ಆ್ಯಪ್ನಗರ

ಇಂದು ಎಂಜನಿಯರ್ಸ್ ದಿನಾಚರಣೆ

ಧಾರವಾಡ : ನಗರದ ಪುರಸ್ಕಾರ ಸಂಸ್ಥೆ, ಜಾಗೃತಿ ವೇದಿಕೆ ಹಾಗೂ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಆಶ್ರಯದಲ್ಲಿಸೆ. 15 ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಕಾರ್ಗಿಲ್‌ ಸ್ತೂಪದಲ್ಲಿಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಎಂಜನಿಯರ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 15 Sep 2019, 5:00 am
ಧಾರವಾಡ : ನಗರದ ಪುರಸ್ಕಾರ ಸಂಸ್ಥೆ, ಜಾಗೃತಿ ವೇದಿಕೆ ಹಾಗೂ ಉತ್ತರ ಕರ್ನಾಟಕ ಸೈನಿಕ ಕಲ್ಯಾಣ ಸಮಿತಿ ಆಶ್ರಯದಲ್ಲಿಸೆ. 15 ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಕಾರ್ಗಿಲ್‌ ಸ್ತೂಪದಲ್ಲಿಭಾರತ ರತ್ನ ಸರ್‌. ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಎಂಜನಿಯರ್ಸ್ ಡೇ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web today is engineers day
ಇಂದು ಎಂಜನಿಯರ್ಸ್ ದಿನಾಚರಣೆ


ಅಂದಿನ ಕಾರ್ಯಕ್ರಮದಲ್ಲಿಸೈನ್ಯದಲ್ಲಿಸೇವೆ ಸಲ್ಲಿಸಿದ ಎಂಜನಿಯರರನ್ನು ಮತ್ತು ಸೈನ್ಯದ ಎಂಜನಿಯರಿಂಗ್‌ ಗ್ರುಪ್‌ನಲ್ಲಿಸೇವೆ ಸಲ್ಲಿಸುತ್ತಿರುವ ಸೈನಿಕರ ಜತೆಗೆ ಸಮಾಜದ ವಿವಿಧ ರಂಗಗಳಲ್ಲಿಸೇವೆ ಸಲ್ಲಿಸುತ್ತಿರುವ ಎಂಜನಿಯರರನ್ನೂ ಈ ವೇಳೆ ಸನ್ಮಾನಿಸಿ ಗೌರವಿಸಲಾಗುವುದು.

ಇದೇ ಸಂದರ್ಭದಲ್ಲಿಎಂಜನಿಯರ್‌ಗಳಾದ ಬಿ. ಎಚ್‌. ಬೆಳಲದವರ, ಅರವಿಂದ ಕಪಲಿ, ಎ.ಎಚ್‌. ಅಣ್ಣಿಗೇರಿ, ರಾಜು ಪಾಟೀಲಕುಲಕರ್ಣಿ, ನರಸಿಂಹ ಪರಾಂಜಪೆ ಇವರನ್ನು ಗೌರವಿಸಲಾಗುವುದು. ನಿವೃತ್ತ ಬ್ರಿಗೇಡಿಯರ್‌ ಎಸ್‌.ಜಿ. ಭಾಗವತ ಅಧ್ಯಕ್ಷತೆ ವಹಿಸುವರು.

ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕು ಎಂದು ಸಂಘಟಕರಾದ ಕೃಷ್ಣ ಜೋಶಿ ಹಾಗೂ ಚಂದ್ರಶೇಖರ ಅಮೀನಗಡ ಪ್ರಕಟಣೆಯಲ್ಲಿಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ