ಆ್ಯಪ್ನಗರ

ಯೋಗಾಭ್ಯಾಸದಿಂದ ವಜ್ರಕಾಯದ ದೇಹ

ಕುಂದಗೋಳ : ರೋಗಮುಕ್ತ ಮಾಡುವ ಯೋಗವನ್ನು ಇಂದಿನ ಮಕ್ಕಳು ಹಾಗೂ ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಜೀವನದುದ್ದಕ್ಕೂ ವಜ್ರಕಾಯದವರಾಗಿರಲು ಸಾಧ್ಯ ಎಂದು ಶಿಕ್ಷ ಕ ವೈ.ಎಚ್‌.ಹೊಸಮನಿ ಹೇಳಿದರು.

Vijaya Karnataka 23 Jun 2019, 5:00 am
ಕುಂದಗೋಳ : ರೋಗಮುಕ್ತ ಮಾಡುವ ಯೋಗವನ್ನು ಇಂದಿನ ಮಕ್ಕಳು ಹಾಗೂ ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾದರೆ ಜೀವನದುದ್ದಕ್ಕೂ ವಜ್ರಕಾಯದವರಾಗಿರಲು ಸಾಧ್ಯ ಎಂದು ಶಿಕ್ಷ ಕ ವೈ.ಎಚ್‌.ಹೊಸಮನಿ ಹೇಳಿದರು.
Vijaya Karnataka Web DRW-22KND3
ಚಾಕಲಬ್ಬಿಯಲ್ಲಿ ಜಗದೀಶ ಆಜೂರ ಯೋಗಾಸನ ಹೇಳಿಕೊಟ್ಟರು.


ತಾಲೂಕಿನ ಚಾಕಲಬ್ಬಿ ಗ್ರಾಮದ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಯೋಗದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಮಕ್ಕಳು ಮತ್ತು ಯುವಕರೆಲ್ಲರೂ ತಾವು ಅಭ್ಯಸಿಸುವ ಪಾಠ ಮತ್ತು ಆಟದೊಂದಿಗೆ ಯೋಗವನ್ನೂ ಕಲಿತುಕೊಂಡು, ಬದುಕನ್ನು ಸದೃಢವಾಗಿಸಿಕೊಳ್ಳುವದರೊಂದಿಗೆ ಇಂದು ವಿಯೆಟ್ನಾಂನಲ್ಲಿ ಯೋಗ ಶಿಕ್ಷ ಕನಾಗಿ ಬೆಳೆಯುತ್ತಿರುವ ಜಗದೀಶ ಆಜೂರ ಅವರಂತೆ ಯೋಗದಲ್ಲಿ ಹೆಸರುಗಳಿಸಿರಿ ಎಂದು ಕರೆಕೊಟ್ಟರು.

ಮಂಜುನಾಥ ಬಾರಕೇರ, ಅಂತರಾಷ್ಟ್ರೀಯ ಯೋಗಶಿಕ್ಷ ಕ ಜಗದೀಶ ಆಜೂರ, ಎಸ್‌.ಎಸ್‌.ಕಾಕಡೆ, ಗುರುನಾಥ ಹೊನ್ನಿಹಳ್ಳಿ, ಸದಾನಂದ ಪೂಜಾರ, ಗಿರೀಶ ಹುಚ್ಚೋಗಿ, ವಿಠ್ಠಲ ಘಾಟಗೆ, ರಮೇಶ ಹರಳಿ, ಚನ್ನಪ್ಪ ಪೂಜಾರ ಹಾಗೂ ಸ್ವಾಮಿ ವಿವೇಕಾನಂದ ಗೆಳೆಯರ ಬಳಗ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ