ಆ್ಯಪ್ನಗರ

ನಾಳೆ ಕೃಷ್ಣಸ್ಮೃತಿ ಸಂಗೀತ ಕಾರ್ಯಕ್ರಮ

ಹುಬ್ಬಳ್ಳಿ: ಹಿಂದುಸ್ತಾನಿ ಸಂಗೀತದ ಗಾಯಕ, ಸಂಗೀತ ಶಿಕ್ಷಕ, ಪ್ರಸಾರಕ, ಚಿಂತಕ ಪಂ.ಕೃಷ್ಣಾಜಿ ಕುರ್ತಕೋಟಿ ಅವರ ಸಂಸ್ಮರಣೆಯಲ್ಲಿಜ. 19ರಂದು ಬಸವೇಶ್ವರನಗರದಲ್ಲಿರುವ ಡಾ. ಕೆ.ಎಸ್‌. ಶರ್ಮಾ ಸಭಾಭವನದಲ್ಲಿದಿನಪೂರ್ತಿ ಕೃಷ್ಣಸ್ಮೃತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ.ಕೃಷ್ಣಾಜಿ ಕುರ್ತಕೋಟಿಯವರ ಶಿಷ್ಯಂದಿರು ಗಾಯನ-ವಾದನಗಳ ಸೇವೆ ಸಲ್ಲಿಸಲಿದ್ದಾರೆ.

Vijaya Karnataka 18 Jan 2020, 5:00 am
ಹುಬ್ಬಳ್ಳಿ: ಹಿಂದುಸ್ತಾನಿ ಸಂಗೀತದ ಗಾಯಕ, ಸಂಗೀತ ಶಿಕ್ಷಕ, ಪ್ರಸಾರಕ, ಚಿಂತಕ ಪಂ.ಕೃಷ್ಣಾಜಿ ಕುರ್ತಕೋಟಿ ಅವರ ಸಂಸ್ಮರಣೆಯಲ್ಲಿಜ. 19ರಂದು ಬಸವೇಶ್ವರನಗರದಲ್ಲಿರುವ ಡಾ. ಕೆ.ಎಸ್‌. ಶರ್ಮಾ ಸಭಾಭವನದಲ್ಲಿದಿನಪೂರ್ತಿ ಕೃಷ್ಣಸ್ಮೃತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ.ಕೃಷ್ಣಾಜಿ ಕುರ್ತಕೋಟಿಯವರ ಶಿಷ್ಯಂದಿರು ಗಾಯನ-ವಾದನಗಳ ಸೇವೆ ಸಲ್ಲಿಸಲಿದ್ದಾರೆ.
Vijaya Karnataka Web tomorrow krishnasmriti music program
ನಾಳೆ ಕೃಷ್ಣಸ್ಮೃತಿ ಸಂಗೀತ ಕಾರ್ಯಕ್ರಮ


ಅಂದು ಬೆಳಗ್ಗೆ್ಗ 9 ಕ್ಕೆ ಆರಂಭಗೊಳ್ಳುವ ಬೆಳಗಿನ ಸಂಗೀತ ಕಚೇರಿ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ರಮ್ಯಾ, ವೈಷ್ಣವಿ, ಸೌಮ್ಯ ಕುರ್ತಕೋಟಿ ಸಹೋದರಿಯರು, ಮಹಿಮಾ ಅಘನಾಶಿನಿ, ಲಕ್ಷಿತ್ರ್ಮೕ ಪರ್ವತಿಕರ, ಮೂಕಾಂಬಿಕಾ ಭಟ್‌, ಆಶಾ ಭಟ್‌ ಹಾಗೂ ಮಾನಸಾ ಗ್ರಾಮಪುರೋಹಿತ ತಮ್ಮ ಗಾಯನದೊಂದಿಗೆ ಗುರುಗಳಿಗೆ ನಮನ ಸಲ್ಲಿಸಲಿದ್ದಾರೆ. ಸಂಜೆ 5 ಗಂಟೆಗೆ ಆರಂಭಗೊಳ್ಳುವ ಸಂಗೀತ ಕಾರ್ಯಕ್ರಮದಲ್ಲಿಅನಿತಾ ಫಡ್ನವೀಸ, ಮುಗ್ಧಾ ಫಡ್ನವೀಸ, ರಮೇಶ ಭಟ್‌, ವಿದ್ಯಾ ದೀಕ್ಷಿತ, ಶ್ರೀದೇವಿ ಶಿರೋಳ ಅವರಿಂದ ಗಾಯನ, ಹರೀಶ ಕುಲಕರ್ಣಿ ಮತ್ತು ಡಾ. ರಾಘವೇಂದ್ರ ಕುಲಕರ್ಣಿಯವರಿಂದ ಕೊಳಲುವಾದನದ ಸೇವೆ ನಡೆಯಲಿದೆ. ವಿಠ್ಠಲ ಕಟ್ಟೆಣ್ಣವರ, ನಿಶಾಂತ ದಿವಟೆ ಹಾರ್ಮೋನಿಯಂ, ಪ್ರಹ್ಲಾದ ದೇಶಪಾಂಡೆ, ಅಜಿತ ಭಾತಕಾಂಡೆ, ಶಂಕರ ಕುಲಕರ್ಣಿ ತಬಲಾ ಸಾಥ್‌ ಸಂಗತ್‌ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ