ಆ್ಯಪ್ನಗರ

ಶಾಲೆಗಳ ಉನ್ನತೀಕರಣ ಬಹು ಮುಖ್ಯ

ಧಾರವಾಡ : ನಿಜವಾದ ದೇವಸ್ಥಾನ ಶಾಲೆಗಳು. ಓದುವ ಮಕ್ಕಳು ದೇವರಿದ್ದಂತೆ. ದೇಶದ ಭವಿಷ್ಯ ಶಾಲೆಗಳಲ್ಲಿ ನಿರ್ಮಾಣವಾಗುತ್ತದೆ. ಹೀಗಾಗಿ ಶಾಲೆಗಳ ಉನ್ನತೀಕರಣ ಬಹು ಮುಖ್ಯ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗ ಹಿರೇಮಠ ಅಭಿಪ್ರಾಯಪಟ್ಟರು.

Vijaya Karnataka 31 Jul 2019, 5:00 am
ಧಾರವಾಡ : ನಿಜವಾದ ದೇವಸ್ಥಾನ ಶಾಲೆಗಳು. ಓದುವ ಮಕ್ಕಳು ದೇವರಿದ್ದಂತೆ. ದೇಶದ ಭವಿಷ್ಯ ಶಾಲೆಗಳಲ್ಲಿ ನಿರ್ಮಾಣವಾಗುತ್ತದೆ. ಹೀಗಾಗಿ ಶಾಲೆಗಳ ಉನ್ನತೀಕರಣ ಬಹು ಮುಖ್ಯ ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗ ಹಿರೇಮಠ ಅಭಿಪ್ರಾಯಪಟ್ಟರು.
Vijaya Karnataka Web DRW-30RANGA03
ಧಾರವಾಡ ಕರ್ನಾಟಕ ಹೈಸ್ಕೂಲ್‌ ಹಳೆಯ ವಿದ್ಯಾರ್ಥಿಗಳ ಸಂಘದಆಶ್ರಯದಲ್ಲಿ ಹಮ್ಮಿಕೊಂಡ ವಿನ್ಸಪೈರ್‌ ಧಾರವಾಡ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷ ಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ವೀಕ್ಷಿಸಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.


ನಗರದ ಕೆ. ಇ. ಬೋರ್ಡಿನ ಕರ್ನಾಟಕ ಪ್ರೌಢ ಶಾಲೆಯ ಶತಮಾನೋತ್ಸವ ಸಮಾರಂಭ ಆಚರಣೆ ಪ್ರಯುಕ್ತ ಕರ್ನಾಟಕ ಹೈಸ್ಕೂಲ್‌ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ವಿನ್ಸಪೈರ್‌ ಧಾರವಾಡ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಭವ್ಯ ಭಾರತ ನಿರ್ಮಾಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಬಹು ಮುಖ್ಯ ಪಾತ್ರವಹಿಸುತ್ತವೆ. ಅಲ್ಲಿ ಮಕ್ಕಳಿಗೆ ದೇವರ ದರ್ಜೆ ಕೊಡಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷ ಕರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಚಂದ್ರನ ಮೇಲೆ ಉಪಗ್ರಹ ಕಳಿಸಿಕೊಟ್ಟಿರುವ ಭಾರತದ ಇಸ್ರೋ ಸಂಸ್ಥೆಯಲ್ಲಿ ಕರ್ನಾಟಕ ಹೈಸ್ಕೂಲಿನ ವಿದ್ಯಾರ್ಥಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದು ಪ್ರಶಂಶನೀಯ ಎಂದರು.

ಗ್ರಾಮೀಣ ಕ್ಷೇತ್ರ ಶಿಕ್ಷ ಣಾಧಿಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಮಗುವಿನ ಮನಸ್ಸಿನಲ್ಲಿ ವಿಜ್ಞಾನ ಆಳವಾಗಿ ಇಳಿಯಬೇಕು. ಭಾವಿ ಭವಿಷ್ಯದ ನಾಯಕರನ್ನು ಶಿಕ್ಷ ಕರು ತರಗತಿಯಲ್ಲಿ ರೂಪಿಸುತ್ತಾರೆ. ಶಾಲೆಯ ಅಭಿವೃದ್ಧಿಗೆ ಸಮಾಜ ಪರ ಚಿಂತಕರು ಶ್ರಮವಹಿಸಬೇಕು ಎಂದರು.

ವಿನ್ಸ್‌ಪೈರ್‌ ಧಾರವಾಡ ಜಿಲ್ಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 64 ಶಾಲೆಗಳು ಭಾಗವಹಿಸಿ ವಿದ್ಯಾರ್ಥಿಗಳು ತಾವು ಮಾಡಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು.

ಕೆ.ಇ.ಬೋರ್ಡ ಸಂಸ್ಥೆಯ ಅಧ್ಯಕ್ಷ ಅರುಣ ನಾಡಿಗೇರ ಅಧ್ಯಕ್ಷ ತೆ ವಹಿಸಿದ್ದರು. ಕರ್ನಾಟಕ ಹೈಸ್ಕೂಲಿನ ಪ್ರಾಂಶುಪಾಲರಾದ ಮೀರಾ ನಾವಳ್ಳಿ, ಸಂಜಯ ಮಾಳಿ ಸೇರಿದಂತೆ, ಶಿಕ್ಷ ಕರು, ಹಳೆಯ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷ ಕರು ಉಪಸ್ಥಿತರಿದ್ದರು.

ಸಂತೋಷ ಶೆಟ್ಟಿ ಸ್ವಾಗತಿಸಿದರು. ಡಾ.ಶ್ರೀಕಾಂತ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಉದಮೇಶಿ ನಿರೂಪಿಸಿದರು. ಡಾ. ಪ್ರಕಾಶ ರಾಮನಗೌಡರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ