ಆ್ಯಪ್ನಗರ

ಹುಬ್ಬಳ್ಳಿ-ಧಾರವಾಡದ 11 ಪಿಐಗಳ ವರ್ಗಾವಣೆ

ಹುಬ್ಬಳ್ಳಿ : ರಾಜ್ಯ ಪೊಲೀಸ್‌ ಇಲಾಖೆ ಶುಕ್ರವಾರ 110ಕ್ಕೂ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, ಈ ಪೈಕಿ ಹು-ಧಾ ಮಹಾನಗರ ಕಮಿಷ್ನರೇಟ್‌ ವ್ಯಾಪ್ತಿಯ 9, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯ ಇಬ್ಬರು ಸೇರಿ 11 ಇನ್ಸಪೆಕ್ಟರ್‌ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

Vijaya Karnataka 13 Jul 2019, 5:00 am
ಹುಬ್ಬಳ್ಳಿ : ರಾಜ್ಯ ಪೊಲೀಸ್‌ ಇಲಾಖೆ ಶುಕ್ರವಾರ 110ಕ್ಕೂ ಪೊಲೀಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, ಈ ಪೈಕಿ ಹು-ಧಾ ಮಹಾನಗರ ಕಮಿಷ್ನರೇಟ್‌ ವ್ಯಾಪ್ತಿಯ 9, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯಾಪ್ತಿಯ ಇಬ್ಬರು ಸೇರಿ 11 ಇನ್ಸಪೆಕ್ಟರ್‌ಗಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
Vijaya Karnataka Web transfer of 11 pi from hubli dharwad
ಹುಬ್ಬಳ್ಳಿ-ಧಾರವಾಡದ 11 ಪಿಐಗಳ ವರ್ಗಾವಣೆ


ಹು-ಧಾ ಕಮಿಷ್ನರೇಟ್‌ ಘಟಕದ ಕಸಬಾಪೇಟೆ ಪೊಲೀಸ್‌ ಠಾಣೆ ಪಿಐ ಸುರೇಶ ಕುಂಬಾರ್‌ ಅವರನ್ನು ಕೇಶ್ವಾಪುರ ಠಾಣೆಗೆ ವರ್ಗಾವಣೆಗೊಳಿಸಿದ್ದರೆ, ಅಲ್ಲಿದ್ದ ಪಿಐ ಪ್ರಭು ಸೂರೀನ ಅವರನ್ನು ಎಪಿಎಂಸಿ ನವನಗರ ಠಾಣೆ ವರ್ಗ ಮಾಡಿದೆ. ಎಪಿಎಂಸಿ ನವನಗರ ಠಾಣೆ ಪಿಐ ಎಸ್‌.ಆರ್‌. ನಾಯ್ಕ ಹು-ಧಾ ಸಿಸಿಬಿಗೆ ವರ್ಗಾವಣೆ ಆಗಿದ್ದರೆ, ವಾಡಿ ರೈಲ್ವೆ ಪೊಲೀಸ್‌ ಠಾಣೆಯ ಶ್ಯಾಮರಾಜ್‌ ಸಜ್ಜನ್‌ ಕಸಬಾಪೇಟೆಗೆ ವರ್ಗವಾಗಿದ್ದಾರೆ. ಇನ್ನು ಪಿಟಿಎಸ್‌ ಖಾನಪುರ ಪಿಐ ವಿನಾಯಕ ಬಡಿಗೇರ್‌ ಹು-ಧಾ ಪೂರ್ವ ಸಂಚಾರ ಠಾಣೆಗೆ ವರ್ಗ ಆಗಿದ್ದರೆ, ಆ ಠಾಣೆಯಲ್ಲಿದ್ದ ಪಿಐ ಶ್ರೀಪಾದ ಜಲ್ದೆ ಅವರ ವರ್ಗಾವಣೆ ಕಾಯ್ದಿರಿಸಲಾಗಿದೆ.

ಅದರಂತೆ ಸ್ಥಳ ನಿರೀಕ್ಷೆಯಲ್ಲಿದ್ದ ರತ್ನಕುಮಾರ ಜೀರಿಗ್ಯಾಳ ಹು-ಧಾ ಉತ್ತರ ಸಂಚಾರ ಠಾಣೆಗೆ ವರ್ಗವಾಗಿದ್ದರೆ, ಅಲ್ಲಿದ್ದ ಪಿಐ ಪ್ರಶಾಂತ ನಾಯ್ಕ ಅವರು ಸ್ಥಳ ನಿರೀಕ್ಷೆಯಲ್ಲಿದ್ದಾರೆ. ಅಶೋಕನಗರ ಠಾಣೆಗೆ ಗದಗ ಜಿಲ್ಲೆಯ ಡಿಎಸ್‌ಬಿ ಯಲ್ಲಿದ್ದ ಪಾಟೀಲ್‌ ಎಚ್‌.ಆರ್‌. ಅವರನ್ನು ವರ್ಗಾವಣೆಗೊಳಿಸಿದೆ. ಈ ಠಾಣೆಯ ಪಿಐ ಜಗದೀಶ ಹಂಚನಾಳ ಅವರ ವರ್ಗಾವಣೆ ಸ್ಥಳ ಕಾಯ್ದಿರಿಸಿದೆ. ಕಮರಿಪೇಟೆ ಪೊಲೀಸ್‌ ಠಾಣೆ ಪಿಐ ನಂದಿಶ್ವರ ಕುಂಬಾರ್‌ ಅವರನ್ನು ಬೆಳಗಾವಿ ಉತ್ತರ ಸಂಚಾರ ಠಾಣೆಗೆ ವರ್ಗಾವಣೆಗೊಳಿಸಿದೆ.

ಸಿಟಿ ಎಸ್‌ಬಿಯಲ್ಲಿದ್ದ ಮಹಾಂತೇಶ ಸಜ್ಜನ್‌ ಎಸಿಬಿಗೆ ವರ್ಗವಾಗಿದ್ದರೆ, ಕಾರವಾರ ಹೆಸ್ಕಾಂನಲ್ಲಿದ್ದ ಮಲ್ಲಪ್ಪ ಎಚ್‌.ಬಿದರಿ ಧಾರವಾಡ ಡಿಸಿಐಬಿ ಗೆ ವರ್ಗಾವಣೆಗೊಂಡಿದ್ದಾರೆ.ಇನ್ನು ಧಾರವಾಡ ಮಹಿಳಾ ಪೊಲೀಸ್‌ ಠಾಣೆ ಪಿಐ ಪುಷ್ಪಲತಾ ಎನ್‌ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ