ಆ್ಯಪ್ನಗರ

18 ರಂದು ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ

ಹುಬ್ಬಳ್ಳಿ : ರಾಯಪುರದ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಡಿ. 18ರಂದು ವಿಷ್ಣುವಿನ ನಾಮಸ್ಮರಣೆ, ಜಪ, ವಿಶೇಷ ಪೂಜೆ ಪುನಸ್ಕಾರ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಇಸ್ಕಾನ್‌ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.

Vijaya Karnataka 15 Dec 2018, 5:00 am
ಹುಬ್ಬಳ್ಳಿ : ರಾಯಪುರದ ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಡಿ. 18ರಂದು ವಿಷ್ಣುವಿನ ನಾಮಸ್ಮರಣೆ, ಜಪ, ವಿಶೇಷ ಪೂಜೆ ಪುನಸ್ಕಾರ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹು-ಧಾ ಇಸ್ಕಾನ್‌ ಅಧ್ಯಕ್ಷ ರಾಜೀವ ಲೋಚನ ದಾಸ ತಿಳಿಸಿದರು.
Vijaya Karnataka Web vaikunta ekadashi in iskcon on 18th
18 ರಂದು ಇಸ್ಕಾನ್‌ನಲ್ಲಿ ವೈಕುಂಠ ಏಕಾದಶಿ


ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದಾದ್ಯಂತ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸ್ಪಡುವ ಪ್ರಮುಖ ಹಬ್ಬಗಳಲ್ಲಿ ವೈಕುಂಠ ಏಕಾದಶಿಯೂ ಒಂದಾಗಿದೆ. ಅಂದು ಬೆಳಗ್ಗೆ 8ಕ್ಕೆ ವೈಕುಂಠ ಏಕಾದಶಿ ಅಂಗವಾಗಿ ಸ್ವರ್ಣ ರಂಗಿನಿಂದ ಲೇಪಿತ ಭವ್ಯ ವೈಕುಂಠ ದ್ವಾರ ಪೂಜೆ ನಡೆಯಲಿದ್ದು, ವೈಕುಂಠಕ್ಕೆ ಹೋಲಿಕೆಯಾಗುವಂತೆ ಈ ದ್ವಾರವನ್ನು ಸಜ್ಜುಗೊಳಿಸಲಾಗುತ್ತದೆ. ಅಲ್ಲದೆ, ಇಡೀ ದೇವಾಲಯವನ್ನು ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುತ್ತದೆ ಎಂದರು.

ವೆಂಕಟೇಶ್ವರ ಹೋಮ

ಮಂದಿರಕ್ಕೆ ಭೇಟಿ ನೀಡುವ ಸಾವಿರಾರು ಭಕ್ತರು, ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಭಗವಂತನ ಒಂದು ಲಕ್ಷ ನಾಮಗಳು ಜಪಿಸುವ ಲಕ್ಷಾರ್ಚನೆ ನಡೆಸಲಿದ್ದಾರೆ. ಈ ಸೇವೆಗಾಗಿಯೇ ಸುಂದರವಾದ ಶ್ರೀನಿವಾಸ ಗೋವಿಂದನ ಪ್ರತಿಮೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಸಂಜೆ 5ಕ್ಕೆ ಮಂಗಳಕರ ವೆಂಕಟೇಶ್ವರ ಹೋಮವನ್ನು ನೆರವೇರಿಲಾಗುತ್ತಿದ್ದು, ವಿಶ್ವಶಾಂತಿಗಾಗಿ ನಡೆಸಲಾಗುವ ಶಾಂತಿ ಹೋಮದಲ್ಲಿ ನೂರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅದರಂತೆ ಸಂಜೆ 6ರಿಂದ ರಾತ್ರಿ 9ರವರೆಗೆ ವೈಕುಂಠ ನಾರಾಯಣನನ್ನು ಸ್ತುತಿಸುವ ನೃತ್ಯ, ನಾಟಕ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಪ್ರಸಾದ ವ್ಯವಸ್ಥೆ ಮತ್ತು ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹು-ಧಾ ಇಸ್ಕಾನ್‌ ಉಪಾಧ್ಯಕ್ಷ ರಘೋತ್ತಮ ದಾಸ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ