ಆ್ಯಪ್ನಗರ

ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿ ಸಾಧ್ಯ

ಹುಬ್ಬಳ್ಳಿ : ಸುಮಾರು 800ಕ್ಕೂ ಹೆಚ್ಚು ವರ್ಷ ಇತಿಹಾಸ ಹೊಂದಿದ ಶಿವಶಿಂಪಿ ಸಮಾಜ ಇಂದು ರಾಜಕೀಯ, ಆರ್ಥಿಕ, ಶೈಕ್ಷ ಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಡಾ.ಸ್ನೇಹಾ ಭೂಸನೂರ ಹೇಳಿದರು.

Vijaya Karnataka 16 Dec 2022, 2:11 pm
ಹುಬ್ಬಳ್ಳಿ : ಸುಮಾರು 800ಕ್ಕೂ ಹೆಚ್ಚು ವರ್ಷ ಇತಿಹಾಸ ಹೊಂದಿದ ಶಿವಶಿಂಪಿ ಸಮಾಜ ಇಂದು ರಾಜಕೀಯ, ಆರ್ಥಿಕ, ಶೈಕ್ಷ ಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಡಾ.ಸ್ನೇಹಾ ಭೂಸನೂರ ಹೇಳಿದರು.
Vijaya Karnataka Web Unity


ಇಲ್ಲಿಯ ಮೂರುಸಾವಿರ ಮಠದಲ್ಲಿ ಭಾನುವಾರ ನಡೆದ ಶಿವಶಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ದ್ವಿತೀಯ ವಾರ್ಷಿಕೋತ್ಸವ ಹಾಗೂ ಶಿವದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಸಮಾಜ, ಸಂಘ, ಸಂಘಟನೆ ತುಂಬಾ ಮುಖ್ಯವಾಗಿದೆ. ಒಗ್ಗಟ್ಟಿನಿಂದ ಎಲ್ಲರೂ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜ ನಿಂತ ನೀರಾಗಿರದೆ ಚಲಿಸುತ್ತಿರಬೇಕು. ಸಮಾಜ ಸಂಘಟನೆಯಲ್ಲಿ ಯುವಕರಿಗೆ ಜವಾಬ್ದಾರಿ ನೀಡಬೇಕು ಎಂದರು.

ಮಾನವ ಸಂಘ ಜೀವಿಯಾಗಿರುವದರಿಂದ ಸಂಘ ಸಂಘಟನೆ ಜೀವನದಲ್ಲಿ ಬಹಳ ಮುಖ್ಯ. ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುವ ನಮಗೆ ಇದು ಅನುಕೂಲಕರವೂ ಹೌದು. ಭಾರತದಂತಹ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂಘ, ಸಂಘಟನೆ, ಸಮಾಜಕ್ಕೆ ವಿಶೇಷ ಅರ್ಥವಿದೆ ಎಂದರು.

ಸಮಾಜದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಜನರು ಹಿಂದುಳಿದ ಜನರನ್ನು ಮೆಲೆತ್ತುವ ಹಾಗೂ ಆರ್ಥಿಕ, ಶೈಕ್ಷ ಣಿಕವಾಗಿ ಸಬಲರನ್ನಾಗಿ ಮಾಡಬೇಕು. ಪರಸ್ಪರ ಸಹಬಾಳ್ವೆ, ಸಹಾಯ ಗುಣವೇ ಮಾನವ ಧರ್ಮ, ಇದನ್ನೇ ಶರಣರು ತಮ್ಮ ಜೀವನದೂದ್ದಕ್ಕೂ ನಡೆಸಿಕೊಂಡು ಬಂದರು. ಕಾಯಕದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಮಾತ್ರ ಫಲ ದೊರೆಯುತ್ತದೆ ಎಂದರು.

ಹಳೇಹುಬ್ಬಳ್ಳಿಯ ವೀರಭಿಕ್ಷಾವರ್ತಿ ನೀಲಕಂಠಮಠದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಶಿಂಪಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ ಗಂಜಿ ಅಧ್ಯಕ್ಷ ತೆ ವಹಿಸಿದ್ದರು. ಡಾ.ವಿನಯ ಗಡಗಿ, ಡಾ.ಅನೂಷಾ ಭಂಡಾರಕರ ಉಪನ್ಯಾಸ ನೀಡಿದರು.

ಸಂಘದ ಉಪಾಧ್ಯಕ್ಷ ರಾದ ಗಂಗಾಧರ ಮುದಕವಿ, ಶಂಭು ಯಾವಗಲ್ಲ, ಕೋಶಾಧಿಕಾರಿ ಗಂಗಾಧರ ಸಾದರಹಳ್ಳಿ, ನಿರ್ದೇಶಕ ಬಿ.ಸಿ.ಲಕ್ಕುಂಡಿ, ನಿಜಲಿಂಗಪ್ಪ, ಗಂಗಾಧರ, ಸುಶೀಲಾ ಲಕ್ಕುಂಡಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ