ಆ್ಯಪ್ನಗರ

ಸರ್ವ ದೋಷ ಪ್ರಾಯಶ್ಚಿತ ವಿಧಾನ ಕಾರ‍್ಯಕ್ರಮ

ಹುಬ್ಬಳ್ಳಿ : ನಗರದ ದಿಗಂಬರ ಜೈನ ಬೋರ್ಡಿಂಗಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಸರ್ವ ದೋಷ ಪ್ರಾಯಶ್ಚಿತ ವಿಧಾನ ಕಾರ್ಯಕ್ರಮ ನಡೆಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಶಾಶ್ರೀ ಮಾತಾಜಿ, ಈ ಪಂಚಮ ಕಾಲದಲ್ಲಿ ಮನುಷ್ಯ ಜೀವ ಮೋಕ್ಷಕ್ಕೆ ಹೋಗುವ ದಾರಿ ತೋರಿಸುವ ಧರ್ಮ ಯಾವುದಾದರೂ ಇದ್ದರೆ ಅದು ಜೈನ ಧರ್ಮ ಮಾತ್ರ ಎಂದರು.

Vijaya Karnataka 15 Jul 2019, 5:00 am
ಹುಬ್ಬಳ್ಳಿ : ನಗರದ ದಿಗಂಬರ ಜೈನ ಬೋರ್ಡಿಂಗಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಸರ್ವ ದೋಷ ಪ್ರಾಯಶ್ಚಿತ ವಿಧಾನ ಕಾರ್ಯಕ್ರಮ ನಡೆಯಿತು.
Vijaya Karnataka Web DRW-14 NADAF 6
ಹುಬ್ಬಳ್ಳಿಯಲ್ಲಿ ದಿಗಂಬರ ಜೈನ ಬೋರ್ಡಿಂಗಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವ ಮತ್ತು ಸರ್ವ ದೋಷ ಪ್ರಾಯಶ್ಚಿತ ವಿಧಾನ ಕಾರ್ಯಕ್ರಮ ನಡೆಯಿತು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಶಾಶ್ರೀ ಮಾತಾಜಿ, ಈ ಪಂಚಮ ಕಾಲದಲ್ಲಿ ಮನುಷ್ಯ ಜೀವ ಮೋಕ್ಷಕ್ಕೆ ಹೋಗುವ ದಾರಿ ತೋರಿಸುವ ಧರ್ಮ ಯಾವುದಾದರೂ ಇದ್ದರೆ ಅದು ಜೈನ ಧರ್ಮ ಮಾತ್ರ ಎಂದರು.

ಬ್ರಾಹ್ಮಿಲಾ ಮಹಿಳಾ ಪರಿಷತ್‌ ವತಿಯಿಂದ ಬೋರ್ಡಿಂಗ್‌ ಆವರಣದಲ್ಲಿ ಮಾತಾಜಿ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಂದಿರದಲ್ಲಿ ಭಗವಾನ ಶ್ರೀ 1008 ಚಂದ್ರಪ್ರಭ ತೀರ್ಥಂಕರರಿಗೆ ಪಂಚಾಮೃತಾಭಿಷೇಕ ಪೂಜೆ ಮಾಡಲಾಯಿತು. ವಿಧಾನದಲ್ಲಿ 70ಕ್ಕೂ ಹೆಚ್ಚು ಶ್ರಾವಕಿಯರು ಭಾಗವಹಿಸಿದ್ದರು.

ಬೋರ್ಡಿಂಗ್‌ ಚೇರಮನ್‌ ಎಂ.ಡಿ. ದಾನೊಳ್ಳಿ, ವಿದ್ಯಾಧರ ಪಾಟೀಲ, ಕಾರ್ಯದರ್ಶಿ ಆರ್‌.ಟಿ. ಅಣ್ಣಿಗೇರಿ, ಚಂದ್ರಕಾಂತ ಹೊಸಮನಿ, ವಿಮಲಚಂದ್ರ ಸಂಗಮಿ, ದತ್ತಾ ಡೋರ್ಲೆ, ಎಸ್‌.ಎ. ಬರಗಾಲಿ, ಸುಬದ್ರ ಮುತ್ತಿನ, ನಿರ್ಮಲಾ ಕೊಡಚಾವಾಡ, ಅಚಲಾ ಮುತ್ತಿನ, ಪಂಕಜಾ ಸೂಜಿ, ಜ್ಯೋತಿ ದೊಡಮನಿ, ರತ್ನಾ ಉಪಾಧ್ಯ, ಅಜಿತನಾಥ ಮುತ್ತಗಿ, ವೃಷಭ ಮುತ್ತಿನ, ಶಾಂತಿನಾಥ ಹೋತಪೇಟ, ಎಸ್‌.ಟಿ. ಅಕ್ಕಿ. ಬಿ.ಎನ್‌. ನಾಗರಳ್ಳಿ ಇದ್ದರು. ಜಿ.ಜಿ. ಲೋಬೋಗೋಳ ಸ್ವಾಗತಿಸಿದರು. ಆರ್‌.ಟಿ. ತವನಪ್ಪನವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ