ಆ್ಯಪ್ನಗರ

ಗಾಂಜಾ ಸಾಗಣೆ: ಇಬ್ಬರ ಬಂಧನ

ಧಾರವಾಡ : ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಎನ್‌ಟಿಟಿಎಫ್‌ ಬಳಿ ಗುರುವಾರ ನಡೆದಿದೆ.

Vijaya Karnataka 12 Jul 2019, 5:00 am
ಧಾರವಾಡ : ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಎನ್‌ಟಿಟಿಎಫ್‌ ಬಳಿ ಗುರುವಾರ ನಡೆದಿದೆ.
Vijaya Karnataka Web trafficking in marijuana custody of two men
ಗಾಂಜಾ ಸಾಗಣೆ: ಇಬ್ಬರ ಬಂಧನ


ಇಲ್ಲಿನ ಚಿರಂತಿಮಠ ಗಾರ್ಡನ್‌ನ ವಿಶಾಲ ನಾರಾಯಣ ಮೋಟೆಕರ (25), ಮದಾರಮಡ್ಡಿಯ ವಿಷ್ಣು ಗಿರೀಶ ಕೊಂಡಪಲ್ಲಿ (29) ಬಂಧಿತ ಆರೋಪಿಗಳು. ಬಂಧಿತರಿಂದ 1 ಕೆಜಿ. 45 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಶಹರ ಠಾಣೆ ಇನ್‌ಸ್ಪೆಕ್ಟರ್‌ ಲಕ್ಷ್ಮೀಕಾಂತ ತಳವಾರ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಪಿಐ ಆರ್‌.ಎಫ್‌. ಭರಮಪ್ಪನವರ, ಸಿಬ್ಬಂದಿ ಎಸ್‌.ಬಿ. ಪಾಟೀಲ, ಎಸ್‌.ಎಚ್‌. ಭೀಮನಗೌಡರ, ಮಹಾಂತೇಶ ಬಡೆಪ್ಪನವರ, ಪ್ರತಾಪ ಮಾಳಗಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ