ಆ್ಯಪ್ನಗರ

ಎಲ್ಲೆಲ್ಲೂ ಸಂಕ್ರಾಂತಿ ಸಡಗರ

​ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಸಂಕ್ರಾಂತಿ (ಸಂಕ್ರಮಣ) ಹಬ್ಬವನ್ನು ಸಡಗರ, ಸಂಭ್ರಮ ಅಷ್ಟೇ ಅಲ್ಲದೇ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ಸಮೀಪದ ನದಿ, ಹೊಂಡಗಳು ಇರುವ ಪುಣ್ಯಕ್ಷೇತ್ರಗಳಿಗೆ ಕುಟುಂಬ ಸಮೇತ ಹೋಗುತ್ತಾರೆ. ಅಲ್ಲಿಯೇ ತಾವು ತೆಗೆದುಕೊಂಡು ಹೋದ

Vijaya Karnataka 15 Jan 2020, 5:00 am
ವಿಜಯಕುಮಾರ ಪೂಜಾರಿ
Vijaya Karnataka Web SANKRANTI072036

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಸಂಕ್ರಾಂತಿ (ಸಂಕ್ರಮಣ) ಹಬ್ಬವನ್ನು ಸಡಗರ, ಸಂಭ್ರಮ ಅಷ್ಟೇ ಅಲ್ಲದೇ ವಿಶಿಷ್ಟವಾಗಿ ಆಚರಿಸಲಾಗುತ್ತದೆ.
ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ಸಮೀಪದ ನದಿ, ಹೊಂಡಗಳು ಇರುವ ಪುಣ್ಯಕ್ಷೇತ್ರಗಳಿಗೆ ಕುಟುಂಬ ಸಮೇತ ಹೋಗುತ್ತಾರೆ. ಅಲ್ಲಿಯೇ ತಾವು ತೆಗೆದುಕೊಂಡು ಹೋದ ಬುತ್ತಿಯನ್ನು ಬಿಚ್ಚಿ ಸಾಮೂಹಿಕ ಭೋಜನ ಮಾಡುತ್ತಾರೆ.

ಸಂಕ್ರಾಂತಿ ಮೂರ್ನಾಲ್ಕು ದಿನಗಳ ಹಿಂದೆಯೇ ಪೂರ್ವ ಸಿದ್ಧತೆ ಶುರುವಾಗಿರುತ್ತದೆ. ಕಟಕ ರೊಟ್ಟಿ, ಕರ್ಚಿಕಾಯಿ, ಎಳ್ಳು ಹೋಳಿಗೆಗಳನ್ನು ಎರಡ್ಮೂರು ದಿನ ಮುಂಚಿತವಾಗಿಯೇ ಮಾಡಿದರೆ, ಹೂರಣದ ಹೋಳಿಗೆ, ಗೋಧಿ ಹುಗ್ಗಿ, ಮುಳ್ಳಗಾಯಿ ಪಲ್ಯೆ (ಬದ್ನೆಕಾಯಿ), ಬರ್ತಾ, ಹೆಸರು ಕಾಳು ಪಲ್ಯೆ ಸೇರಿದಂತೆ ಅನೇಕ ಭಕ್ಷ್ಯಗಳನ್ನು ಹಿಂದಿನ ರಾತ್ರಿಯಿಂದಲೇ ತಯಾರಿಸಿಕೊಂಡಿರುತ್ತಾರೆ.

ಕೃಷಿ ಆಧಾರಿತ ಕುಟುಂಬಗಳಲ್ಲಿಎತ್ತಿನ ಬಂಡಿಯಲ್ಲಿಹೊಲಗಳಿಗೆ ಹೋಗುವುದು ಸಂಪ್ರದಾಯ. ಬುಟ್ಟಿಯಲ್ಲಿಬುತ್ತಿ ಮಾಡಿಕೊಂಡು ಮನೆ ಜನರೆಲ್ಲಾ ಎತ್ತಿನ ಬಂಡಿಯಲ್ಲಿಹೊಲಕ್ಕೆ ತೆರಳುವುದೇ ಒಂದು ಸಂಭ್ರಮ. ಜೊತೆಗೆ ಎತ್ತುಗಳನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಕಾಲಿಗೆ, ಕೊರಳಿಗೆ ಗೆಜ್ಜೆಗಳನ್ನು ಕಟ್ಟಿ ಎತ್ತಿನ ಬಂಡಿಗಳಲ್ಲಿಹೊಲಗಳಿಗೆ ಹೋಗುವುದು ಮತ್ತೊಂದು ವಿಶೇಷ.

ಎಳ್ಳುಬೆಲ್ಲವಿನಿಮಯ
ಸಂಕ್ರಾಂತಿ ದಿನದಂದು ಹಗಲಿನಲ್ಲಿಪುಣ್ಯಕ್ಷೇತ್ರ, ಪುಣ್ಯ ನದಿ, ಹೊಲ, ದೇವಸ್ಥಾನಗಳಿಗೆ ಹೋಗಿ ಬರುವ ಜನರು, ಅದೇ ದಿನ ರಾತ್ರಿ ಪರಸ್ಪರ ಎಳ್ಳು ಬೆಲ್ಲವಿನಿಮಯ ಮಾಡಿಕೊಳ್ಳುತ್ತಾರೆ. ಎಳ್ಳು ಬೆಲ್ಲದಂತಹ ಸಿಹಿ ಜತೆಗೆ ಚಿಕ್ಕಮಕ್ಕಳು ಗಾಳಿಪಟ ಹಾರಿಸುವಲ್ಲಿನಿರತರಾಗುತ್ತಾರೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ವಿಶೇಷವಾಗಿದೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ.

ಇಲ್ಲಿಗೆ ಭೇಟಿ
ಸಂಕ್ರಾಂತಿ ದಿನ ಹುಬ್ಬಳ್ಳಿ ಸಿದ್ಧಾರೂಢ ಮಠ, ಧಾರವಾಡ ಮುರುಘಾಮಠಕ್ಕೆ ದರ್ಶನಕ್ಕೆ ಆಗಮಿಸುತ್ತಾರೆ. ನವಲಗುಂದ ಸಂಗಮೇಶ್ವರ ಜಾತ್ರೆ, ಕೊಂಡಿಕೊಪ್ಪ ಕ್ರಾಸ್‌ನಲ್ಲಿಸವಳ ಹಳ್ಳ ಜಾತ್ರೆಸೇರಿದಂತೆ ವಿವಿಧೆಡೆ ಜಾತ್ರಾ ಮಹೋತ್ಸವ ನಡೆಯುತ್ತವೆ. ಬಹುತೇಕರು ಸಂಕ್ರಾಂತಿಯ ಹಬ್ಬದ ನಿಮಿತ್ತವೇ ವಿವಿಧ ಊರು ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ಬೇರೆ-ಬೇರೆ ಸ್ಥಳದಲ್ಲಿರುವವರು ತಮ್ಮೂರಿಗೆ ಬಂದು ಕುಟುಂಬ ಸದಸ್ಯರೊಂದಿಗೆ ಹಬ್ಬದ ಆಚರಣೆ ಮಾಡುವುದು ಮತ್ತೊಂದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ