ಆ್ಯಪ್ನಗರ

ಧಾರವಾಡ: ಭಾರಿ ಮಳೆಯಿಂದ ಬೆಳೆಗೆ ಹಾನಿ, ತರಕಾರಿ ದುಬಾರಿ

ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ತರಕಾರಿ ಬೆಳೆ ಹಾನಿಯಾಗುತ್ತಿದೆ. ಅತಿಯಾದ ತೇವಾಂಶದಿಂದ ತರಕಾರಿಗಳು ಕೊಳೆತು ಹೋಗುತ್ತಿವೆ. ಹೀಗಾಗಿ ಕೆಲ ತರಕಾರಿಗಳ ಬೆಲೆ ಏರುಮುಖವಾಗಿದೆ. ಹಾಗಂತ ರೈತ ಋುಷಿಯನ್ನು ಪಡೆಯುವಂತಿಲ್ಲ. ಅದೇ ಮಳೆ ತರಕಾರಿ ಬೆಳೆಯನ್ನೂ ಹಾಳು ಮಾಡಿದೆ.

Vijaya Karnataka 17 Oct 2020, 4:33 pm
ಮಲ್ಲಿಕಾರ್ಜುನ ಬಾಳನಗೌಡ್ರ, ಧಾರವಾಡ
Vijaya Karnataka Web 16MALLU1A_21


ಜಿಲ್ಲೆಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿಈಗ ತರಕಾರಿಗಳ ಬೆಲೆ ಏರುಮುಖವಾಗಿದ್ದು, ರೈತ ವರ್ಗಕ್ಕೆ ಒಂದೆಡೆ ಖುಷಿ, ಮತ್ತೊಂದೆಡೆ ನೋವು ತರಿಸಿದೆ.

ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ತರಕಾರಿ ಬೆಳೆ ಹಾನಿಯಾಗುತ್ತಿದೆ. ಅತಿಯಾದ ತೇವಾಂಶದಿಂದ ತರಕಾರಿಗಳು ಕೊಳೆತು ಹೋಗುತ್ತಿವೆ. ಹೀಗಾಗಿ ಕೆಲ ತರಕಾರಿಗಳ ಬೆಲೆ ಏರುಮುಖವಾಗಿದೆ. ಹಾಗಂತ ರೈತ ಋುಷಿಯನ್ನು ಪಡೆಯುವಂತಿಲ್ಲಏಕೆಂದರೆ ಅದೇ ಮಳೆ ಸಾಕಷ್ಟು ತರಕಾರಿ ಬೆಳೆಯನ್ನೂ ಹಾಳು ಮಾಡಿದೆ. ಇಳುವರಿ ಕಡಿಮೆಯಾದ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಕೆಲ ತರಕಾರಿಗಳ ಬೆಲೆ ಗಗನಕ್ಕೆ ಏರಿದೆ ಎಂಬುದು ತರಕಾರಿ ಬೆಳೆಗಾರರ ಮಾತು.

ಏರುಗತಿಯಲ್ಲಿ ಬೆಲೆ

ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ವಾರ ಕ್ಯಾರೆಟ್‌, ಸೌತೆಕಾಯಿ ಬೆಲೆ ಕೆಜಿಗೆ 40 ರೂ. ಇತ್ತು. ಇದೀಗ 65 ರೂ.ಗೆ ಏರಿದೆ. ಇನ್ನು ದಪ್ಪ ಈರುಳ್ಳಿ ಬೆಲೆ ಸಹ 65ಕ್ಕೇರಿದೆ. ಬೀಟ್‌ರೂಟ್‌, ಆಲೂಗಡ್ಡೆ ಬೆಲೆಯೂ ಚೇತರಿಕೆ ಕಂಡಿದೆ. ಇನ್ನು ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌ ಬೆಳೆಗಳು ಮಣ್ಣಿನ ಒಳಗಡೆ ಇರುವಂಥವು. ಇವು ಮಳೆಯಿಂದ ಕೊಳೆತಿವೆ. ಜೊತೆಗೆ ಸಮರ್ಪಕ ಪೂರೈಕೆ ಇಲ್ಲದ ಕಾರಣಕ್ಕೆ ಅವುಗಳ ಬೆಲೆಯೂ ಏರುತ್ತಿದೆ. ಹೀರೇಕಾಯಿ, ಎಲೆಕೋಸು ಬೆಲೆಯೂ ಕೊಂಚ ಏರಿಕೆಯಾಗಿರುವುದು ರೈತರಲ್ಲಿ ಸಮಾಧಾನ ತಂದಿದೆ. ಆದರೆ, ಬೆಳೆ ಕಳೆದುಕೊಂಡ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ ಎಂಬುದನ್ನು ಮರೆಯುವಂತಿಲ್ಲ.

ಬೀನ್ಸ್‌, ಬದನೆಗೆ ಬಂಪರ್‌

ತರಕಾರಿ ಮಾರುಕಟ್ಟೆಯಲ್ಲಿಬೀನ್ಸ್‌ ಪೂರೈಕೆ ಕಡಿಮೆ ಇದ್ದು, ಕೆಜಿಗೆ 100- 115 ರೂ. ಮುಟ್ಟಿದೆ. ಇದೇ ರೀತಿ ಬದನೆಕಾಯಿ, ಹೀರೇಕಾಯಿ ಬೆಲೆ ಕೆಜಿಗೆ 80 ರೂ. ಅಧಿಕವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿಬೀನ್ಸ್‌, ಬದನೆಗೆ ಬಂಪರ್‌ ಬೆಲೆ ಬಂದಿದೆ. ಆದರೆ, ನಿರ್ದಿಷ್ಟ ಬೆಲೆ ಇಲ್ಲದ ಕಾರಣ ಯಾವ ಬೆಲೆ ಯಾವಾಗ ಬಿದ್ದು ಹೋಗುತ್ತದೆಯೋ ಎನ್ನುವ ಆತಂಕದಲ್ಲಿರೈತರು ಪ್ರತಿದಿನ ತಮ್ಮ ಹೊಲದಲ್ಲಿನ ತರಕಾರಿಯನ್ನು ಮಾರಾಟಕ್ಕೆ ತರುತ್ತಿದ್ದಾರೆ. 'ಮರಣ, ಮಾರಾಟ ಯಾರಿಗೂ ತಿಳಿಯಲ್ಲಬಿಡಿ' ಎನ್ನುತ್ತಾರೆ ತರಕಾರಿ ತಂದಿದ್ದ ರೈತ ರಾಮಪ್ಪ ಅಂಗಡಿ.

ರೈತ ಬೆಳೆದ ಬೆಳೆಗಳಿಗೆ ನಿರ್ದಿಷ್ಟ ಬೆಲೆ ಮಾರುಕಟ್ಟೆಯಲ್ಲಿಲಭ್ಯವಿಲ್ಲ. ಹೀಗಾಗಿ ರೈತ ತನ್ನ ಉತ್ಪನ್ನಗಳಿಗೆ ಹೆಚ್ಚು ಬೆಲೆ ಕಂಡಿದ್ದೇ ವಿರಳ. ಅದರಲ್ಲೂಲಾಭಕ್ಕಿಂತ ನಷ್ಟ ಕಂಡಿದ್ದೇ ಹೆಚ್ಚು, ಆದ್ದರಿಂದ ಸರಕಾರ ಪ್ರತಿವರ್ಷ ಬೆಳೆಗೆ ಅನುಗುಣವಾಗಿ ಒಂದು ನಿರ್ದಿಷ್ಟ ಧಾರಣೆಯನ್ನು ನಿಗದಿ ಮಾಡಬೇಕು ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ.

ಹಬ್ಬಕ್ಕೆ ಮತ್ತಷ್ಟು ಏರಿಕೆ?
ದಸರಾ ಹಾಗೂ ದೀಪಾವಳಿ ಹಬ್ಬಕ್ಕೆ ಹೆಚ್ಚು ತರಕಾರಿ ಮಾರಾಟವಾಗುತ್ತದೆ ಎಂದು ರೈತರು ತರಕಾರಿ ಬೆಳೆದಿರುತ್ತಾರೆ. ಆದರೆ, ಮಳೆ ರೈತರ ಆಶೆಗೆ ತಣ್ಣೀರೆರಚಿದೆ. ಇದರಿಂದ ಮಾರುಕಟ್ಟೆಗೆ ಬರುವ ತರಕಾರಿ ಪ್ರಮಾಣ ಕಡಿಮೆಯಾಗಿ, ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.

ತರಕಾರಿ ಧಾರಣೆ( ತಲಾ ಕೆಜಿಗೆ)
ಟೊಮ್ಯಾಟೊ- 40 ರೂ.
ಗಜ್ಜರಿ- 60 ರೂ.
ದಪ್ಪ ಈರುಳ್ಳಿ- 70 ರೂ.
ಹಿರೇಕಾಯಿ- 80 ರೂ.
ಎಲೆಕೋಸು- 40 ರೂ.
ಬೀಟ್‌ರೂಟ್‌- 80 ರೂ.
ಬೀನ್ಸ್‌- 95 ರೂ.
ಸಣ್ಣ ಈರುಳ್ಳಿ- 50 ರೂ.
ಮೆಣಸಿನಕಾಯಿ- 90 ರೂ.
ಡೊಣ್ಣಮೆಣಸಿನಕಾಯಿ- 80 ರೂ.
ಸವತೇಕಾಯಿ- 80 ರೂ.
ಬದನೆಕಾಯಿ- 80 ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ