ಆ್ಯಪ್ನಗರ

ಪಾಕ್‌ ರಾಜತಾಂತ್ರಿಕ ಮಾರ್ಗ ಅನುಸರಿಸಲಿ: ವೀರೇಂದ್ರ ಹೆಗ್ಗಡೆ

ಪಾಕಿಸ್ತಾನಕ್ಕೆ ಶಾಂತಿ ಬೇಕಾದರೆ ರಾಜತಾಂತ್ರಿಕ ಮಾರ್ಗ ಬಳಸಿ ಮಾತಾಡಲಿ. ಯುದ್ಧ ಬೇಕಾದರೆ ಘೋಷಣೆ ಮಾಡಿ ನೇರವಾಗಿ ಗಡಿಯಲ್ಲಿ ಯುದ್ಧ ಮಾಡಲಿ. ಅದನ್ನು ಬಿಟ್ಟು ಅತಂತ್ರ, ಆತಂಕ ಹಾಗೂ ಅಶಾಂತಿ ಸ್ಥಿತಿ ತಂದೊಡ್ಡುವ ಪ್ರಯತ್ನವನ್ನು ಪಾಕ್‌ ಕೈ ಬಿಡಬೇಕು.

Vijaya Karnataka 1 Mar 2019, 12:05 pm
ಧಾರವಾಡ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಘಟನೆಯಿಂದ ಭಾರತೀಯ ನಾಗರಿಕರಲ್ಲಿ ಏಕತೆ ಮೂಡಿದೆ. ಪಾಕಿಸ್ತಾನ್‌ ತನ್ನ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ.
Vijaya Karnataka Web heggade


ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಾಕಿಸ್ತಾನಕ್ಕೆ ಶಾಂತಿ ಬೇಕಾದರೆ ರಾಜತಾಂತ್ರಿಕ ಮಾರ್ಗ ಬಳಸಿ ಮಾತಾಡಲಿ. ಯುದ್ಧ ಬೇಕಾದರೆ ಘೋಷಣೆ ಮಾಡಿ ನೇರವಾಗಿ ಗಡಿಯಲ್ಲಿ ಯುದ್ಧ ಮಾಡಲಿ. ಅದನ್ನು ಬಿಟ್ಟು ಅತಂತ್ರ, ಆತಂಕ ಹಾಗೂ ಅಶಾಂತಿ ಸ್ಥಿತಿ ತಂದೊಡ್ಡುವ ಪ್ರಯತ್ನವನ್ನು ಪಾಕ್‌ ಕೈ ಬಿಡಬೇಕು'' ಎಂದರು.

''ಯುದ್ಧವನ್ನೂ ಮಾಡದೇ, ಶಾಂತಿಯನ್ನೂ ಬಯಸದೇ ಹಿಂಬದಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವ ಪಾಕಿಸ್ತಾನದ ಇಂತಹ ಹೇಯ ಕೃತ್ಯಗಳು ನಿಜಕ್ಕೂ ಖಂಡನೀಯ'' ಎಂದು ಹೇಳಿದರು.

''ಸದ್ಯ ಗಡಿಯಲ್ಲಿ ಸೈನಿಕರ ಜೊತೆ ಯುದ್ಧಕ್ಕಿಂತ ಆಂತರಿಕ ಯುದ್ಧ ಬಹಳ ಕಷ್ಟ. ಕಾಶ್ಮೀರದ ಪ್ರಜೆಗಳೊಂದಿಗೆ ಹೋರಾಡುವ ಸ್ಥಿತಿ ನಮ್ಮ ಸೈನಿಕರಿಗೆ ಇದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ಆ ಪ್ರದೇಶದಲ್ಲಿ ಮಿತ್ರರು ಯಾರು? ಶತ್ರುಗಳು ಯಾರು ಎಂಬುದನ್ನೇ ಗುರುತಿಸುವುದು ಕಷ್ಟಕರವಾಗಿದೆ. ಮಕ್ಕಳು, ಮಹಿಳೆಯರೂ ಸೈನಿಕರಿಗೆ ಕಲ್ಲೇಟು ನೀಡುತ್ತಾರೆ. ಇಂತಹ ಗಂಭೀರ ಪರಿಸ್ಥಿತಿಯನ್ನು ನಮ್ಮ ಸೈನಿಕರು ಎದುರಿಸುತ್ತಿದ್ದು, ರಕ್ಷ ಣಾ ಇಲಾಖೆ ಅಸಹಾಯಕ ಸ್ಥಿತಿಯಲ್ಲಿದೆ ಎನ್ನುವ ಅನುಭವ ನಾವು ಕಾಶ್ಮೀರಕ್ಕೆ ಹೋದಾಗ ಆಗಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ