ಆ್ಯಪ್ನಗರ

ಮಹಾನಗರದಲ್ಲಿ ಯುಗಾದಿ ಸಂಭ್ರಮ

ಧಾರವಾಡ/ಹುಬ್ಬಳ್ಳಿ : ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚೈತ್ರ ಮಾಸದ ಮೊದಲ ದಿನ ನೂತನ ಸಂವತ್ಸರವಾದ ವಿಕಾರಿನಾಮ ಸಂವತ್ಸರವನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.

Vijaya Karnataka 6 Apr 2019, 5:00 am
ಧಾರವಾಡ/ಹುಬ್ಬಳ್ಳಿ : ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚೈತ್ರ ಮಾಸದ ಮೊದಲ ದಿನ ನೂತನ ಸಂವತ್ಸರವಾದ ವಿಕಾರಿನಾಮ ಸಂವತ್ಸರವನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಸಜ್ಜಾಗಿದ್ದಾರೆ.
Vijaya Karnataka Web DRW-5MANJU11B


ವಸಂತ ಋುತು ಎಂದರೆ ಅದು ನವೋಲ್ಲಾಸದ ಸಂಕೇತ. ಎಲೆ ಉರುಳಿದ ಮರಗಳೆಲ್ಲ ಹೊಸ ಚಿಗುರು ಬಿಟ್ಟು ನಳನಳಿಸುತ್ತ ಭೂರಮೆಯನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುತ್ತವೆ.ಯುಗಾದಿ ಹರುಷದ ದಿಬ್ಬವಾಗಿ, ಉತ್ಸವ ಕಾರಂಜಿಯಾಗಿ, ಸಂತಸದ ನೆಲೆಯಾಗಿ ನೂತನ ಸಂವತ್ಸರದೊಂದಿಗೆ ಮತ್ತೆ ಬಂದು ನಿಂತಿದ್ದು ಜನತೆ ಹಬ್ಬದ ಸಡಗರದಲ್ಲಿದ್ದಾರೆ.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಜನರು ಯುಗ-ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ಬೇಂದ್ರೆ ಅಜ್ಜನ ಹಾಡನ್ನು ಗುನುಗುತ್ತ ಯುಗಾದಿ ಹಬ್ಬದ ಮುನ್ನಾದಿನವಾದ ಶುಕ್ರವಾರ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ಶುಕ್ರವಾರ ಹುಬ್ಬಳ್ಳಿಯ ದುರ್ಗದ ಬೈಲ್‌, ಜನತಾ ಬಜಾರ್‌, ಹಳೇಹುಬ್ಬಳ್ಳಿ, ನವನಗರ ಮಾರ್ಕೆಟ್‌ ಸೇರಿದಂತೆ ಅನೇಕ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು.

ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಮಾರುಕಟ್ಟೆಯಲ್ಲಿ ಹಣ್ಣು, ಹೂವು, ಕಾಯಿಗಳ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ವ್ಯಾಪಾರಸ್ಥರು, ಉದ್ಯೋಗಸ್ಥರು, ಕಾರ್ಮಿಕರು, ರೈತರು ಯುಗಾದಿ ಸಿದ್ಧತೆ ನಡೆಸಿದರೆ ಮಹಿಳೆಯರು ಪೂಜೆಗೆ ಸಿದ್ಧÜ್ದತೆ ಮಾಡುವುದಲ್ಲರಲ್ಲಿ ತೊಡಗಿದ್ದರು.

ಅಲ್ಲದೇ ಹೊಸವರುಷದ ಮೊದಲ ದಿನವಾದ ಯುಗಾದಿ ಅಂಗವಾಗಿ ಕೆಲವರು ಬಟ್ಟೆ, ಬೈಕ್‌ ಸೇರಿದಂತೆ ವಿವಿಧ ವಾಹನಗಳನ್ನು ಖರೀದಿ ಮಾಡಲು ಇಲ್ಲಿನ ಅಂಗಡಿಗಳಲ್ಲಿ ಸೇರಿದ್ದ ದೃಶ್ಯಗಳು ಕಂಡುಬಂದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ