ಆ್ಯಪ್ನಗರ

ನೃಪತುಂಗ ಬೆಟ್ಟ ಹಸ್ತಾಂತರಕ್ಕೆ ಒಡಂಬಡಿಕೆ

ಹುಬ್ಬಳ್ಳಿ : ಅರಣ್ಯ ಇಲಾಖೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ನಿರ್ವಹಣೆ ಹಸ್ತಾಂತರಿಸುವ ಕುರಿತು ಮಹಾನಗರ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪಾಲಿಕೆಯೊಂದಿಗೆ ಈ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶಕುಮಾರ್‌ ತಿಳಿಸಿದರು.

Vijaya Karnataka Web 1 Oct 2019, 5:00 am
ಹುಬ್ಬಳ್ಳಿ : ಅರಣ್ಯ ಇಲಾಖೆಗೆ ಹುಬ್ಬಳ್ಳಿಯ ನೃಪತುಂಗ ಬೆಟ್ಟದ ನಿರ್ವಹಣೆ ಹಸ್ತಾಂತರಿಸುವ ಕುರಿತು ಮಹಾನಗರ ಪಾಲಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪಾಲಿಕೆಯೊಂದಿಗೆ ಈ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶಕುಮಾರ್‌ ತಿಳಿಸಿದರು.
Vijaya Karnataka Web treaty on the transfer of nrupatunga hill
ನೃಪತುಂಗ ಬೆಟ್ಟ ಹಸ್ತಾಂತರಕ್ಕೆ ಒಡಂಬಡಿಕೆ


ಸೋಮವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು, ಹಸ್ತಾಂತರಗೊಂಡ ನಂತರ ಅದರ ರಕ್ಷಣೆ ಮಾಡುವುದರ ಜತೆಗೆ ಮಕ್ಕಳ ಆಟದ ಉದ್ಯಾನ, ಪ್ಲಾಸ್ಟಿಕ್‌ ಬಳಸುವವರಿಂದ ಹಣ ಠೇವಣಿ ಮಾಡಿಕೊಂಡು ಪ್ಲಾಸ್ಟಿಕ್‌ ಸೂಕ್ತ ನಿರ್ವಹಣೆ ಮಾಡಿದ ನಂತರ ಠೇವಣಿ ಹಣ ವಾಪಸ್‌ ಮಾಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಪ್ರಾಣಿ ಸಂಗ್ರಹಾಲಯ ಸ್ಥಾಪನೆಗೆ ಜಾಗ
ಧಾರವಾಡ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿಪ್ರಾಣಿ ಸಂಗ್ರಹಾಲಯ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಬಹುದಿನಗಳಿಂದ ಇದ್ದು, ಅದಕ್ಕಾಗಿ ಕಾರವಾರ ರಸ್ತೆಯಲ್ಲಿ ಜಾಗ ಗುರುತಿಸಲಾಗಿದೆ. ಆದರೆ, ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಹೊಸದಾಗ ಸ್ಥಾಪಿಸಲು ಅನುಮತಿ ನೀಡುತ್ತಿಲ್ಲ. ಹಾಗೊಂದು ವೇಳೆ ಅನುಮತಿ ನೀಡಿದರೆ, ನಾವು ಪ್ರಸ್ತಾವನೆ ಕಳುಹಿಸಲಿದ್ದೇವೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ