ಆ್ಯಪ್ನಗರ

ಶಾಸಕ ಅಬ್ಬಯ್ಯರಿಂದ ಐನಾಪುರ ಕೆರೆ ಪ್ರದೇಶ ವೀಕ್ಷ ಣೆ

ಹುಬ್ಬಳ್ಳಿ : ಸರಹದ್ದಿನ ಗೊಂದಲದಿಂದಾಗಿ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೇ ನನೆಗುದಿಗೆ ಬಿದ್ದಿದ್ದ ಗದಗ ರಸ್ತೆಯ ಐನಾಪುರ ಕೆರೆ ಪ್ರದೇಶಕ್ಕೆ ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಕಂದಾಯ, ನಗರಾಭಿವೃದ್ಧಿ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 21 Aug 2019, 5:00 am
ಹುಬ್ಬಳ್ಳಿ : ಸರಹದ್ದಿನ ಗೊಂದಲದಿಂದಾಗಿ ಅನೇಕ ವರ್ಷಗಳಿಂದ ಅಭಿವೃದ್ಧಿ ಕಾಣದೇ ನನೆಗುದಿಗೆ ಬಿದ್ದಿದ್ದ ಗದಗ ರಸ್ತೆಯ ಐನಾಪುರ ಕೆರೆ ಪ್ರದೇಶಕ್ಕೆ ಮಂಗಳವಾರ ಶಾಸಕ ಪ್ರಸಾದ ಅಬ್ಬಯ್ಯ ಅವರು ಕಂದಾಯ, ನಗರಾಭಿವೃದ್ಧಿ ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web DRW-20 NADAF 3


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಐನಾಪುರ ಕೆರೆ ಭಾಗದ ಪ್ರದೇಶ ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದರ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿಯಿಲ್ಲ. ಇದರಿಂದ ಕೆರೆ ಹಾಗೂ ಅದರ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲು ವಿಳಂಬವಾಗುತ್ತಿದೆ. ಕೂಡಲೇ ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳು ಒಟ್ಟಾಗಿ ಸರ್ವೆ ನಡೆಸಿ ಸರಹದ್ದು ಗುರುತಿಸುವಂತೆ ಸೂಚಿಸಿದರು.

ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಐನಾಪುರ ಕೆರೆ ಭರ್ತಿಯಾಗಿದೆ. ಈ ಹಿಂದೆ ಇಲ್ಲಿ ನಿರ್ಮಿಸಿದ ರಸ್ತೆ, ಚೆಕ್‌ ಡ್ಯಾಂನಿಂದಾಗಿ ಸುತ್ತಲಿನ ರೈತರಿಗೆ ಅನುಕೂಲವಾಗಿದೆ. ಆದರೆ, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸರಹದ್ದಿನ ಸಮಸ್ಯೆ ಎದುರಾಗಿದೆ. ಕೂಡಲೇ ಅಧಿಕಾರಿಗಳು ಸರಹದ್ದು ಗುರುತಿಸಿ ಕೊಟ್ಟಲ್ಲಿ ಕೆರೆಯೊಂದಿಗೆ ಅದನ್ನು ಸಂಪರ್ಕಿಸುವ ರಸ್ತೆಯನ್ನೂ ಅಭಿವೃದ್ಧಿಪಡಿಸಿ ರೈತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ತಹಸೀಲ್ದಾರ್‌ ಶಶಿಧರ್‌ ಮಾಡ್ಯಾಳ, ಭೂ ಮಾಪನಾ ಇಲಾಖೆ ಅಧಿಕಾರಿ ಜೋಶಿ, ಪಾಲಿಕೆ ಅಧಿಕಾರಿಗಳಾದ ರಮೇಶ ಚವ್ಹಾಣ್‌, ಗಣಾಚಾರಿ, ಹುಡಾದ ಎಂ. ರಾಜಶೇಖರ್‌., ಎಸ್‌.ಬಿ. ಗುಂಜಾಳ, ಆರ್‌.ಜಿ. ಪಾಟೀಲ, ಸಣ್ಣ ನೀರಾವರಿ ಇಲಾಖೆಯ ಆರ್‌.ಪಿ. ಅಣ್ಣಿಗೇರಿ, ಮಾಜಿ ಸದಸ್ಯರಾದ ಅಲ್ತಾಫ್‌ ಕಿತ್ತೂರು, ವಿಜನಗೌಡ ಪಾಟೀಲ, ರೈತ ಸಂಘದ ಪರುತಪ್ಪ ಬಳಗಣ್ಣವರ, ಎಂ.ಎಂ. ಪಾಟೀಲ, ವಿರೂಪಾಕ್ಷ ಗೌಡ ಪಾಟೀಲ, ನಿಂಗನಗೌಡ ಪಾಟೀಲ, ಕೊಟ್ರಗೌಡ ಪಾಟೀಲ, ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ