ಆ್ಯಪ್ನಗರ

ಹತ್ಯೆಗೆ ನಾಡಪಿಸ್ತೂಲ್‌ ಬಳಕೆ

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಶನಿವಾರ ನಡೆದ ಶೂಟೌಟ್‌ ಪ್ರಕರಣದಲ್ಲಿಬಿಹಾರ ಮೂಲದ ವ್ಯಕ್ತಿ ಹತ್ಯೆಗೆ ಎರಡು ನಾಡ ಪಿಸ್ತೂಲ್‌ ಬಳಸಿರುವುದು ಬೆಳಕಿಗೆ ಬಂದಿದೆ. ಮಂಜುನಾಥ ನಗರ ಕ್ರಾಸ್‌ನ ಕೊಠಾರಿ ಬಡಾವಣೆಯಲ್ಲಿಶನಿವಾರ ಸಂಜೆ ಬೈಕ್‌ನಲ್ಲಿಬಂದ ಮೂವರು ದುಷ್ಕರ್ಮಿಗಳು ಬಿಹಾರ ಮೂಲದ ಸರ್ವೇಶ್‌ ಸಿಂಗ್‌

Vijaya Karnataka 23 Sep 2019, 5:00 am
ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಶನಿವಾರ ನಡೆದ ಶೂಟೌಟ್‌ ಪ್ರಕರಣದಲ್ಲಿಬಿಹಾರ ಮೂಲದ ವ್ಯಕ್ತಿ ಹತ್ಯೆಗೆ ಎರಡು ನಾಡ ಪಿಸ್ತೂಲ್‌ ಬಳಸಿರುವುದು ಬೆಳಕಿಗೆ ಬಂದಿದೆ.
Vijaya Karnataka Web use of nadapistol for murder
ಹತ್ಯೆಗೆ ನಾಡಪಿಸ್ತೂಲ್‌ ಬಳಕೆ

ಮಂಜುನಾಥ ನಗರ ಕ್ರಾಸ್‌ನ ಕೊಠಾರಿ ಬಡಾವಣೆಯಲ್ಲಿಶನಿವಾರ ಸಂಜೆ ಬೈಕ್‌ನಲ್ಲಿಬಂದ ಮೂವರು ದುಷ್ಕರ್ಮಿಗಳು ಬಿಹಾರ ಮೂಲದ ಸರ್ವೇಶ್‌ ಸಿಂಗ್‌ ಎಂಬಾತನನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದರು. ಗುಂಡೇಟಿಗೆ ಬಲಿಯಾದ ಸರ್ವೇಶ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಎಡ ಕಿವಿ ಭಾಗಕ್ಕೆ ಹೊಡೆದ ಗುಂಡು ಬಲ ಭಾಗದ ಕೆನ್ನೆ ಸೀಳಿ ಹೊರ ಬಂದಿದೆ. ಎದೆ ಭಾಗಕ್ಕೆ ಹೊಡೆದ ಇನ್ನೊಂದು ಗುಂಡು ಬೆನ್ನಿನಲ್ಲಿಸಿಲುಕಿದೆ. ಸರ್ವೇಶನಿಗೆ ತಗುಲಿದ ಎರಡು ಗುಂಡುಗಳು ಎರಡು ಪ್ರತ್ಯೇಕ ನಾಡ ಪಿಸ್ತೂಲ್‌ನಿಂದ ಹಾರಿವೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

ದುಪ್ಪಟ್ಟಾಯ್ತು ಶಂಕೆ
303 ರೈಫಲ್‌ಗೆ ಬಳಸುವ ಗುಂಡುಗಳನ್ನು ನಾಡ ಪಿಸ್ತೂಲ್‌ಗೆ ಹಾಕಿ ಶೂಟ್‌ ಮಾಡಲಾಗಿದೆ. ಘಟನಾ ಸ್ಥಳದಲ್ಲಿಒಂದು 7.7 ಎಂಎಂ ಸಜೀವ ಗುಂಡು ಸಿಕ್ಕಿದೆ. ಇದು ಹತ್ಯೆಗೆ ಎರಡು ನಾಡ ಪಿಸ್ತೂಲ್‌ ಬಳಸಿರುವ ಶಂಕೆಯನ್ನು ಮತ್ತಷ್ಟು ದಟ್ಟಗೊಳಿಸಿದೆ.

ಸರ್ವೇಶ ಹತ್ಯೆಗೆ ಬಿಹಾರದಲ್ಲಿನ ರಾಜಕೀಯ ದ್ವೇಷ ಇಲ್ಲವೇ ಪ್ರೇಮ ಪ್ರಕರಣ ಕಾರಣ ಇರಬಹುದು ಎಂಬುದು ಪೊಲೀಸರ ಅಂದಾಜು. ಈ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ. ಘಟನೆ ನಡೆದ ಸಮೀಪದ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿಕೆಲ ದೃಶ್ಯಾವಳಿಗಳನ್ನು ಪೊಲೀಸರು ವೀಕ್ಷಿಸಿದ್ದಾರೆ. ಆದರೆ, ಅದರಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದ್ದು, ಇಲ್ಲಿನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ ಹಾದು ಹೋಗಿರುವುದಷ್ಟೇ ಗೊತ್ತಾಗಿದೆ. ಹೀಗೆ ನಾನಾ ಆಯಾಮಗಳಿಂದಲೂ ತಾಂತ್ರಿಕ ಅಂಶಗಳನ್ನು ಕಲೆ ಹಾಕಿ ಹಂತಕರ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿಕ ಕ್ಕೆ ತಿಳಿಸಿದ್ದಾರೆ.

ಸರ್ವೇಶ ಹತ್ಯೆಗೆ ಪ್ರಕರಣದಲ್ಲಿಪಿಸ್ತೂಲಿನಿಂದ ಸಿಡಿದ ಗುಂಡಿನ ಬಗ್ಗೆ ಅಧ್ಯಯನ ನಡೆಸಲು ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಬ್ಯಾಲೆಸ್ಟಿಕ್‌ ತಜ್ಞರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಅಲ್ಲದೆ, ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನ ದಳ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸಿದರು. ಪೊಲೀಸ ಆಯುಕ್ತ ಆರ್‌. ದಿಲೀಪ್‌, ಡಿಸಿಪಿ ಡಿ.ಎಲ್‌. ನಾಗೇಶ್‌, ಎಸಿಪಿ ಎಚ್‌.ಕೆ. ಪಠಾಣ, ಪಿಐ ದಿಲೀಪ್‌ ನಿಂಬಾಳ್ಕರ ಸೇರಿದಂತೆ ಇತರರು ಭೇಟಿ ನೀಡಿದರು.

ಹಿಂದೆಯೂ ಹತ್ಯೆಗೆ ಯತ್ನ ?
ಸರ್ವೇಶ ಬಿಹಾರದಲ್ಲಿದ್ದಾಗ ಕೂಡ ಎರಡು ಬಾರಿ ಹತ್ಯೆಗೆ ವಿಫಲ ಯತ್ನ ನಡೆದಿತ್ತು. ಬಳಿಕ ಆತ 2 ವರ್ಷಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಎನ್ನಲಾಗುತ್ತಿದೆ. ಮೃತನ ಎಡಗೈ ಮತ್ತು ಎಡಗಾಲಿಗೆ ಎರಡು ಗುಂಡುಗಳು ಬಿದ್ದಿರುವ ಕಲೆಗಳಿದ್ದು ಈ ಎಲ್ಲಅನುಮಾನಗಳಿಗೆ ಪುಷ್ಟಿ ನೀಡಿದೆ. ತನಗೆ ಜೀವ ಬೆದರಿಕೆ ಇದ್ದಿದ್ದರಿಂದಲೇ ಸರ್ವೇಶ ಗನ್‌ ಪರವಾನಗಿ ಪಡೆದಿದ್ದ ಎನ್ನುತ್ತಿವೆ ಮೂಲಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ