ಆ್ಯಪ್ನಗರ

ಗ್ರಾಮ ಸಂಪರ್ಕ,ಗ್ರಾಮ ವಾಹಿನಿ ಕಾರ್ಯಕ್ರಮ ಆರಂಭ

ಧಾರವಾಡ : ಸರಕಾರದ ಜನಪರ ಯೋಜನೆಗಳ ಕುರಿತು ಜನ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡಿರುವ ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.

Vijaya Karnataka 10 Jul 2019, 5:00 am
ಧಾರವಾಡ : ಸರಕಾರದ ಜನಪರ ಯೋಜನೆಗಳ ಕುರಿತು ಜನ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡಿರುವ ಗ್ರಾಮ ಸಂಪರ್ಕ ಮತ್ತು ಗ್ರಾಮ ವಾಹಿನಿ ಕಾರ್ಯಕ್ರಮ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.
Vijaya Karnataka Web village connectivity village channel initiative
ಗ್ರಾಮ ಸಂಪರ್ಕ,ಗ್ರಾಮ ವಾಹಿನಿ ಕಾರ್ಯಕ್ರಮ ಆರಂಭ


ಕುಂದಗೋಳ ತಾಲೂಕಿನ ಹರ್ಲಾಪೂರ ಗ್ರಾಮದ ಎಸ್‌.ಎಸ್‌. ಹೀರೆಮಠ ನೇತೃತ್ವದ ಸಿ.ವಾಯ್‌.ಸಿ.ಡಿ ತಂಡದ ಕಲಾವಿದರು ಬೀದಿನಾಟಕಗಳನ್ನು ಹಾಗೂ ಸುಲ್ತಾನಪುರ ಗ್ರಾಮದ ಚಂದ್ರಶೇಖರ ಕಾಳೆ ನೇತೃತ್ವದ ಜನಪದ ಫೌಂಡೇಶನ್‌ ತಂಡದ ಕಲಾವಿದರು ಸಂಗೀತ ಕಾರ್ಯಕ್ರಮವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

ರೈತ ಬಂಧು-ಕೃಷಿ, ಸಾಲಮನ್ನಾ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ, ಬೀದಿ ಬದಿ ವ್ಯಾಪಾರಿಗಳ ಶೋಷಣೆ ತಪ್ಪಿಸಲು ಬಡವರ ಬಂಧು ಕಿರುಸಾಲ ಯೋಜನೆ, ಸ್ವಸಹಾಯ ಗುಂಪುಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ವೃದ್ಧಿಗೊಳಿಸಲು ಕಾಯಕ ಯೋಜನೆ, ಆಯುಷ್ಮಾನ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ, ಎಸ್‌.ಸಿ.ಎಸ್‌.ಪಿ/ಟಿ.ಎಸ್‌.ಪಿ, ಹಿಂದುಳಿದ ವರ್ಗಗಳ ಕಲ್ಯಾಣ, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ, ವಸತಿ, ಜಲಧಾರೆ ಯೋಜನೆ ಮತ್ತಿತರ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

ಜುಲೈ 8 ರಿಂದ 17ರವರೆಗೂ ಜಿಲ್ಲೆಯಾದ್ಯಂತ ಬೀದಿ ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಯರಿಕೊಪ್ಪ, ಕಣವಿಹೊನ್ನಾಪೂರ, ಬೆಳ್ಳಿಗಟ್ಟಿ, ಮನಗುಂಡಿ ಗ್ರಾಮಗಳಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಜುಲೈ 10 ರಂದು ಬೆಳಗ್ಗೆ ನಾಯ್ಕನಹೂಲಿಕಟ್ಟಿ, ಸಂಜೆ ಮನಸೂರ, 11 ರಂದು ಬೆಳಗ್ಗೆ ಬೆನಕನಕಟ್ಟಿ, ಸಂಜೆ ನಿಗದಿ, 12 ರಂದು ಬೆಳಗ್ಗೆ ಕ್ಯಾರಕೊಪ್ಪ, ಸಂಜೆ ಸಲಕಿನಕೊಪ್ಪ, 13 ರಂದು ಬೆಳಗ್ಗೆ ಮುರಕಟ್ಟಿ, ಸಂಜೆ ದೇವರಹುಬ್ಬಳ್ಳಿ, 14 ರಂದು ಬೆಳಗ್ಗೆ ಅಂಬ್ಲಿಕೊಪ್ಪ, ಸಂಜೆ ಹಳ್ಳಿಗೇರಿ, 15 ರಂದು ಬೆಳಗ್ಗೆ ಹೊಲ್ತಿಕೋಟಿ, ಸಂಜೆ ಮಾವಿನಕೊಪ್ಪ, 16 ರಂದು ಬೆಳಗ್ಗೆ ದೇವಗಿರಿ, ಸಂಜೆ ಲಾಳಗಟ್ಟಿ, ಹಾಗೂ 17 ರಂದು ಬೆಳಗ್ಗೆ ಹಿರೇಮಲ್ಲಿಗವಾಡ, ಸಂಜೆ ಚಿಕ್ಕಮಲ್ಲಿಗವಾಡ ಗ್ರಾಮಗಳಲ್ಲಿ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.

ಸರಕಾರದ ಕಾರ್ಯಕ್ರಮಗಳ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆಯಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ