ಆ್ಯಪ್ನಗರ

ಧಾರವಾಡ: ಆಸೆ ತೋರಿಸಿ ಇಬ್ಬರು ಮಕ್ಕಳ ಇಬ್ಬರು ಮಕ್ಕಳ ಕಿಡ್ನಾಪ್

ಆಸೆ ತೋರಿಸಿ ಇಬ್ಬರು ಮಕ್ಕಳನ್ನು ಪುಸಲಾಯಿಸಿ ಅಪಹರಿಸಿರುವ ಘಟನೆ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಈ ಇಬ್ಬರು ಮಕ್ಕಳನ್ನು ಫೆ. 11ರಂದು ಮಧ್ಯಾಹ್ನ ಯಾರೋ ಆಸೆ ತೋರಿಸಿ, ಅಪಹರಿಸಿದ್ದಾರೆ ಎಂದು ದೂರು ದಾಖಲಾಗಿದೆ.

Vijaya Karnataka Web 15 Feb 2020, 12:20 pm
ಧಾರವಾಡ: ಆಸೆ ತೋರಿಸಿ ಇಬ್ಬರು ಮಕ್ಕಳನ್ನು ಪುಸಲಾಯಿಸಿ ಅಪಹರಿಸಿರುವ ಘಟನೆ ಧಾರವಾಡ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ನಡೆದಿದೆ. ಸಾಹಿತ್ಯಾ ಸೂರ್ಯವಂಶಿ (4), ಜಯಸ್‌ (2) ಅಪಹರಣಕ್ಕೆ ಒಳಗಾದವರು.
Vijaya Karnataka Web dharwad


ಮನೆಯ ಮುಂದೆ ಆಟವಾಡುತ್ತಿದ್ದ ಈ ಇಬ್ಬರು ಮಕ್ಕಳನ್ನು ಫೆ. 11ರಂದು ಮಧ್ಯಾಹ್ನ ಯಾರೋ ಆಸೆ ತೋರಿಸಿ, ಅಪಹರಿಸಿದ್ದಾರೆ ಎಂದು ತಾಯಿ ನೇತ್ರಾವತಿ ಸೂರ್ಯವಂಶಿ ಧಾರವಾಡ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕೊಲ್ಲಾಪೂರ ಜಿಲ್ಲೆಯ ಗಡಹಿಂಗ್ಲಜ ತಾಲೂಕಿನ ನೀಲಜಿ ಗ್ರಾಮದ ಸೂರಜ್‌ ಅವರೊಂದಿಗೆ 2015 ಜ.11 ರಂದು ಮದುವೆ ಮಾಡಿ ಕೊಡಲಾಗಿತ್ತು. ಆದರೆ ಕೆಲ ತಿಂಗಳಿನಿಂದ ಗಂಡ ಹಾಗೂ ಅವರ ಮನೆ ಕುಟುಂಬದವರ ಜೊತೆ ಹೊಂದಾಣಿಕೆ ಸಮಸ್ಯೆ ಆಗಿದ್ದು, ಇದರಿಂದ ಆಕೆಗೆ ಮಾನಸಿಕ ಹಾಗೂ ದೈಹಿಕ ಕಿರಿಕಿರಿ ಉಂಟು ಮಾಡಿದ್ದರು.

ಸ್ನೇಹಿತನನ್ನೇ ಕಿಡ್ನ್ಯಾಪ್‌ ಮಾಡಿ 12 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದವ ಅಂದರ್‌; ಪೊಲೀಸರ ಮಿಂಚಿನ ಕಾರ್ಯಾಚರಣೆ, ನಾಲ್ಕು ಗಂಟೆಯಲ್ಲೇ ರಕ್ಷಣೆ

ಇದರಿಂದ ಬೇಸತ್ತ ನೇತ್ರಾವತಿ ತನ್ನ ಇಬ್ಬರು ಮಕ್ಕಳೊಂದಿಗೆ ಎರಡು ತಿಂಗಳ ಹಿಂದೆಯಷ್ಟೇ ತನ್ನ ಪೋಷಣೆ ಮಾಡಿದ ಹೊನ್ನಾಪೂರದ ಪ್ರಭುನಗರದ ಮಾವ ಭೀಮಪ್ಪ ದೊಡಮನಿ ಮನೆಗೆ ಬಂದು ವಾಸವಾಗಿದ್ದಳು. ಈಗ ಮನೆಯ ಮುಂದೆ ಆಟವಾಡುತ್ತಿದ್ದ ಮಕ್ಕಳು ಕಾಣದಂತೆ ಆಗಿದ್ದು, ಹೀಗಾಗಿ ಮಕ್ಕಳನ್ನು ಅಪಹರಿಸಲಾಗಿದೆ ಎಂದು ತಾಯಿ ನೇತ್ರಾವತಿ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ