ಆ್ಯಪ್ನಗರ

ಕನ್ನಡಿಗರಿಗೆ ಟ್ವಿಟರ್‌ ಮಾದರಿಯಲ್ಲಿ‘ಕೂ’ ಆ್ಯಪ್‌

ಹುಬ್ಬಳ್ಳಿ: ಕನ್ನಡ ಭಾಷೆಯಲ್ಲಿಟ್ವಿಟರ್‌ಮಾದರಿಯ ಮೈಕ್ರೋ ಬ್ಲಾಗಿಂಗ್‌ 'ಕೂ' ಆ್ಯಪ್‌ ಸಿದ್ಧಪಡಿಸಿಲಾಗಿದ್ದು, ಪ್ರತಿಯೊಬ್ಬರು ಮಾತೃ ಭಾಷೆಯಲ್ಲಿಯೇ ಮನದಾಳದ ಮಾತುಗಳನ್ನು ವ್ಯಕ್ತಪಡಿಲು ಈ ಆ್ಯಪ್‌ ಸಹಕಾರಿಯಾಗಿದೆ ಎಂದು ಆ್ಯಪ್‌ನ ಸಂಶೋಧಕ ಪ್ರಮೇಯ ರಾಧಾಕೃಷ್ಣ ಮಾಹಿತಿ ನೀಡಿದರು.

Vijaya Karnataka 24 Sep 2020, 5:00 am
ಹುಬ್ಬಳ್ಳಿ: ಕನ್ನಡ ಭಾಷೆಯಲ್ಲಿಟ್ವಿಟರ್‌ಮಾದರಿಯ ಮೈಕ್ರೋ ಬ್ಲಾಗಿಂಗ್‌ 'ಕೂ' ಆ್ಯಪ್‌ ಸಿದ್ಧಪಡಿಸಿಲಾಗಿದ್ದು, ಪ್ರತಿಯೊಬ್ಬರು ಮಾತೃ ಭಾಷೆಯಲ್ಲಿಯೇ ಮನದಾಳದ ಮಾತುಗಳನ್ನು ವ್ಯಕ್ತಪಡಿಲು ಈ ಆ್ಯಪ್‌ ಸಹಕಾರಿಯಾಗಿದೆ ಎಂದು ಆ್ಯಪ್‌ನ ಸಂಶೋಧಕ ಪ್ರಮೇಯ ರಾಧಾಕೃಷ್ಣ ಮಾಹಿತಿ ನೀಡಿದರು.
Vijaya Karnataka Web koo


ಬುಧವಾರ ಹುಬ್ಬಳ್ಳಿ ಮಾಧ್ಯಮ ಪ್ರತಿನಿಧಿಗಳಿಗೆ ಕೂ ಆ್ಯ ಕುರಿತು ಮಾಹಿತಿ ನೀಡಲು ನಡೆದ ವೆಬ್‌ ಕಾನ್ಫರೆನ್ಸ್‌ನಲ್ಲಿಮಾತನಾಡಿದ ಅವರು, 2020ರ ಆಗಸ್ಟ್‌ ತಿಂಗಳಲ್ಲಿಕೇಂದ್ರ ಸರಕಾರ ನಡೆಸಿದ ಆತ್ಮ ನಿರ್ಭರ ಆ್ಯಪ್‌ ಇನ್ನೋವೇಶನ್‌ ಚಾಲೆಂಜ್‌ನಲ್ಲಿ ಕೂ ಆ್ಯಪ್‌ ಆಯ್ಕೆಯಾಗಿದೆ.

ಭಾರತೀಯ ಭಾಷೆಗಳಲ್ಲಿತಮ್ಮನ್ನು ತಾವು ಅಭಿವ್ಯಕ್ತಿಸಲು ಕೂ ಆ್ಯಪ್‌ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್ನಲ್ಲಿಪೋ›ತ್ಸಾಹದಾಯಕ ನುಡಿಗಳನ್ನು ಆಡಿದ್ದಾರೆ ಎಂದರು. ಪ್ರಥಮ ಬಾರಿಗೆ ಕನ್ನಡದಲ್ಲಿಆರಂಭವಾದ ಕೂ ಆ್ಯಪ್‌ ಸದ್ಯ ಆಯಾ ಮಾತೃ ಭಾಷೆಯಲ್ಲಿಅಂದರೇ ಹಿಂದಿ, ತೆಲುಗು, ತಮಿಳು, ಗುಜರಾತಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲೂಲಭ್ಯವಿದೆ ಎಂದರು.

ಮಾರ್ಚನಲ್ಲಿಪ್ರಾರಂಭವಾದ ಆ್ಯಪ್‌ನ ಕನ್ನಡದ ಅನೇಕ ಪ್ರಮುಖ ವ್ಯಕ್ತಿಗಳು ಬಳಸುತ್ತಿದ್ದಾರೆ. ಅದರಲ್ಲಿರಾಜ್ಯದ ಸಿಎಂ ಬಿ.ಎಸ್‌.ಯಡಿಯೂರಪ್ಪ, ಡಿಸಿಎಂ ಅಶ್ವತ್‌ ನಾರಾಯಣ…, ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ಜಾವಗಲ್‌ ಶ್ರೀನಾಥ್‌, ಮಾಜಿ ಪ್ರಧಾನಮಂತ್ರಿ ಎಚ್‌. ಡಿ. ದೇವೇಗೌಡ, ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಬಳಸುತ್ತಿದ್ದಾರೆ ಎಂದರು. ಕನ್ನಡಿಗರು ಎಲ್ಲರೂ ಈ ಆ್ಯಪ್‌ ಬಳಕೆ ಮಾಡುವಂತೆ ಕೋರಿದ ಅವರು, ಈ ಬಾರಿ ನವೆಂಬರ್‌ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿಯೊಬ್ಬ ಕನ್ನಡಿಗರು ಕೂ ಆ್ಯಪ್‌ ಬಳಸುವ ಮೂಲಕ ಆಚರಿಸೋಣ ಎಂದು ಸಲಹೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ