ಆ್ಯಪ್ನಗರ

3 ಹಂತದ ಶಿಕ್ಷಣ ವ್ಯವಸ್ಥೆಯಿಂದ ಅರ್ಹರಿಗೆ ಅನ್ಯಾಯ

ಧಾರವಾಡ : ರಾಜ್ಯದಲ್ಲಿ ಶಿಕ್ಷ ಣ ವ್ಯವಸ್ಥೆ ಗೊಂದಲದಿಂದ ಕೂಡಿದೆ. ಇಲ್ಲಿನ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಎಂಬ ಮೂರು ಹಂತದ ಶಿಕ್ಷ ಣ ವ್ಯವಸ್ಥೆಯಿಂದಾಗಿ ಅರ್ಹರಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.

Vijaya Karnataka 30 Jun 2019, 5:00 am
ಧಾರವಾಡ : ರಾಜ್ಯದಲ್ಲಿ ಶಿಕ್ಷ ಣ ವ್ಯವಸ್ಥೆ ಗೊಂದಲದಿಂದ ಕೂಡಿದೆ. ಇಲ್ಲಿನ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಎಂಬ ಮೂರು ಹಂತದ ಶಿಕ್ಷ ಣ ವ್ಯವಸ್ಥೆಯಿಂದಾಗಿ ಅರ್ಹರಿಗೆ ಅನ್ಯಾಯ ಆಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.
Vijaya Karnataka Web unjust to the eligible by the 3 tier education system
3 ಹಂತದ ಶಿಕ್ಷಣ ವ್ಯವಸ್ಥೆಯಿಂದ ಅರ್ಹರಿಗೆ ಅನ್ಯಾಯ


ಬಿಎ, ಬಿಎಡ್‌ ವಿದ್ಯಾರ್ಹತೆ ಪಡೆದ ಶಿಕ್ಷ ಕರಿಗೆ ಬಡ್ತಿಯಲ್ಲಿ ಅನ್ಯಾಯವಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ''ಶಿಕ್ಷ ಕರ ಸಮಸ್ಯೆಗಳನ್ನು ಪರಿಹರಿಸಲು ನೂತನ ಸಚಿವರು ಕ್ರಮ ಕೈಗೊಳ್ಳಬೇಕು. ಅವರಿಗೆ ಎಲ್ಲರೂ ಸಹಕಾರ ನೀಡಬೇಕು'' ಎಂದರು.

''1ರಿಂದ 5ನೇ ತರಗತಿಗೆ ಡಿಎಡ್‌ ಓದಿದ ಶಿಕ್ಷ ಕರನ್ನು ನೇಮಿಸಬೇಕು. 6ರಿಂದ 8ನೇ ತರಗತಿಗೆ ಬಿಎಡ್‌ ಶಿಕ್ಷ ಕರನ್ನು ನೇಮಿಸಬೇಕು. ಆದರೆ, ಸರಕಾರ ಅನುಭವ, ಸೇವಾ ಹಿರಿತನ, ವಿದ್ಯಾರ್ಹತೆ ಗಮನಿಸದೇ ಬಿಎಡ್‌ ಪಡೆದ ಶಿಕ್ಷ ಕರನ್ನು ಪ್ರಾಥಮಿಕ ಹಂತಕ್ಕೆ ನೇಮಿಸಿ ನೂತನ ಶಿಕ್ಷ ಕರನ್ನು 6ರಿಂದ 8ನೇ ತರಗತಿಗೆ ನೇಮಿಸುವುದು ಸರಿಯಲ್ಲ'' ಎಂದರು.

''ಸರಕಾರದ ಈ ನಿರ್ಧಾರದಿಂದ ಸೇವಾ ಹಿರಿತನ ಹೊಂದಿದ ಶಿಕ್ಷ ಕರಿಗೆ ಅನ್ಯಾಯವಾಗಲಿದೆ. ಹೊಸದಾಗಿ ನೇಮಕಾತಿಗೆ ಮುಂದಾದರೆ ಶೇ.75ರಷ್ಟು ಬಡ್ತಿಗೆ, ಶೇ.25ರಷ್ಟು ನೇರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು. ಈ ವ್ಯವಸ್ಥೆಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಈ ಬಗ್ಗೆ ಸರಕಾರಕ್ಕೆ ಈಗಾಗಲೇ ಸಲಹೆ ಕೂಡ ನೀಡಿದ್ದೇನೆ'' ಎಂದರು.

''ಯಾವುದೇ ಒಂದು ನೇಮಕಾತಿ, ಯೋಜನೆ ಅಥವಾ ನಿರ್ಧಾರ ತೆಗೆದುಕೊಳ್ಳುವಾಗ ತಜ್ಞರ ಜತೆಗೆ ಚರ್ಚಿಸಿ ಸಲಹೆ ಪಡೆಯಬೇಕು. ಕೇವಲ ಪಠ್ಯಪುಸ್ತಕ ಅಭ್ಯಾಸ ಮಾಡಿರುವ ಅಧಿಕಾರಿಗಳ ಮಾತು ಕೇಳುವುದರಿಂದ ಈ ತರದ ಘಟನೆಗಳು ನಡೆಯುತ್ತವೆ'' ಎಂದರು.

ಪ್ರತಿಭಟನೆ ಸರಿಯಲ್ಲ
ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ವೇಳೆ ಅವರ ಬಸ್‌ ಅಡ್ಡಗಟ್ಟಿ ಪ್ರತಿಭಟನೆ ಮಾಡಿರುವುದು ಸರಿಯಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡುವವರು ಈ ಬಗ್ಗೆ ಸಂಬಂಧಿಸಿದ ಇಲಾಖೆಯವರಿಗೆ ತಿಳಿಸಬೇಕು. ಏಕಾಏಕಿ ಪ್ರತಿಭಟನೆ ಮಾಡುವುದು ತಪ್ಪು. ಇದು ಅಧಿಕಾರಿಗಳ ನಿರ್ಲಕ್ಷ ್ಯದಿಂದಾಗಿದೆ. ಮುಂದೆ ಈ ತರದ ಘಟನೆಗಳು ಆಗದಂತೆ ಎಚ್ಚರ ವಹಿಸಬೇಕು. ಅಲ್ಲದೇ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ವಿನಂತಿಸಲಾಗುವುದು'' ಎಂದು ಹೊರಟ್ಟಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ