ಆ್ಯಪ್ನಗರ

ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಹೃದಯ

ಧಾರವಾಡ : ವಚನ ಸಾಹಿತ್ಯವೂ ಕನ್ನಡ ಸಾಹಿತ್ಯದ ಹೃದಯ ಭಾಗವಾಗಿದ್ದು, ಮಾನವೀಯ ಮೌಲ್ಯಗಳನ್ನು ನೀಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ ಎಂದು ಪ್ರೊ.ಸಿದ್ದಣ್ಣ ಲಂಗೋಟಿ ಹೇಳಿದರು.

Vijaya Karnataka 2 Apr 2019, 5:00 am
ಧಾರವಾಡ : ವಚನ ಸಾಹಿತ್ಯವೂ ಕನ್ನಡ ಸಾಹಿತ್ಯದ ಹೃದಯ ಭಾಗವಾಗಿದ್ದು, ಮಾನವೀಯ ಮೌಲ್ಯಗಳನ್ನು ನೀಡುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ ಎಂದು ಪ್ರೊ.ಸಿದ್ದಣ್ಣ ಲಂಗೋಟಿ ಹೇಳಿದರು.
Vijaya Karnataka Web vachana literature is the heart of kannada literature
ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಹೃದಯ


ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಡಾ.ಎಸ್‌.ವೃಷಭೇಂದ್ರಸ್ವಾಮಿ ಮತ್ತು ಪ್ರೊ.ಲಲಿತಾಂಬ ಸಾಹಿತಿ ದಂಪತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶರಣ ಸತಿ ಲಿಂಗ ಪತಿ ಎನ್ನುವಂತೆ ದಾಂಪತ್ಯ ಜೀವನಕ್ಕೆ ನೈತಿಕತೆ ತಂದುಕೊಟ್ಟವರು 12ನೇ ಶತಮಾನದ ಶಿವಶರಣರು ಎಂದು ತಿಳಿಸಿದರು.

ಡಾ.ಕಲ್ಯಾಣಮ್ಮ ಲಂಗೋಟಿ, ಉನ್ನತ ಶಿಕ್ಷ ಣ ನಿರ್ದೇಶಕ ಡಾ.ಎಸ್‌.ಎಂ. ಶಿವಪ್ರಸಾದ ಮಾತನಾಡಿ, ಯುವ ಪೀಳಿಗೆಗೆ ಶರಣ ಸಂಸ್ಕೃತಿಯನ್ನು ತಿಳಿಸಬೇಕಾಗಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಡಾ.ಅನುಪಮಾ ಶಿವಪ್ರಸಾದ, ರಾಮಚಂದ್ರ ಧೋಂಗಡಿ, ವಿ.ಸಿ.ಐರ್‌ಸಂಗ, ನಿಂಗಣ್ಣ ಕುಂಟಿ, ಎ.ಬಿ. ಸಬರದ, ಎಸ್‌.ವೈ.ಮಠಪತಿ, ಬಿ.ಐ. ಇಳಿಗೇರ, ವಿಶ್ವೇಶ್ವರಿ ಹಿರೇಮಠ, ಬಸಲಿಂಗಯ್ಯ ಹಿರೇಮಠ, ಶ್ರೀಧರ ಕುಲಕರ್ಣಿ ಸೇರಿದಂತೆ ಇತರರು ಇದ್ದರು. ವಿನಯಶ್ರೀ ಕೂಡಲಗಿ ವಚನಗಾಯನ ಮಾಡಿದರು. ಎಫ್‌.ಬಿ. ಕಣವಿ ಪರಿಚಯಿಸಿದರು. ಡಾ.ಜಿನದತ್ತ ಹಡಗಲಿ ಸ್ವಾಗತಿಸಿದರು. ಎಸ್‌.ಎಸ್‌. ದೊಡಮನಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ