ಹಿಡಿದು 55 ವರ್ಷದ ವರೆಗಿನ ಕಲಾ ಪ್ರತಿಭೆಗಳು ಪ್ರದರ್ಶನದಲ್ಲಿ ಅಭಿನಯಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಹಿರಿಯ ಭರತನಾಟ್ಯ ಗುರುಗಳಾದ ಮಂದಾಕಿನಿ ಉಡುಪಿ, ಕರ್ನಾಟಕ ಶಾಸ್ತ್ರೀಯ ಗಾಯಕಿ ಹೇಮಲತಾ ಸಂಪತ್ತ ಮತ್ತು ಶಾಸ್ತ್ರೀಯ ಸಂಗೀತ ಪೋಷಿಸುತ್ತಿರುವ ಸುನಾದ ಗಾನಸುಧಾ ಸಂಸ್ಥೆಯ ಜೀವಮಾನದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದರು.

ಸಂಸ್ಕೃತ ವಿದ್ವಾಂಸರಾದ ಕಂಠಪಲ್ಲಿ ಸಮೀರ್‌ ಆಚಾರ್ಯ, ಪ್ರಧಾನ ಆರ್ಚಕರಾದ ಶ್ರೀಪಾದ ಭಟ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ಕಲಾ ಸುಜಯ ಸಂಸ್ಥೆಯು ಕೊಂಕಣಿ ಚಿತ್ರರಂಗದಲ್ಲಿ ಉತ್ತಮ ಅಭಿನಯ ಎಂಬುವಂತ ಗೌರವದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಂದನಾ ಶಾನಭಾಗ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ