ಹುಬ್ಬಳ್ಳಿ: ಮಾರಾಕ ಕೊರೊನಾ ವೈರಸ್ಗೆ ಸಾಮಾಜಿಕ ಅಂತರ ಪರಿಣಾಮಕಾರಿ ಮದ್ದು ಎಂಬುದನ್ನು ಮನಗಂಡಿರುವ ರಾಜ್ಯದ ಜನತೆ, ಪರಸ್ಪರ ಅಂತರ ಕಾಯ್ದುಕೊಳ್ಳಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಸ್ವಇಚ್ಛೆಯಿಂದ ಕೈಗೊಳ್ಳುತ್ತಿದ್ದಾರೆ.
ಅಲ್ಲದೇ ಜಿಲ್ಲಾವಾರು ಸ್ಥಳಿಯ ಆಡಳಿತಗಳೂ ಕೂಡ ಬಾಕ್ಸ್ ಮಾರ್ಕಿಂಗ್ ಹಾಗೂ ಇನ್ನಿತರ ಮಾರ್ಗಗಳ ಮೂಲಕ ಜನರನ್ನು ಪರಸ್ಪರ ದೂರ ಮಾಡುವಲ್ಲಿ ಯಶಸ್ವಿಯಾಗಿವೆ.
ಫಾಲೋ ದಿ ಸರ್ಕಲ್: ಹುಬ್ಬಳ್ಳಿಯಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಕಮಾಲ್!
ಅದರಂತೆ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಹೊರವಲಯದ ಅಗ್ರಹಾರ ತಿಮ್ಮಸಾಗರ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಅನ್ಯರ ಪ್ರವೇಶದ ಮೇಲೆ ನಿಯಂತ್ರಣ ಹೇರಿ ಬೇಲಿಯ ದಿಗ್ಬಂಧನ ಹಾಕಿದ್ದಾರೆ.
ಅಂಚಟಗೇರಿಯಿಂದ ತಿಮ್ಮಸಾಗರಕ್ಕೆ ಬರುವ ಮತ್ತು ಹುಬ್ಬಳ್ಳಿ ನೇಕಾರ ನಗರದಿಂದ ಬರುವ ರಸ್ತೆಗಳಿಗೆ ಬೇಲಿ ಹಾಕಿ, ಎರಡೂ ಬದಿಯ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಪ್ರಧಾನಿ ಮೋದಿಯ ಕರ್ಫ್ಯೂ ಕರೆಗೆ ಸರ್ವರೂ ಬೆಂಬಲಿಸಿ: ಜಗದೀಶ್ ಶೆಟ್ಟರ್
ಕೋವಿಡ್-19 ಕಳವಳದಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಯಾರೂ ಬರದಂತೆ ಹಾಗೂ ಊರಿನಿಂದ ಯಾರೂ ಹೊರ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮದ ಹಿರಿಯರು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ ಜಿಲ್ಲಾವಾರು ಸ್ಥಳಿಯ ಆಡಳಿತಗಳೂ ಕೂಡ ಬಾಕ್ಸ್ ಮಾರ್ಕಿಂಗ್ ಹಾಗೂ ಇನ್ನಿತರ ಮಾರ್ಗಗಳ ಮೂಲಕ ಜನರನ್ನು ಪರಸ್ಪರ ದೂರ ಮಾಡುವಲ್ಲಿ ಯಶಸ್ವಿಯಾಗಿವೆ.
ಫಾಲೋ ದಿ ಸರ್ಕಲ್: ಹುಬ್ಬಳ್ಳಿಯಲ್ಲಿ ಸೋಶಿಯಲ್ ಡಿಸ್ಟನ್ಸಿಂಗ್ ಕಮಾಲ್!
ಅದರಂತೆ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಹೊರವಲಯದ ಅಗ್ರಹಾರ ತಿಮ್ಮಸಾಗರ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಅನ್ಯರ ಪ್ರವೇಶದ ಮೇಲೆ ನಿಯಂತ್ರಣ ಹೇರಿ ಬೇಲಿಯ ದಿಗ್ಬಂಧನ ಹಾಕಿದ್ದಾರೆ.
ಅಂಚಟಗೇರಿಯಿಂದ ತಿಮ್ಮಸಾಗರಕ್ಕೆ ಬರುವ ಮತ್ತು ಹುಬ್ಬಳ್ಳಿ ನೇಕಾರ ನಗರದಿಂದ ಬರುವ ರಸ್ತೆಗಳಿಗೆ ಬೇಲಿ ಹಾಕಿ, ಎರಡೂ ಬದಿಯ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಪ್ರಧಾನಿ ಮೋದಿಯ ಕರ್ಫ್ಯೂ ಕರೆಗೆ ಸರ್ವರೂ ಬೆಂಬಲಿಸಿ: ಜಗದೀಶ್ ಶೆಟ್ಟರ್
ಕೋವಿಡ್-19 ಕಳವಳದಿಂದ ಈ ಕ್ರಮ ಕೈಗೊಂಡಿದ್ದು, ಊರಿಗೆ ಯಾರೂ ಬರದಂತೆ ಹಾಗೂ ಊರಿನಿಂದ ಯಾರೂ ಹೊರ ಹೋಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮದ ಹಿರಿಯರು ಸ್ಪಷ್ಟನೆ ನೀಡಿದ್ದಾರೆ.