ಧಾರವಾಡ : ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳು. ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳ ನೈಜ ಸತ್ಯವನ್ನು ಅರಿಯಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಎಂ.ವಿ. ಮೂಲಿಮನಿ ಹೇಳಿದರು.
ನಗರದ ಆರ್ಎನ್ಶೆಟ್ಟಿ ಕ್ರೀಡಾಂಗಣ ಆವರಣದ ಬಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಧಾರವಾಡ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಲಿಂ. ಮಲ್ಲೇಶಪ್ಪ ಅಂಗಡಿ, ಲಿಂ.ಲಿಂಗಮ್ಮ ಅಂಗಡಿ ದತ್ತಿ ಕಾರ್ಯಕ್ರಮದ ಅಂಗವಾಗಿ ನಡೆದ ವಿದ್ಯಾರ್ಥಿ ಜೀವನದಲ್ಲಿ ವಚನಗಳ ಮಹತ್ವ ವಿಷಯ ಕುರಿತು ಉಪನ್ಯಾಸ ನೀಡಿದರು.
ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತ ಸೂತ್ರಗಳಾದ, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನ ಒಂದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿ ಜೀವನವೇ ಸಾರ್ಥಕವಾಗುತ್ತದೆ. ವಚನಗಳು ನೈತಿಕ ನೆಲೆಗಟ್ಟಿನ ಮೇಲಿದ್ದು ಸ್ವಸ್ಥ ಸಮಾಜದ ಪರಿಕಲ್ಪನೆ ಹೊಂದಿವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ವೀರಣ್ಣ ಒಡ್ಡೀನ ಮಾತನಾಡಿ, ಬಸವಾದಿ ಶರಣರು ಬಿತ್ತಿದ ಬೀಜ ಇಂದು ಹುಲುಸಾಗಿ ಬೆಳೆದು ಜಗತ್ತಿಗೆ ಫಲ ನೀಡುತ್ತಿದೆ. ಶರಣರು ಹೊತ್ತಿಸಿದ ದೀಪ ಜಗತ್ತಿಗೆ ಬೆಳಕು ನೀಡುತ್ತಿದೆ. ಬಸವ ಎಂಬುದೇ ಒಂದು ಮಂತ್ರವಾಗಿದೆ. ಜಗದ ಕಲ್ಯಾಣದ ತಂತ್ರವಾಗಿದೆ. ಬಸವಣ್ಣನವರ ವಚನಗಳೇ ನಮ್ಮ ಸಂವಿಧಾನದ ಜೀವಾಳ. ಬಸವಣ್ಣನವರು ಈ ನೆಲದ ಪ್ರಜಾಪ್ರಭುತ್ವ ಮಾನವ ಹಕ್ಕುಗಳ ಮೂಲ ಪುರುಷರು ಎಂದರು.
ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ ಮಾತನಾಡಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಪರಮ ದಯಾಮೂರ್ತಿ, ಸಮಾಜವಾದಿ, ಸಮತಾವಾದಿಗಳಾಗಿದ್ದರು. ಅವರಲ್ಲಿ ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವವಿತ್ತು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಜಿ.ಎ.ತಿಗಡಿ ಮಾತನಾಡಿದರು. ಇದೇ ವೇಳೆ ಲಿಂ. ಅಂಗಡಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದತ್ತಿದಾನಿ ಕೆ. ಎಂ. ಅಂಗಡಿ, ಬಿ.ಜಿ.ಬಶೆಟ್ಟಿ, ಸುರೇಶ ಜಟ್ಟೆಣ್ಣವರ, ಮಹಾಂತಯ್ಯ ಹಿರೇಮಠ, ರೇಖಾ ದೇಸಾಯಿ ಸೇರಿದಂತೆ ಇತರರು ಇದ್ದರು. ಶ್ರೀಶೈಲ ರಾಚಣ್ಣವರ ಸ್ವಾಗತಿಸಿದರು. ವತ್ಸಲಾ ಮಡಿವಾಳರ್ ನಿರೂಪಿಸಿದರು. ರಮೇಶ ತಳವಾರ ವಂದಿಸಿದರು.
ನಗರದ ಆರ್ಎನ್ಶೆಟ್ಟಿ ಕ್ರೀಡಾಂಗಣ ಆವರಣದ ಬಳಿಯ ಸರಕಾರಿ ಪ್ರೌಢಶಾಲೆಯಲ್ಲಿ ಧಾರವಾಡ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಲಿಂ. ಮಲ್ಲೇಶಪ್ಪ ಅಂಗಡಿ, ಲಿಂ.ಲಿಂಗಮ್ಮ ಅಂಗಡಿ ದತ್ತಿ ಕಾರ್ಯಕ್ರಮದ ಅಂಗವಾಗಿ ನಡೆದ ವಿದ್ಯಾರ್ಥಿ ಜೀವನದಲ್ಲಿ ವಚನಗಳ ಮಹತ್ವ ವಿಷಯ ಕುರಿತು ಉಪನ್ಯಾಸ ನೀಡಿದರು.
ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತ ಸೂತ್ರಗಳಾದ, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನ ಒಂದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿ ಜೀವನವೇ ಸಾರ್ಥಕವಾಗುತ್ತದೆ. ವಚನಗಳು ನೈತಿಕ ನೆಲೆಗಟ್ಟಿನ ಮೇಲಿದ್ದು ಸ್ವಸ್ಥ ಸಮಾಜದ ಪರಿಕಲ್ಪನೆ ಹೊಂದಿವೆ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ವೀರಣ್ಣ ಒಡ್ಡೀನ ಮಾತನಾಡಿ, ಬಸವಾದಿ ಶರಣರು ಬಿತ್ತಿದ ಬೀಜ ಇಂದು ಹುಲುಸಾಗಿ ಬೆಳೆದು ಜಗತ್ತಿಗೆ ಫಲ ನೀಡುತ್ತಿದೆ. ಶರಣರು ಹೊತ್ತಿಸಿದ ದೀಪ ಜಗತ್ತಿಗೆ ಬೆಳಕು ನೀಡುತ್ತಿದೆ. ಬಸವ ಎಂಬುದೇ ಒಂದು ಮಂತ್ರವಾಗಿದೆ. ಜಗದ ಕಲ್ಯಾಣದ ತಂತ್ರವಾಗಿದೆ. ಬಸವಣ್ಣನವರ ವಚನಗಳೇ ನಮ್ಮ ಸಂವಿಧಾನದ ಜೀವಾಳ. ಬಸವಣ್ಣನವರು ಈ ನೆಲದ ಪ್ರಜಾಪ್ರಭುತ್ವ ಮಾನವ ಹಕ್ಕುಗಳ ಮೂಲ ಪುರುಷರು ಎಂದರು.
ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದಿಮಠ ಮಾತನಾಡಿ, ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಪರಮ ದಯಾಮೂರ್ತಿ, ಸಮಾಜವಾದಿ, ಸಮತಾವಾದಿಗಳಾಗಿದ್ದರು. ಅವರಲ್ಲಿ ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವವಿತ್ತು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಜಿ.ಎ.ತಿಗಡಿ ಮಾತನಾಡಿದರು. ಇದೇ ವೇಳೆ ಲಿಂ. ಅಂಗಡಿ ದಂಪತಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದತ್ತಿದಾನಿ ಕೆ. ಎಂ. ಅಂಗಡಿ, ಬಿ.ಜಿ.ಬಶೆಟ್ಟಿ, ಸುರೇಶ ಜಟ್ಟೆಣ್ಣವರ, ಮಹಾಂತಯ್ಯ ಹಿರೇಮಠ, ರೇಖಾ ದೇಸಾಯಿ ಸೇರಿದಂತೆ ಇತರರು ಇದ್ದರು. ಶ್ರೀಶೈಲ ರಾಚಣ್ಣವರ ಸ್ವಾಗತಿಸಿದರು. ವತ್ಸಲಾ ಮಡಿವಾಳರ್ ನಿರೂಪಿಸಿದರು. ರಮೇಶ ತಳವಾರ ವಂದಿಸಿದರು.