ಆ್ಯಪ್ನಗರ

ಚಿಗರಿಯಲ್ಲಿ ಸಂಚರಿಸಿದ ಉಪರಾಷ್ಟ್ರಪತಿ

ಹುಬ್ಬಳ್ಳಿ: ಚಿಗರಿ ಬಸ್‌ನಲ್ಲಿಯೇ ಸಂಚರಿಸಿ ಇಲ್ಲಿಯ ನವನಗರ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹು-ಧಾ ತ್ವರಿತ ಸಾರಿಗೆ ವ್ಯವಸ್ಥೆ (ಎಚ್‌ಡಿಬಿಆರ್‌ಟಿಎಸ್‌), ಬಸ್‌ ನಿಲ್ದಾಣ ಮತ್ತು ಕಾರಿಡಾರ್‌ ವೀಕ್ಷಣೆ ಮಾಡಿದರು.

Vijaya Karnataka 3 Feb 2020, 5:00 am
ಹುಬ್ಬಳ್ಳಿ: ಚಿಗರಿ ಬಸ್‌ನಲ್ಲಿಯೇ ಸಂಚರಿಸಿ ಇಲ್ಲಿಯ ನವನಗರ ಬಸ್‌ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹು-ಧಾ ತ್ವರಿತ ಸಾರಿಗೆ ವ್ಯವಸ್ಥೆ (ಎಚ್‌ಡಿಬಿಆರ್‌ಟಿಎಸ್‌), ಬಸ್‌ ನಿಲ್ದಾಣ ಮತ್ತು ಕಾರಿಡಾರ್‌ ವೀಕ್ಷಣೆ ಮಾಡಿದರು.
Vijaya Karnataka Web 2 KALMESH -1_21
ಹುಬ್ಬಳ್ಳಿ ನವನಗರ ಬಸ್‌ ನಿಲ್ದಾಣವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾನುವಾರ ಉದ್ಘಾಟಿಸಿದರು.


ಭಾನುವಾರ ಇಲ್ಲಿಯ ಹೊಸೂರು ಬಸ್‌ ನಿಲ್ದಾಣದಿಂದ ಚಿಗರಿ ಬಸ್‌ನಲ್ಲಿನವನಗರದ ಬಸ್‌ ನಿಲ್ದಾಣದ ವರೆಗೆ ಆಗಮಿಸಿದ ಉಪರಾಷ್ಟ್ರಪತಿಗಳು, ಕಾರಿಡಾರ್‌ ಮತ್ತು ಸಾರಿಗೆ ವ್ಯವಸ್ಥೆ ಅವಲೋಕಿಸಿದರು. ಈ ವೇಳೆ ಬಿಆರ್‌ಟಿಎಸ್‌ ಎಂ.ಡಿ.ರಾಜೇಂದ್ರ ಚೋಳನ್‌ ಸಾರಿಗೆ ವ್ಯವಸ್ಥೆ ಬಗ್ಗೆ ವಿವರಣೆ ನೀಡಿದರು.

ಚಿಗರಿ ಬಸ್‌ನಲ್ಲಿಯೇ ನವನಗರಕ್ಕೆ ಬಂದು ಇಲ್ಲಿಯ ಬಸ್‌ ನಿಲ್ದಾಣವನ್ನು ಉದ್ಘಾಟಿಸಿದ ಅವರು, ಸ್ಮಾರ್ಟ್‌ ಕಾರ್ಡ್‌ ಬಳಕೆ ಮೂಲಕ ನಿಲ್ದಾಣದ ಹೊರಗೆ ಬಂದು ಲಿಫ್ಟ್‌ ಮೂಲಕ ಫ್ಲೈಓವರ್‌ಗೆ ತೆರಳಿದರು. ಈ ವೇಳೆ ಬಿಆರ್‌ಟಿಎಸ್‌ ಅಧಿಕಾರಿಗಳು ಬಸ್‌ ನಿಲ್ದಾಣದ ವಿವರಣೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌, ಡಿಸಿಎಂ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಶಾಸಕರಾದ ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಶಂಕರಪಾಟೀಲ ಮುನೇನಕೊಪ್ಪ, ಪ್ರಸಾದ ಅಬ್ಬಯ್ಯ, ಎಸ್‌.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ದೀಪಾ, ವಿಎಸ್‌ವಿ ಪ್ರಸಾದ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ