ಆ್ಯಪ್ನಗರ

ಮುಂಗಡ ಪತ್ರಕ್ಕೆ ಸರ್ವಾನುಮತದ ಒಪ್ಪಿಗೆ

ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಂಗಣದಲ್ಲಿ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪರ ಅಧ್ಯಕ್ಷ ತೆಯಲ್ಲಿ ಭಾನುವಾರ ನಡೆದ ಸಂಘದ 118ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ 2019-20ನೇ ಸಾಲಿಗೆ 30,722,533 ಕೋಟಿ ರೂ. ಮುಂಗಡ ಪತ್ರ ಮಂಡಿಸಿದರು.

Vijaya Karnataka 17 Jun 2019, 5:00 am
ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಂಗಣದಲ್ಲಿ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪರ ಅಧ್ಯಕ್ಷ ತೆಯಲ್ಲಿ ಭಾನುವಾರ ನಡೆದ ಸಂಘದ 118ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ 2019-20ನೇ ಸಾಲಿಗೆ 30,722,533 ಕೋಟಿ ರೂ. ಮುಂಗಡ ಪತ್ರ ಮಂಡಿಸಿದರು.
Vijaya Karnataka Web unanimous consent to advance letter
ಮುಂಗಡ ಪತ್ರಕ್ಕೆ ಸರ್ವಾನುಮತದ ಒಪ್ಪಿಗೆ


ಸಭೆಯ ಗೊತ್ತುವಳಿ ನಂತರ 2017-18ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರ ತಪಾಸಿಗರ ವರದಿಯೊಂದಿಗೆ ಸಿದ್ದಪಡಿಸಿದ 2017-18ನೇ ಸಾಲಿನ ಆಯವ್ಯಯ, ಋುಣ ಆಸ್ತಿ ಪತ್ರಿಕೆ ಪರಿಶೀಲಿಸಿ ಒಪ್ಪಿಗೆ ಪಡೆದು, ಅಧ್ಯಕ್ಷ ರ ಅಪ್ಪಣೆ ಮೇರೆಗೆ ಇತರ ವಿಷಯ ಚಿರ್ಚಿಸುವ ಜತೆಗೆ 2019-20ನೇ ಸಾಲಿನ ಮುಂಗಡ ಪತ್ರಕ್ಕೆ ಮಂಜೂರು ಪಡೆದರು.

2017ರಲ್ಲಿ ಸಂಘಕ್ಕೆ ಕರ್ನಾಟಕ ಸರಕಾರ 25 ಲಕ್ಷ ದಂತೆ 4 ಕಂತುಗಳಲ್ಲಿ 1 ಕೋಟಿ ರೂಪಾಯಿ ಅನುದಾನ ನೀಡಿದೆ. ಇದನ್ನೂ ಸಂಘವು 2017-18ನೇ ಸಾಲಿಗೆ ಸಂಘದ ಸಿಬ್ಬಂದಿ ವೇತನ, ಸಂಸ್ಥೆ ಕಾರ್ಯಗಳಿಗೆ ಬಳಕೆ ಮಾಡಿದೆ. 2018ರ ಮಾರ್ಚ್‌ ತಿಂಗಳವರೆಗೆ ಒಟ್ಟು 1,20,94,296 ರೂ. ವಿನಿಯೋಗ ಮಾಡಿದ್ದಾಗಿ ಸಭೆಗೆ ತೋರಿಸಿದರು.

ದೇಣಿಗೆ, ಬಾಡಿಗೆ, ಪುಸ್ತಕಗಳ ಮಾರಾಟ, ದತ್ತಿ ನಿಧಿ ಎಫ್‌ಡಿ ಬಡ್ಡಿ, ಮಂಟಪಗಳ ಕಾರ್ಯಕ್ರಮ, ಆಜೀವ ಸದಸ್ಯತ್ವ ಪುಸ್ತಕ ಮಾರಾಟ, ಹಳೇ ದಿನ ಪತ್ರಿಕೆ ಮಾರಾಟ, ಉಳಿತಾಯ ಖಾತೆ ಬಡ್ಡಿ, ಬ್ಯಾಂಕ್‌ ಕಮೀಶನ್‌, ವೇತನ ಅನುದಾನ ಸೇರಿದಂತೆ ಒಟ್ಟು 2018ರಲ್ಲಿ ಸಂಘಕ್ಕೆ 1,51,63,476 ರೂ. ಆದಾಯ ಬಂದಿದ್ದಾಗಿಯೂ ಮಂಡಿಸಿದರು.

ಈ ಹಣವನ್ನು ಸಿಬ್ಬಂದಿ ವೇತನ, ಇತರೆ ಕಾರ್ಯಕ್ರಮ, ದತ್ತಿ ಕಾರ್ಯಕ್ರಮ, ಗ್ರಂಥಾಲಯ ಪತ್ರಿಕೆಗಳು, ಮುದ್ರಣ, ಟೆಲಿಫೋನ್‌, ನೀರಿನ ಕರ, ಅಂಚೆ-ಕೋರಿಯರ್‌, ಪ್ರಯಾಣ ವೆಚ್ಚ, ವಿದ್ಯುತ್‌ ರಿಫೇರಿ, ನಾಟಕ, ಕಟ್ಟಡ ರಿಪೇರಿ, ಅಡಿಟ್‌ ಫೀ, ವೆಬ್‌ಸೈಟ್‌ ನಿರ್ವಹಣೆ, ಆಸ್ತಿಕರ, ವಕೀಲರ ಫೀ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳ ಖರ್ಚು ತೋರಿಸಿದರು.

ಸಂಘದ ಆದಾಯ:
10.57 ಲಕ್ಷ ರೂ. ದೇಣಿಗೆ, 5.44 ಲಕ್ಷ ರೂ. ದತ್ತಿ ಬಡ್ಡಿ, 6.85 ಲಕ್ಷ ರೂ. ಬಾಡಿಗೆ, 6000 ರೂ. ಪುಸ್ತಕ ಮಾರಾಟ, 1.75 ಲಕ್ಷ ರೂ. ಬ್ಯಾಂಕ್‌ ಬಡ್ಡಿ, 2.50 ಲಕ್ಷ ರೂ. ಸದಸತ್ವ ಫೀ, 3,600 ರೂ. ಫಾರಂ ಫೀ, ಪತ್ರಿಕೆ ಮಾರಾಟ 10 ಸಾವಿರ ರೂ., ನಿರ್ವಹಣೆ ಅನುದಾನ 2.42,58,976 ರೂ., ವೇತನ ಅನುದಾನ 36,31,607 ರೂ., ಒಟ್ಟು 30,317,533 ರೂ. ಆದಾಯ ತೋರಿಸಿದರು.

2019-20ರ ಮುಂಗಡ:
ಇನ್ನೂ 2019-20ರ ಮುಂಗಡ ಪತ್ರ ಮಂಡಿಸಿದ ಪ್ರಕಾಶ ಉಡಕೇರಿ, 2.50 ಲಕ್ಷ ರೂ. ಮಹಾನಗರ ಪಾಲಿಕೆ ಕರ, 1ಲಕ್ಷ ರೂ. ಬಾಡಿಗೆ ಮೇಲಿನ ತೆರಿಗೆ (ಟಿಡಿಎಸ್‌), 75 ಸಾವಿರ ರೂ. ನೀರಿನ ಕರ, 2ಲಕ್ಷ ರೂ. ವಿದ್ಯುತ್‌ ಕರ, 1ಲಕ್ಷ ರೂ. ಟೆಲಿಫೋನ್‌, 1.10 ಲಕ್ಷ ರೂ. ಪ್ರವಾಸ ಭತ್ತೆ, ಅಂಚೆ-ಕೋರಿಯರ್‌ಗೆ 1.18 ಲಕ್ಷ ರೂ. ಮುಂಗಡ ಕಾಣಿಸಿದರು.

2 ಲಕ್ಷ ರೂ. ಸ್ಟೇಶನರಿ, 75 ಸಾವಿರ ರೂ. ಜನರೇಟರ್‌ ಡಿಸೈಲ್‌ ಇತ್ಯಾದಿ, ಪುಸ್ತಕಗಳ ಮುದ್ರಣ, ವರ್ಷದ ವರದಿ ಪುಸ್ತಕ ಮುದ್ರಣಕ್ಕೆ 12,48 ಲಕ್ಷ ರೂ. , 1.50 ಲಕ್ಷ ರೂ. ಪ್ರಿಂಟಿಂಗ್‌ ಖರ್ಚು, ಆಮಂತ್ರಣ ಪತ್ರಿಗಳು, 25 ಸಾವಿರ ರೂ. ಅಡಿಟ್‌ ಶುಲ್ಕ, ಸಿಬ್ಬಂದಿ ವೇತನ 65.18 ಲಕ್ಷ ರೂ., 6.5 ಲಕ್ಷ ರೂ. ಅನ್ನು ಭವಿಷ್ಯ ನಿಧಿ ಮುಂಗಡ ಪತ್ರದಲ್ಲಿ ತೋರಿಸಿದರು.

ರಾಜ್ಯೋತ್ಸವದ ತಿಂಗಳ ಕಾರ್ಯಕ್ರಮಕ್ಕೆ 2ಲಕ್ಷ ರೂ., 8ನೇ ಹೊರನಾಡ ಕನ್ನಡ ಸಮ್ಮೇಳನಕ್ಕೆ 42 ಲಕ್ಷ ರೂ., ಕವಿಗಳ, ಸಾಹಿತಿಗಳ, ಹೋರಾಟಗಾರರ ಶತಮಾನೋತ್ಸವಕ್ಕೆ 2ಲಕ್ಷ ರೂ., ಹೊರನಾಡ ಕನ್ನಡಿಗರ ಪ್ರತಿಭೋತ್ಸವಕ್ಕೆ 10ಲಕ್ಷ ರೂ. ಸೇರಿದಂತೆ ಇತ್ಯಾದಿ ಕಾರ್ಯಗಳಿಗೆ ಒಟ್ಟು 3,07,22,533 ಕೋಟಿ ರೂ. ಮುಂಗಡ ಪತ್ರವನ್ನು ಮಂಡಿಸಿದರು.

ಈ ಹಿಂದೆ ಕೋರಂ ಕೊರತೆ ಕಾರಣದಿಂದ ಮುಂದೂಡಿದ್ದ ಸಭೆಯುವ ಭಾನುವಾರ ಕೋರಂ ಹಿನ್ನೆಲೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮುಂಗಡ ಪತ್ರಕ್ಕೆ ಸಂಘದ ಸರ್ವ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ