ಆ್ಯಪ್ನಗರ

ಉಪ್ಪಿನಬೆಟಗೇರಿ: ಮತದಾನಕ್ಕೆ ಸಕಲ ಸಿದ್ಧತೆ

ಉಪ್ಪಿನ ಬೆಟಗೇರಿ : ದೇಶದ ಜನತಂತ್ರದ ಹಬ್ಬ 17ನೇ ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷ ಣಗನಣೆ ಆರಭವಾಗಿದ್ದು ಮತಗಟ್ಟೆಳನ್ನು ಚುನಾವಣಾ ಆಯೋಗ ಅಗತ್ಯ ಸಿದ್ದತೆಗಳೊಂದಿಗೆ ಸನ್ನದ್ಧಗೊಳಿಸಿದೆ.

Vijaya Karnataka 23 Apr 2019, 5:00 am
ಉಪ್ಪಿನ ಬೆಟಗೇರಿ : ದೇಶದ ಜನತಂತ್ರದ ಹಬ್ಬ 17ನೇ ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷ ಣಗನಣೆ ಆರಭವಾಗಿದ್ದು ಮತಗಟ್ಟೆಳನ್ನು ಚುನಾವಣಾ ಆಯೋಗ ಅಗತ್ಯ ಸಿದ್ದತೆಗಳೊಂದಿಗೆ ಸನ್ನದ್ಧಗೊಳಿಸಿದೆ.
Vijaya Karnataka Web uppinabetagare ready for voting
ಉಪ್ಪಿನಬೆಟಗೇರಿ: ಮತದಾನಕ್ಕೆ ಸಕಲ ಸಿದ್ಧತೆ


ಕರಡಿಗುಡ್ಡ, ಪುಡಕಲಕಟ್ಟಿ, ಹನಮನಕೊಪ್ಪ, ಹನುಮನಾಳ, ಉಪ್ಪಿನ ಬೆಟಗೇರಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಇವಿಎಂ, ವಿವಿ ಪ್ಯಾಟ್‌ ಹಾಗೂ ಅಗತ್ಯ ಸಾಮಗ್ರಿಗಳೊಂದಿಗೆ ಸೋಮವಾರ ಮತಗಟ್ಟೆಗಳನ್ನು ತಲುಪಿದ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಸಕಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಶೌಚಾಲಯ, ವಿದ್ಯುತ್‌, ಶುದ್ಧ ಕುಡಿಯುವ ನೀರು, ಫ್ಯಾನ್‌ ಸೇರಿದಂತೆ ಮೂಲ ಸೌಲಭ್ಯಗಳನ್ನು ಮತಗಟ್ಟೆಗಳು ಹೊಂದಿವೆ. ವಯೋವೃದ್ಧರು, ಅಂಗವಿಕಲರ ಅನೂಕೂಲಕ್ಕಾಗಿ ರಾರ‍ಯಂಪ್‌ಗಳನ್ನು ನಿರ್ಮಿಸಲಾಗಿದೆ. ಮತಗಟ್ಟೆಯಿಂದ 200 ಮೀಟರ್‌ ವ್ಯಾಪ್ತಿಯನ್ನು ನಿರ್ಬದಿಂತ ಪ್ರದೇಶ ಎಂದು ಘೋಷಿಸಲಾಗಿದೆ.

ಬೆಳಿಗ್ಗೆ 6ಕ್ಕೆ ಮತದಾನ ಪ್ರಾರಂಭಕ್ಕೂ ಮೊದಲು ಆಯಾ ಅಭ್ಯರ್ಥಿಗಳ ಬೂತ್‌ ಏಜೆಂಟರುಗಳಿಗೆ ತಲಾ ಮೂರು ಮತಗಳ ಚಲಾವಣೆ, ಎಣಿಕೆ ತಿಳಿವಳಿಕೆ ಪ್ರಾತ್ಯಕ್ಷಿಕೆ ನಡೆಯಲಿದೆ. ನಂತರ 7 ಗಂಟೆಗೆ ಅಧಿಕೃತವಾಗಿ ಮತದಾನ ಪ್ರಾರಂಭವಾಗಲಿದೆ.

ಧಾರವಾಡ ಲೋಕಸಭಾ ಕ್ಷೇತ್ರದ ಧಾರವಾಡ ಗ್ರಾಮೀಣ-71ರ ವ್ಯಾಪ್ತಿಯಲ್ಲಿ ಒಟ್ಟು 231 ಬೂತ್‌ಗಳಿದ್ದು ಗ್ರಾಮೀಣ ಭಾಗದಲ್ಲಿ 143 ಮತ್ತು ನಗರದಲ್ಲಿ 88 ಮತಗಟ್ಟೆಗಳಿವೆ. ಪ್ರತಿ ಭೂತ್‌ಗೆ ತಲಾ ನಾಲ್ಕು ಜನ ಸಿಬ್ಬಂದಿ ನೇಮಿಸಲಾಗಿದೆ. ಕಳೆದ ಚುನಾವಣೆಗಳಲ್ಲಿ ದಾಖಲಾದ ಗಲಾಟೆ, ದೂರುಗಳು ಆಧಾರದ ಮೇಲೆ 146 ಸಹಜ, 46 ಸೂಕ್ಷ , 39 ಅತೀಸೂಕ್ಷ ್ಮ ಮತಗಟ್ಟೆಗಳಾಗಿ ವಿಂಗಡಿಸಲಾಗಿದ್ದು ಸೂಕ್ಷ ್ಮ ಮತ್ತು ಅತೀಸೂಕ್ಷ ್ಮ ಕೇಂದ್ರಗಳಿಗೆ ಹೆಚ್ಚಿನ ಪೋಲಿಸ್‌ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ರೂಟ್‌ ಅಧಿಕಾರಿ ರಾಮಚಂದ್ರ ನೆಮದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ