ಆ್ಯಪ್ನಗರ

ಎನ್‌ಸಿಸಿ ಕೆಡೆಟ್ಸ್‌ಗಳಿಂದ ಪಥಸಂಚಲನ

ಧಾರವಾಡ : ಪ್ರಕೃತಿ ರಕ್ಷ ಣೆಯೇ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ಲಾಸ್ಟಿಕ್‌ ಚೀಲಗಳ ಬಳಕೆ ಕಡಿಮೆ ಮಾಡಬೇಕು ಎಂದು 24 ಕರ್ನಾಟಕ ಬಟಾಲಿಯನ್‌ ಎನ್‌ಸಿಸಿ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಜೆ.ಡಿ. ಸಹಸ್ತ್ರಬುದ್ಧೆ ಹೇಳಿದರು.

Vijaya Karnataka 11 Jul 2019, 5:00 am
ಧಾರವಾಡ : ಪ್ರಕೃತಿ ರಕ್ಷ ಣೆಯೇ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ಲಾಸ್ಟಿಕ್‌ ಚೀಲಗಳ ಬಳಕೆ ಕಡಿಮೆ ಮಾಡಬೇಕು ಎಂದು 24 ಕರ್ನಾಟಕ ಬಟಾಲಿಯನ್‌ ಎನ್‌ಸಿಸಿ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಜೆ.ಡಿ. ಸಹಸ್ತ್ರಬುದ್ಧೆ ಹೇಳಿದರು.
Vijaya Karnataka Web DRW-9MAILAR08
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ 24 ಕರ್ನಾಟಕ ಬಟಾಲಿಯನ್‌ ಎನ್‌ಸಿಸಿ ಕೆಡೆಟ್ಸ್‌ಗಳಿಂದ ಪಥಸಂಚಲನ ನಡೆಯಿತು.


ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ 24 ಕರ್ನಾಟಕ ಬಟಾಲಿಯನ್‌ ಎನ್‌ಸಿಸಿ ಕೆಡೆಟ್ಸ್‌ಗಳಿಂದ ಸ್ವಚ್ಛತೆ ಹಾಗೂ ಪರಿಸರ ಮಾಲಿನ್ಯ ನಿರ್ಮೂಲನೆ ಜನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದಲ್ಲಿನ ಜನರು ವ್ಯಾಜ್ಯ ವಸ್ತುಗಳನ್ನು ಸುಡುವುದು, ವಾಹನಗಳ ಮಿತಬಳಕೆ ಮಾಡುವುದು, ಧ್ವನಿವರ್ಧಕಗಳನ್ನು ಮಿತವಾಗಿ ಬಳಸುವುದು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಸರಿಯಾಗಿ ಬಳಕೆ ಮಾಡಬೇಕು. ಪ್ರಕೃತಿಯನ್ನು ಸರ್ವನಾಶದಿಂದ ಉಳಿಸುವುದರ ಜತೆಗೆ ಮಾನವಕುಲದ ಏಳಿಗೆಗಾಗಿ ಮತ್ತು ರಕ್ಷ ಣೆಗಾಗಿ ಪ್ರಯತ್ನಿಸಬೇಕು ಎಂದರು.

ಇದೇ ವೇಳೆ 24 ಕರ್ನಾಟಕ ಬಟಾಲಿಯನ್‌ ಎನ್‌ಸಿಸಿ ಎನ್‌ಸಿಸಿ ಕೆಡೆಟ್ಸ್‌ಗಳು ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಆವರಣದಿಂದ ಶ್ರೀನಗರದ ವೃತ್ತದವರೆಗೆ ಪಥ ಸಂಚಲನ ಮಾಡುವ ಮೂಲಕ ಕವಿವಿ ಬಡಾವಣೆಗಳ ಜನರಿಗೆ, ವಿದ್ಯಾರ್ಥಿವೃಂದಕ್ಕೆ, ಜಾಗೃತಿ ಮೂಡಿಸಿದರು. ಅಲ್ಲದೇ ಭಿತ್ತಿಫಲಕಗಳನ್ನು ಹಿಡಿದು ಪ್ಲಾಸ್ಟಿಕ್‌ ಉಪಯೋಗ ನಿಷೇಧ ಹಾಗೂ ಪರಿಸರ ಕಾಳಜಿಯ ಕುರಿತು ಅರಿವು ಮೂಡಿಸುವ ಘೋಷಣೆಗಳನ್ನು ಕೂಗಿದರು.

ಲೆಪ್ಟಿನೆಂಟ್‌ ಕರ್ನಲ್‌ ವಿವೇಕ ಸಾವನಗೌಡರ್‌, ಸುಪ್ರಿಡೆಂಟ್‌ ಬಿ.ಎಚ್‌. ಮಿಶ್ರೀಕೋಟಿ, ಎಂ.ಎಚ್‌.ಮುಲ್ಲಾ, ರಾಜೇಶ ಕಲಕಂಬಕರ, ಎಂ.ಜಿ. ಹಿರೇಮಠ, ಎ.ಜಿ ಕೋರಿ, ಕೆ.ವೈ. ಚೌಗಲೆ, ಮಂಜುನಾಥ ಕಂಬಳಿ, ಮಾಲಾಶ್ರೀ ಸೇರಿದಂತೆ ವಿವಿಧ ಕ್ಷೇತ್ರದ ಸೈನಿಕರು ಸೇರಿದಂತೆ ಎನ್‌ಸಿಸಿ ಕೆಡೆಟ್ಸ್‌ಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ