ಆ್ಯಪ್ನಗರ

ಕದ್ದ ರೈತನ ಬೈಕ್‌ ಕೊಲೆಗೆ ಬಳಕೆ!

ಧಾರವಾಡ : ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೆ ಬಳಸಿದ ಬೈಕ್‌ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ಗ್ರಾಮದ ರೈತನಿಗೆ ಸೇರಿದ್ದಾಗಿದ್ದು, ಇದನ್ನು ಹುಬ್ಬಳ್ಳಿಯಲ್ಲಿ ಕದ್ದ ದುಷ್ಕರ್ಮಿಗಳು ಡಾ. ಕಲಬುರ್ಗಿ ಹತ್ಯೆಗೆ ಬಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Vijaya Karnataka 8 Jun 2019, 5:00 am
ಧಾರವಾಡ : ಹಿರಿಯ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಗೆ ಬಳಸಿದ ಬೈಕ್‌ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ಗ್ರಾಮದ ರೈತನಿಗೆ ಸೇರಿದ್ದಾಗಿದ್ದು, ಇದನ್ನು ಹುಬ್ಬಳ್ಳಿಯಲ್ಲಿ ಕದ್ದ ದುಷ್ಕರ್ಮಿಗಳು ಡಾ. ಕಲಬುರ್ಗಿ ಹತ್ಯೆಗೆ ಬಳಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Vijaya Karnataka Web use of stolen farmer bike murder
ಕದ್ದ ರೈತನ ಬೈಕ್‌ ಕೊಲೆಗೆ ಬಳಕೆ!


ಧಾರವಾಡ ತೇಜಸ್ವಿನಗರದ ಅಬ್ದುಲ್‌ಕರಿಂಸಾಬ್‌ ತಲ್ಲೂರ್‌ ತಮ್ಮ ಹೆಸರಿನಲ್ಲಿದ್ದ ಕಪ್ಪು ನೀಲಿ ಬಣ್ಣ ಮಿಶ್ರಿತ 125 ಸಿಸಿ ಡಿಸ್ಕವರಿ ಬೈಕ್‌ನ್ನು ಅವರ ಅಳಿಯ ನವಲಗುಂದ ತಾಲೂಕಿನ ಮೊರಬ ಗ್ರಾಮದ ಬುಡ್ಡೇಸಾಬ್‌ ಅಲ್ಲಿಪನ್ನಿ ಎಂಬುವವರಿಗೆ ನೀಡಿದ್ದರು. 2015, ಮೇ 3ರಂದು ಬುಡ್ಡೇಸಾಬ್‌ ತನ್ನ ಸ್ನೇಹಿತ ಮಲ್ಲಪ್ಪನೊಂದಿಗೆ ಹುಬ್ಬಳ್ಳಿಯ ಮಾವನೂರು ಗ್ರಾಮಕ್ಕೆ ಆಪ್ತರ ಮದುವೆಗೆ ಈ ಬೈಕ್‌ ತೆಗೆದುಕೊಂಡು ಹೋಗಿದ್ದರು. ಮದುವೆ ಮುಗಿಸಿ ವಾಪಸ್‌ ಬರುವಾಗ ಹುಬ್ಬಳ್ಳಿ ಸಮೀಪದ ರೈಲ್ವೆ ಬ್ರಿಡ್ಜ್‌ ಬಳಿ ಬೈಕ್‌ ನಿಲ್ಲಿಸಿದ್ದ ಬುಡ್ಡೇಸಾಬ್‌ ತಮ್ಮ ಸಹೋದರನ ತೋಟಕ್ಕೆ ಹೋಗಿದ್ದರು. ಆವಾಗ ಕಳುವಾದ ಬೈಕ್‌ 2 ವರ್ಷಗಳ ನಂತರ ಸಿಕ್ಕಿದ್ದು, ಇದನ್ನೇ ಕಲಬುರ್ಗಿ ಹತ್ಯೆಗೆ ಬಳಸಲಾಗಿದೆ ಎಂಬುದು ಈಗ ಬಹಿರಂಗಗೊಂಡಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೈಕ್‌ ಮಾಲೀಕ ಬುಡ್ಡೇಸಾಬ್‌, ''ನಮಗೆ ಡಾ. ಕಲಬುರ್ಗಿ ಯಾರೆಂಬುದೇ ಗೊತ್ತಿಲ್ಲ. 2015ರಲ್ಲಿ ರೈಲ್ವೆ ಬ್ರಿಡ್ಜ್‌ ಬಳಿ ನಮ್ಮ ಬೈಕ್‌ ನಿಲ್ಲಿಸಿದಾಗ ಕಳುವಾಗಿದೆ. ಆಗ ಬೈಕ್‌ ಹುಡುಕಾಡಿದ ನಾವು ನಂತರ ಈ ಬಗ್ಗೆ ಹುಬ್ಬಳ್ಳಿ ಉಪನಗರ ಠಾಣೆಗೆ ದೂರು ನೀಡಿದ್ದೇವೆ. ಎರಡು ವರ್ಷದ ಬಳಿಕ ಬೈಕ್‌ ಸಿಕ್ಕ ಬಗ್ಗೆ ಪೊಲೀಸರು ನಮಗೆ ತಿಳಿಸಿದ್ದಾರೆ. ನಾವು ಸಾಲ ಮಾಡಿ ಆ ಬೈಕ್‌ ಖರೀದಿಸಿದ್ದು, ವಾಪಸ್‌ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ'' ಎಂದರು.

ಮಹಾರಾಷ್ಟ್ರದಲ್ಲಿ ಬೈಕ್‌ ಪತ್ತೆ:

ಕಲಬುರ್ಗಿ ಹತ್ಯೆಗೂ 2 ತಿಂಗಳ ಮುಂಚೆ ಈ ಬೈಕ್‌ ಕದ್ದು ಬೆಳಗಾವಿಯಲ್ಲಿ ಇಡಲಾಗಿತ್ತು. ಆಗ ಎಂಎಚ್‌ ಎಂದು ನಂಬರ್‌ ಪ್ಲೇಟ್‌ ಬದಲಾಯಿಸಲಾಗಿತ್ತು. ಹಂತಕರು ಆ. 30, 2015ರಲ್ಲಿ ಕಲಬುರ್ಗಿ ಹತ್ಯೆ ಮಾಡಿ ಬೈಕ್‌ನ್ನು ಕಿತ್ತೂರಿನಲ್ಲಿ ಬಿಟ್ಟು ಪರಾರಿಯಾಗಿದ್ದರು. ನಂತರ ಬೇರೆ ವ್ಯಕ್ತಿ ಆ ಬೈಕ್‌ ತೆಗೆದುಕೊಂಡು ಪುಣೆಗೆ ಹೋಗಿದ್ದ. ಅಲ್ಲಿ ಚಿತ್ರಮಂದಿರದ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆಯಲೂ ಆರೋಪಿಗಳು ಇದೇ ಬೈಕ್‌ ಬಳಸಿದ್ದರು. ನಂತರ ಎಟಿಎಸ್‌ ಅಧಿಕಾರಿಗಳು ಮನೆಯೊಂದರ ಮೇಲೆ ದಾಳಿ ನಡೆಸಿದಾಗ ಬೈಕ್‌ ಪತ್ತೆ ಆಗಿತ್ತು. ಬೈಕ್‌ ಚೆಸ್ಸಿ ನಂಬರ್‌ ನೋಡಿದಾಗ ಇದು ಧಾರವಾಡದ ಅಬ್ದುಲ್‌ಕರಿಂಸಾಬ್‌ಎಂಬುವವರಿಗೆ ಸೇರಿದ್ದು ಎಂಬುದು ಗೊತ್ತಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಮಂಗಳೂರಿನತ್ತ ಎಸ್‌ಐಟಿ ಚಿತ್ತ

ಡಾ. ಕಲಬುರ್ಗಿ ಹತ್ಯೆ ನಡೆಸಿದ ಆರೋಪಿಗಳು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು ಎಂಬ ಮಾಹಿತಿ ಇದೀಗ ಎಸ್‌ಐಟಿಗೆ ಲಭ್ಯವಾಗಿದೆ. ಇದೇ ಮಾಹಿತಿ ಆಧರಿಸಿ ಇದೀಗ ಅಧಿಕಾರಿಗಳು ತಮ್ಮ ತನಿಖೆ ಆರಂಭಿಸಿದ್ದಾರೆ. ಅಲ್ಲಿ ಇವರಿಗೆ ತರಬೇತಿಗೆ ಸಹಾಯ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖಾ ತಂಡ ಮಂಗಳೂರಿನತ್ತ ತೆರಳಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ