ಆ್ಯಪ್ನಗರ

ಹುಬ್ಬಳ್ಳಿ ಕೊರೊನಾ ಸೋಂಕಿತ ವ್ಯಕ್ತಿ ಎಲ್ಲೆಲ್ಲಿ ಓಡಾಡಿದ್ದರು? ಇಲ್ಲಿದೆ ಟ್ರಾವೆಲ್ ಹಿಸ್ಟರಿ

ಇಂದು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ಕಮರಿಪೇಟೆ ಮುಲ್ಲಾ ಓಣಿಯ 27 ವರ್ಷದ ಈ ವ್ಯಕ್ತಿಯು ರಾಜ್ಯದ 194 ನೇ ರೋಗಿಯಾಗಿರುವುದರಿಂದ ಪಿ-194 ಎಂದು ಗುರುತಿಸಲಾಗುತ್ತಿದೆ.

Vijaya Karnataka Web 9 Apr 2020, 8:16 pm
ಹುಬ್ಬಳ್ಳಿ: ಇಂದು ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೋವಿಡ್-19 ಕೊರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿಯ ಕಮರಿಪೇಟೆ ಮುಲ್ಲಾ ಓಣಿಯ 27 ವರ್ಷದ ಈ ವ್ಯಕ್ತಿಯು ರಾಜ್ಯದ 194 ನೇ ರೋಗಿಯಾಗಿರುವುದರಿಂದ ಪಿ-194 ಎಂದು ಗುರುತಿಸಲಾಗುತ್ತಿದೆ.
Vijaya Karnataka Web Coronavirus test tube


ಇವರು ಮಾರ್ಚ್ 16 ರಂದು ತನ್ನ ಸಹೋದರನೊಂದಿಗೆ ಹುಬ್ಬಳ್ಳಿಯಿಂದ ಹೈದರಾಬಾದಗೆ ವಿ.ಆರ್.ಎಲ್ ಬಸ್ ಮೂಲಕ ಪ್ರಯಾಣಿಸಿ, ಮಾ.17 ರಂದು ಬೆಳಿಗ್ಗೆ 5.30 ಕ್ಕೆ ಹೈದರಾಬಾದ ತಲುಪಿದ್ದರು.ಅಂದು ಬೆಳಿಗ್ಗೆ 8. 45ಕ್ಕೆ ಹೈದರಾಬಾದನಿಂದ ವಿಮಾನದ ಮುಖಾಂತರ ಬೆಳಿಗ್ಗೆ 10.55 ಕ್ಕೆ ದೆಹಲಿಗೆ ತಲುಪಿದರು.

ಮಾ.17 ರಂದು ದೆಹಲಿಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಕೆಲಸವನ್ನು ಮುಗಿಸಿ ವಾಸ್ತವ್ಯ ಮಾಡಿದ್ದರು.ಮಾ.18 ರಂದು ಬೆಳಿಗ್ಗೆ 5. 45 ಕ್ಕೆ ದೆಹಲಿಯಿಂದ ಹೊರಟು ಆಗ್ರಾವನ್ನು ಬೆಳಿಗ್ಗೆ 9:00 ಗಂಟೆಗೆ ತಲುಪಿ, ಆಗ್ರಾದಿಂದ ಸಾಯಂಕಾಲ 5.45 ಕ್ಕೆ ಹೊರಟು ಗೋಮತಿ ಎಕ್ಸಪ್ರೆಸ್ ರೈಲಿನ ಮುಖಾಂತರ ದೆಹಲಿಯನ್ನು ರಾತ್ರಿ 7: 00 ಗಂಟೆಗೆ ತಲುಪಿದ್ದಾರೆ.

ನಂಜನಗೂಡಿನಲ್ಲಿ ನಂಜು ಹರಡಿದ ಜ್ಯುಬಿಲಿಯೆಂಟ್ ಕಾರ್ಖಾನೆ ವಿರುದ್ಧ ಕ್ರಮ: ಸೋಮಣ್ಣ

ನಂತರ ಮಾ. 19 ರಂದು ಏರ್‌ ಏಷಿಯಾ ವಿಮಾನದ ಮುಖಾಂತರ ಬೆಳಿಗ್ಗೆ 5 . 50 ಕ್ಕೆ ದೆಹಲಿಯಿಂದ ಹೊರಟು ಬೆಳಿಗ್ಗೆ 8 . 30ಕ್ಕೆ ಮುಂಬೈ ತಲುಪಿದ್ದಾರೆ. ಅದೇ ದಿನ ರಾತ್ರಿ 9 ಗಂಟೆಗೆ ವಿ.ಆರ್.ಎಲ್. ಬಸ್ ಸಂಖ್ಯೆ : MH09 EM3230 ರ ಮುಖಾಂತರ ಹೊರಟು ,ಮಾ.20 ರಂದು ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿ ಹಳೆ ಬಸ್ ನಿಲ್ದಾಣ ತಲುಪಿದ್ದಾರೆ. ಅಲ್ಲಿಂದ ಆಟೋ ಮುಖಾಂತರ ಹುಬ್ಬಳ್ಳಿ ಮುಲ್ಲಾ ಓಣಿ , ಕಮರಿಪೇಟೆಯ ತನ್ನ ಮನೆಗೆ ತಲುಪಿದ್ದಾರೆ.

ಸಾವಿನ ಮನೆಯ ಕದ ತಟ್ಟಿ ಮರಳಿದಂತೆ: ಕೊರೊನಾ ಗೆದ್ದ ಭಾರತೀಯ ಮೂಲದ ಮಹಿಳೆಯ ಅನುಭವ!

ಈ ವ್ಯಕ್ತಿಯನ್ನು ರೋಗದ ಸಂಶಯದ ಮೇಲೆ ಏ.6 ರಿಂದ ಹೋಟೆಲೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು. ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್,ಆಟೋ ಗಳಲ್ಲಿನ ಸಹಪ್ರಯಾಣಿಕರು ಹಾಗೂ ವಾಸ್ತವ್ಯದ ಸುತ್ತ ಮುತ್ತ ಪ್ರದೇಶದ ಸಾರ್ವಜನಿಕರಿಗೂ ಸಹ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಸಂಬಂಧಿಸಿದವರು ಕೂಡಲೇ ಕೊರೊನಾ ಸಹಾಯವಾಣಿ 104 ಅಥವಾ 1077 ಕರೆ ಮಾಡಿ ತಮ್ಮ ವಿವರಗಳನ್ನು ಸಲ್ಲಿಸಬೇಕು ಹಾಗೂ ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ